Categories: Crime

ಪ್ರೀತಿ, ಪ್ರೇಮ, ಸೆಕ್ಸ್, ದೋಖಾ….‌ನ್ಯಾಯಕ್ಕಾಗಿ ನೊಂದ ಯುವತಿ ಕಣ್ಣೀರು

ಚಿತ್ರದುರ್ಗ: ಪ್ರೀತಿಸಿ ಮದುವೆ ಆಗ್ತೀನಿ ಅಂತ ಹೇಳಿದ್ದ ಪ್ರಿಯಕರ ಮಂಚ ಏರಿ ಆಸೇ ತೀರಿಸ್ಕಂಡಿದ್ದ. ಏಳು ವರ್ಷ ದೇವಸ್ಥಾನ, ಸಿನಿಮಾ ಪಾರ್ಕ್ ಅಂತ ಸುತ್ತಿಸಿದ್ದ. ಆದರೆ ಈಗ ಆ ಯುವತಿಗೆ ಚರ್ಮ ಕಾಯಿಲೆ ನೆಪ ಹೇಳಿ ಬೇರೆ ಮದುವೆ ಆಗಿ ಮೋಸ ಮಾಡಿದ್ದಾನಂತೆ.

ಮೋಸಗಾರ ಪ್ರಿಕರನ ವಿರುದ್ದ FIR ದಾಖಲಿಸಿರುವ ಯುವತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಯುವತಿ ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ದ ಹೋರಾಟಕ್ಕೆ ಪೋಷಕರು ನಿಂತಿದ್ದಾರೆ.

ಬೇರೇಬ್ಬ ಯುವತಿ ಜೊತೆ ಮದುವೆ ಆಗಿರುವ ಮೋಸಗಾರ ಪ್ರಿಯಕರ. ಈ ಸುದ್ದಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ. ಹೀಗೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪರಿತಪಿಸುತ್ತಿರಿವ ಯುವತಿ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮೇನಹಳ್ಳಿ ನಿವಾಸಿ. ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ, ಹುಟ್ಟಿನಿಂದಲೂ ತೊನ್ನು ಸಮಸ್ಯೆಯಿಂದ ಬಳಲುತ್ತಿದ್ದಳು. ಇಂಥ ಅಮಾಯಕ ಹುಡುಗಿಗೆ ಮದುವೆ ಆಸೆ ತೋರಿಸಿದ್ದ ಅದೇ ಊರಿನ ಯುವಕ ಸತೀಶ್ ಪ್ರೇಮದ ಬಲೆಗೆ ಬೀಳಿಸಿದ್ದ. ಕಳೆದ ಏಳು ವರ್ಷಗಳಿಂದ ಪ್ರೀತಿ ಮಾಡುವೆ ಎಂದು ನಂಬಿಸಿದ್ದ. ಪಾರ್ಕ್, ಸಿನಿಮಾ ಅಂತಾ ಎಲ್ಲಾಕಡೆ ಸುತ್ತಿಸಿದ್ದಮ ಇನ್ನೆನ್ನೂ ನನ್ನ ಮದುವೆ ಆಗಿಯೇ ಬಿಟ್ಟ ಎಂದು ಭಾವಿಸಿದ್ದ ಯುವತಿ ರಂಜಿತ ತನ್ನ ದೇಹವನ್ನೂ ಕೂಡಾ ಸತೀಶ್ ಗೆ ಅರ್ಪಿಸಿದ್ದಳಂತೆ.

ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಹಾಗಾಗ ಊರಿಗೆ ಬಂದಾಗ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ದನಂತೆ. ಪಾಪಿ ಪ್ರೇಮಿ ಸತೀಶನ ಕಾಮದಾಸೆಗೆ ಬಲಿಯಾಗಿದ್ದ ಯುವತಿ, ಗರ್ಭಿಣಿ ಆಗಿದ್ದಳಂತೆ. ಆದ್ರೆ ಜಾಬ್ ಆಗುವವರೆಗೂ ಮಗು ಬೇಡ ಎಂದು ಪುಸಲಾಯಿಸಿದ್ದ ಸತೀಶ್ ಮಾತ್ರೆ ಕೊಟ್ಟು ಅಭಾರ್ಷನ್ ಮಾಡಿಸಿ ಎಸ್ಕೇಪ್ ಆಗಿದ್ದನಂತೆ.

