Categories: Crime

ಪ್ರೀತಿ, ಪ್ರೇಮ, ಸೆಕ್ಸ್, ದೋಖಾ….‌ನ್ಯಾಯಕ್ಕಾಗಿ ನೊಂದ ಯುವತಿ ಕಣ್ಣೀರು

ಚಿತ್ರದುರ್ಗ: ಪ್ರೀತಿಸಿ ಮದುವೆ ಆಗ್ತೀನಿ ಅಂತ ಹೇಳಿದ್ದ ಪ್ರಿಯಕರ ಮಂಚ ಏರಿ ಆಸೇ ತೀರಿಸ್ಕಂಡಿದ್ದ. ಏಳು ವರ್ಷ ದೇವಸ್ಥಾನ, ಸಿನಿಮಾ ಪಾರ್ಕ್ ಅಂತ ಸುತ್ತಿಸಿದ್ದ. ಆದರೆ ಈಗ ಆ ಯುವತಿಗೆ ಚರ್ಮ ಕಾಯಿಲೆ ನೆಪ ಹೇಳಿ ಬೇರೆ ಮದುವೆ ಆಗಿ ಮೋಸ ಮಾಡಿದ್ದಾನಂತೆ.

ಮೋಸಗಾರ ಪ್ರಿಕರನ ವಿರುದ್ದ FIR ದಾಖಲಿಸಿರುವ ಯುವತಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾಳೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಯುವತಿ ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ. ಮಗಳಿಗೆ ಆದ ಅನ್ಯಾಯದ ವಿರುದ್ದ ಹೋರಾಟಕ್ಕೆ ಪೋಷಕರು ನಿಂತಿದ್ದಾರೆ.

ಬೇರೇಬ್ಬ ಯುವತಿ ಜೊತೆ ಮದುವೆ ಆಗಿರುವ ಮೋಸಗಾರ ಪ್ರಿಯಕರ. ಈ ಸುದ್ದಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ. ಹೀಗೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪರಿತಪಿಸುತ್ತಿರಿವ ಯುವತಿ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ರಾಮೇನಹಳ್ಳಿ ನಿವಾಸಿ. ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ, ಹುಟ್ಟಿನಿಂದಲೂ ತೊನ್ನು ಸಮಸ್ಯೆಯಿಂದ ಬಳಲುತ್ತಿದ್ದಳು. ಇಂಥ ಅಮಾಯಕ ಹುಡುಗಿಗೆ ಮದುವೆ ಆಸೆ ತೋರಿಸಿದ್ದ ಅದೇ ಊರಿನ ಯುವಕ ಸತೀಶ್ ಪ್ರೇಮದ ಬಲೆಗೆ ಬೀಳಿಸಿದ್ದ. ಕಳೆದ ಏಳು ವರ್ಷಗಳಿಂದ ಪ್ರೀತಿ ಮಾಡುವೆ ಎಂದು ನಂಬಿಸಿದ್ದ. ಪಾರ್ಕ್, ಸಿನಿಮಾ ಅಂತಾ ಎಲ್ಲಾಕಡೆ ಸುತ್ತಿಸಿದ್ದಮ ಇನ್ನೆನ್ನೂ ನನ್ನ ಮದುವೆ ಆಗಿಯೇ ಬಿಟ್ಟ ಎಂದು ಭಾವಿಸಿದ್ದ ಯುವತಿ ರಂಜಿತ ತನ್ನ ದೇಹವನ್ನೂ ಕೂಡಾ ಸತೀಶ್ ಗೆ ಅರ್ಪಿಸಿದ್ದಳಂತೆ.

ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಹಾಗಾಗ ಊರಿಗೆ ಬಂದಾಗ ಆಕೆಯನ್ನ ಲೈಂಗಿಕವಾಗಿ ಬಳಸಿಕೊಳ್ತಿದ್ದನಂತೆ. ಪಾಪಿ ಪ್ರೇಮಿ ಸತೀಶನ ಕಾಮದಾಸೆಗೆ ಬಲಿಯಾಗಿದ್ದ ಯುವತಿ, ಗರ್ಭಿಣಿ ಆಗಿದ್ದಳಂತೆ. ಆದ್ರೆ ಜಾಬ್ ಆಗುವವರೆಗೂ ಮಗು ಬೇಡ ಎಂದು ಪುಸಲಾಯಿಸಿದ್ದ ಸತೀಶ್ ಮಾತ್ರೆ ಕೊಟ್ಟು ಅಭಾರ್ಷನ್ ಮಾಡಿಸಿ ಎಸ್ಕೇಪ್ ಆಗಿದ್ದನಂತೆ.

