ದೊಡ್ಡಬಳ್ಳಾಪುರ: ಪ್ರೇಮಿಗಾಗಿ ಇಬ್ಬರು ಯುವಕರ(ಮಾಜಿ ಹಾಗೂ ಹಾಲಿ) ನಡುವೆ ನಗರದ ಶಾಂತಿನಗರ ಭಾರ್ಗವಿ ಬಾರ್ನಲ್ಲಿ ಸಿನಿಮೀಯ ರೀತಿಯಲ್ಲಿ ಮಚ್ಚು, ಲಾಂಗ್ಳಿಂದ ನಡೆದ ಹಲ್ಲೆ ಪ್ರಕರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ಸೋಮಶೇಖರ ಮೇಲೆ ನಾಹೀದ್ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲವು ದಿನಗಳಿಂದ ಯುವತಿಯೊಬ್ಬಳನ್ನು ಸೋಮಶೇಖರ್ ಪ್ರೀತಿಸುತ್ತಿದ್ದನು. ಬಳಿಕ ಯುವತಿ ಸೋಮಶೇಖರ್ ನನ್ನು ಬಿಟ್ಟು ನಾಹೀದ್ ಎಂಬಾತನ ಜತೆ ಗೆಳೆತನ ಮಾಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಸೋಮಶೇಖರ್, ಯುವತಿಯನ್ನು ಪ್ರಶ್ನಿಸಿದಕ್ಕೆ ನಾಹೀದ್ ಗುಂಪು ಕಟ್ಟಿಕೊಂಡು ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಬಾರ್ನಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗುಂಪುಗಳ ನಡುವಿನ ಘರ್ಷಣೆ ಕಂಡು ಜನರು ಬೆಚ್ಚಿ ಬಿದ್ದಿದ್ದು. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ…
ನಾನು ಎರಡು ವರ್ಷಗಳಿಂದ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದೆ. ಕಳೆದ ಮೂರು ತಿಂಗಳಿಂದೆ ಆ ಯುವತಿ ನನ್ನ ಬಿಟ್ಟು ನಾಹಿದ್ ನನ್ನು ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ದಳು. ಕಳೆದ ಒಂದು ತಿಂಗಳಿಂದೆ ಆ ಯುವತಿ ನನಗೆ ಫೋನ್ ಮಾಡಿ ನಿನ್ನ ಮದುವೆಯಾಗಲೂ ಇಷ್ಟ ಇಲ್ಲ ನೀನು ಯಾರನ್ನಾದರೂ ನೋಡಿಕೋ ಎಂದು ಹೇಳಿದ್ದು ನಾನು ಸಹ ಅದಕ್ಕೆ ಒಪ್ಪಿಕೊಂಡು ನನ್ನ ಪಾಡಿಗೆ ನಾನು ಸುಮ್ಮನಾಗಿದ್ದೆ.
ಈಗಿದ್ದಾಗ ಏ.2ರ ಸಂಜೆ 6:30ರಲ್ಲಿ ನಾನು ನನ್ನ ಸ್ನೇಹಿತಿ ಮನೆಗೆ ಹೋಗುವಾಗ ನಾಹಿದ್ ನನ್ನ ಮೇಲೆ ಹಲ್ಲೆ ನಡೆಸಲು ಬಂದಾಗ ಆಗ ನಾನು ಅಲ್ಲೇ ಇದ್ದ ಬಾರ್ ಒಳಗೆ ಹೋದೆ. ಆದರೂ ಅವರು ನನ್ನನ್ನು ಬಿಡದೇ ನಿನಗೆ ನಾನು ಪ್ರೀತಿಸುವ ಹುಡುಗಿನೇ ಬೇಕೆನೋ ಎಂದು ಅವಾಚ್ಯ ಶಬ್ದಗಳಿಂದ ಬೈಯು, ಹಲ್ಲೆ ನಡೆಸಿದ್ದಾರೆ ಎಂದು ಸೋಮಶೇಖರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು.…
ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್…
ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ…
ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣ ಅಪರಾಧಿ…
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನ ಕ್ಷಣ…