Categories: Crime

ಪ್ರೀತಿ, ಪ್ರೇಮ, ಸೆಕ್ಸ್, ದೋಖಾ….‌ನ್ಯಾಯಕ್ಕಾಗಿ ನೊಂದ ಯುವತಿ ಕಣ್ಣೀರು

ಚಿತ್ರದುರ್ಗ: ಪ್ರೀತಿಸಿ ಮದುವೆ ಆಗ್ತೀನಿ ಅಂತ ಹೇಳಿದ್ದ ಪ್ರಿಯಕರ ಮಂಚ ಏರಿ ಆಸೇ ತೀರಿಸ್ಕಂಡಿದ್ದ. ಏಳು ವರ್ಷ ದೇವಸ್ಥಾನ, ಸಿನಿಮಾ ಪಾರ್ಕ್ ಅಂತ ಸುತ್ತಿಸಿದ್ದ. ಆದರೆ ಈಗ ಆ ಯುವತಿಗೆ ಚರ್ಮ ಕಾಯಿಲೆ ನೆಪ ಹೇಳಿ ಬೇರೆ ಮದುವೆ ಆಗಿ ಮೋಸ ಮಾಡಿದ್ದಾನಂತೆ.

ಮೋಸಗಾರ ಪ್ರಿಕರನ ವಿರುದ್ದ FIR ದಾಖಲಿಸಿರುವ ಯುವತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಯುವತಿ ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ದ ಹೋರಾಟಕ್ಕೆ ಪೋಷಕರು ನಿಂತಿದ್ದಾರೆ.

ಬೇರೇಬ್ಬ ಯುವತಿ ಜೊತೆ ಮದುವೆ ಆಗಿರುವ ಮೋಸಗಾರ ಪ್ರಿಯಕರ. ಈ ಸುದ್ದಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ. ಹೀಗೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪರಿತಪಿಸುತ್ತಿರಿವ ಯುವತಿ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮೇನಹಳ್ಳಿ ನಿವಾಸಿ. ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ, ಹುಟ್ಟಿನಿಂದಲೂ ತೊನ್ನು ಸಮಸ್ಯೆಯಿಂದ ಬಳಲುತ್ತಿದ್ದಳು. ಇಂಥ ಅಮಾಯಕ ಹುಡುಗಿಗೆ ಮದುವೆ ಆಸೆ ತೋರಿಸಿದ್ದ ಅದೇ ಊರಿನ ಯುವಕ ಸತೀಶ್ ಪ್ರೇಮದ ಬಲೆಗೆ ಬೀಳಿಸಿದ್ದ. ಕಳೆದ ಏಳು ವರ್ಷಗಳಿಂದ ಪ್ರೀತಿ ಮಾಡುವೆ ಎಂದು ನಂಬಿಸಿದ್ದ. ಪಾರ್ಕ್, ಸಿನಿಮಾ ಅಂತಾ ಎಲ್ಲಾಕಡೆ ಸುತ್ತಿಸಿದ್ದಮ ಇನ್ನೆನ್ನೂ ನನ್ನ ಮದುವೆ ಆಗಿಯೇ ಬಿಟ್ಟ ಎಂದು ಭಾವಿಸಿದ್ದ ಯುವತಿ ರಂಜಿತ ತನ್ನ ದೇಹವನ್ನೂ ಕೂಡಾ ಸತೀಶ್ ಗೆ ಅರ್ಪಿಸಿದ್ದಳಂತೆ.

ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಹಾಗಾಗ ಊರಿಗೆ ಬಂದಾಗ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ದನಂತೆ. ಪಾಪಿ ಪ್ರೇಮಿ ಸತೀಶನ ಕಾಮದಾಸೆಗೆ ಬಲಿಯಾಗಿದ್ದ ಯುವತಿ, ಗರ್ಭಿಣಿ ಆಗಿದ್ದಳಂತೆ. ಆದ್ರೆ ಜಾಬ್ ಆಗುವವರೆಗೂ ಮಗು ಬೇಡ ಎಂದು ಪುಸಲಾಯಿಸಿದ್ದ ಸತೀಶ್ ಮಾತ್ರೆ ಕೊಟ್ಟು ಅಭಾರ್ಷನ್ ಮಾಡಿಸಿ ಎಸ್ಕೇಪ್ ಆಗಿದ್ದನಂತೆ.