ಇದೀಗ ಯುವತಿಗೆ ಚರ್ಮದ ಕಾಯಿಲೆ ಇದೆ ಎಂದು ಮದುವೆ ಆಗಲು ನಿರಾಕರಿಸಿ ಕೈಕೊಟ್ಟಿದ್ದಾನೆ. ಅಲ್ಲದೆ ಈಗಾಗಲೇ ಬೇರೆ ಯುವತಿ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದಾನೆ. ಈಗ ಮದುವೆ ಕನಸು ಕಟ್ಟಿಕೊಂಡಿದ್ದ ಪ್ರೀಯತಮೆಗೆ ಬರಸಿಡಿಲು ಬಡಿದಂತಾಗಿದೆ.

ಇನ್ನೂ ಲವ್ ಹೆಸರಲ್ಲಿ ದೋಖಾ ಮಾಡಿರುವ ಪ್ರೀಯಕರ ಸತೀಶ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ . ಬೇರೆ ಹುಡ್ಗಿ ಜೊತೆ ಸತೀಶ ಮದುವೆ ಆಗಿರೋ ಸುದ್ದಿ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ವಂಚಕ ಸತೀಶ್ ವಿರುದ್ದ ನೊಂದ ಯುವತಿ ದೂರು ದಾಖಲು ಮಾಡಿದ್ದಾಳೆ. ಆದ್ರೆ ಇದುವರೆಗೂ ಪೊಲೀಸ್ ಆರೋಪಿಯನ್ನ ಪತ್ತೆ ಮಾಡಿಲ್ಲ. ಇದ್ರಿಂದ ಇನ್ನಷ್ಠು ನೊಂದಿರುವ ಯುವತಿ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಅವರನ್ನ ಭೇಟಿ ಮಾಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾಳೆ.

ಈ ಬಗ್ಗೆ ಮಾತ್ನಾಡಿರುವ ಯುವತಿ ತಾಯಿ, ನನ್ನ ಮಗಳಿಗೆ ಆತ ತಾಳಿ ಕಟ್ಟಲಿ, ನಾನೇ ಮಗಳನ್ನ ಸಾಕುತ್ತೇನೆ ಎಂದು ಒತ್ತಾಯಿಸಿದ್ದಾಳೆ. ಒಟ್ಟಾರೆ ಸತೀಶ ಅನ್ನೋ ಪಾಪಿ ಮದುವೆ ಆಗುತ್ತೇನೆಂದು ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಂಡು ಕೈಕೊಟ್ಟಿದ್ದಾನೆ. ತೊನ್ನು ಕಾಯಿಲೆಯಿಂದ ಮದುವೆ ಬೇಡ ಎಂದು ಕೈ ಎತ್ತಿದ್ದಾನೆ. ಆದ್ರೆ ಇತ್ತ ಪ್ರೀಯಕರನೇ ಜೀವ ಎಂದು ಭಾವಿಸಿದ್ದ ಯುವತಿಗೆ ಬರಸಿಡಿಲು ಬಡಿದಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಇನ್ನಾದ್ರು ಚಿತ್ರಹಳ್ಳಿ ಗೇಟ್ ಪೊಲೀಸರು ಕಾಮ ಪಿಶಾಚಿಯನ್ನ ಬಂಧಿಸಿ ನೊಂದ ಯುವತಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ…..

Ramesh Babu

Journalist

Recent Posts

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

6 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

6 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

7 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

8 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

15 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

2 days ago