ಇದೀಗ ಯುವತಿಗೆ ಚರ್ಮದ ಕಾಯಿಲೆ ಇದೆ ಎಂದು ಮದುವೆ ಆಗಲು ನಿರಾಕರಿಸಿ ಕೈಕೊಟ್ಟಿದ್ದಾನೆ. ಅಲ್ಲದೆ ಈಗಾಗಲೇ ಬೇರೆ ಯುವತಿ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದಾನೆ. ಈಗ ಮದುವೆ ಕನಸು ಕಟ್ಟಿಕೊಂಡಿದ್ದ ಪ್ರೀಯತಮೆಗೆ ಬರಸಿಡಿಲು ಬಡಿದಂತಾಗಿದೆ.

ಇನ್ನೂ ಲವ್ ಹೆಸರಲ್ಲಿ ದೋಖಾ ಮಾಡಿರುವ ಪ್ರೀಯಕರ ಸತೀಶ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ . ಬೇರೆ ಹುಡ್ಗಿ ಜೊತೆ ಸತೀಶ ಮದುವೆ ಆಗಿರೋ ಸುದ್ದಿ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ವಂಚಕ ಸತೀಶ್ ವಿರುದ್ದ ನೊಂದ ಯುವತಿ ದೂರು ದಾಖಲು ಮಾಡಿದ್ದಾಳೆ. ಆದ್ರೆ ಇದುವರೆಗೂ ಪೊಲೀಸ್ ಆರೋಪಿಯನ್ನ ಪತ್ತೆ ಮಾಡಿಲ್ಲ. ಇದ್ರಿಂದ ಇನ್ನಷ್ಠು ನೊಂದಿರುವ ಯುವತಿ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಅವರನ್ನ ಭೇಟಿ ಮಾಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾಳೆ.

ಈ ಬಗ್ಗೆ ಮಾತ್ನಾಡಿರುವ ಯುವತಿ ತಾಯಿ, ನನ್ನ ಮಗಳಿಗೆ ಆತ ತಾಳಿ ಕಟ್ಟಲಿ, ನಾನೇ ಮಗಳನ್ನ ಸಾಕುತ್ತೇನೆ ಎಂದು ಒತ್ತಾಯಿಸಿದ್ದಾಳೆ. ಒಟ್ಟಾರೆ ಸತೀಶ ಅನ್ನೋ ಪಾಪಿ ಮದುವೆ ಆಗುತ್ತೇನೆಂದು ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಂಡು ಕೈಕೊಟ್ಟಿದ್ದಾನೆ. ತೊನ್ನು ಕಾಯಿಲೆಯಿಂದ ಮದುವೆ ಬೇಡ ಎಂದು ಕೈ ಎತ್ತಿದ್ದಾನೆ. ಆದ್ರೆ ಇತ್ತ ಪ್ರೀಯಕರನೇ ಜೀವ ಎಂದು ಭಾವಿಸಿದ್ದ ಯುವತಿಗೆ ಬರಸಿಡಿಲು ಬಡಿದಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಇನ್ನಾದ್ರು ಚಿತ್ರಹಳ್ಳಿ ಗೇಟ್ ಪೊಲೀಸರು ಕಾಮ ಪಿಶಾಚಿಯನ್ನ ಬಂಧಿಸಿ ನೊಂದ ಯುವತಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ…..

Ramesh Babu

Journalist

Recent Posts

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

30 minutes ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

2 hours ago

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

7 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

9 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

12 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

1 day ago