ಇದೀಗ ಯುವತಿಗೆ ಚರ್ಮದ ಕಾಯಿಲೆ ಇದೆ ಎಂದು ಮದುವೆ ಆಗಲು ನಿರಾಕರಿಸಿ ಕೈಕೊಟ್ಟಿದ್ದಾನೆ. ಅಲ್ಲದೆ ಈಗಾಗಲೇ ಬೇರೆ ಯುವತಿ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದಾನೆ. ಈಗ ಮದುವೆ ಕನಸು ಕಟ್ಟಿಕೊಂಡಿದ್ದ ಪ್ರೀಯತಮೆಗೆ ಬರಸಿಡಿಲು ಬಡಿದಂತಾಗಿದೆ.

ಇನ್ನೂ ಲವ್ ಹೆಸರಲ್ಲಿ ದೋಖಾ ಮಾಡಿರುವ ಪ್ರೀಯಕರ ಸತೀಶ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ . ಬೇರೆ ಹುಡ್ಗಿ ಜೊತೆ ಸತೀಶ ಮದುವೆ ಆಗಿರೋ ಸುದ್ದಿ ತಿಳಿದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ವಂಚಕ ಸತೀಶ್ ವಿರುದ್ದ ನೊಂದ ಯುವತಿ ದೂರು ದಾಖಲು ಮಾಡಿದ್ದಾಳೆ. ಆದ್ರೆ ಇದುವರೆಗೂ ಪೊಲೀಸ್ ಆರೋಪಿಯನ್ನ ಪತ್ತೆ ಮಾಡಿಲ್ಲ. ಇದ್ರಿಂದ ಇನ್ನಷ್ಠು ನೊಂದಿರುವ ಯುವತಿ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಅವರನ್ನ ಭೇಟಿ ಮಾಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾಳೆ.

ಈ ಬಗ್ಗೆ ಮಾತ್ನಾಡಿರುವ ಯುವತಿ ತಾಯಿ, ನನ್ನ ಮಗಳಿಗೆ ಆತ ತಾಳಿ ಕಟ್ಟಲಿ, ನಾನೇ ಮಗಳನ್ನ ಸಾಕುತ್ತೇನೆ ಎಂದು ಒತ್ತಾಯಿಸಿದ್ದಾಳೆ. ಒಟ್ಟಾರೆ ಸತೀಶ ಅನ್ನೋ ಪಾಪಿ ಮದುವೆ ಆಗುತ್ತೇನೆಂದು ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಂಡು ಕೈಕೊಟ್ಟಿದ್ದಾನೆ. ತೊನ್ನು ಕಾಯಿಲೆಯಿಂದ ಮದುವೆ ಬೇಡ ಎಂದು ಕೈ ಎತ್ತಿದ್ದಾನೆ. ಆದ್ರೆ ಇತ್ತ ಪ್ರೀಯಕರನೇ ಜೀವ ಎಂದು ಭಾವಿಸಿದ್ದ ಯುವತಿಗೆ ಬರಸಿಡಿಲು ಬಡಿದಿದ್ದು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಇನ್ನಾದ್ರು ಚಿತ್ರಹಳ್ಳಿ ಗೇಟ್ ಪೊಲೀಸರು ಕಾಮ ಪಿಶಾಚಿಯನ್ನ ಬಂಧಿಸಿ ನೊಂದ ಯುವತಿಗೆ ನ್ಯಾಯ ಕೊಡಿಸುತ್ತಾರಾ ಕಾದು ನೋಡಬೇಕಿದೆ…..

Ramesh Babu

Journalist

Recent Posts

“ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ”…….

" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ....." ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ.... ಇದಕ್ಕೆ ಅತ್ಯಂತ ನೈಜ…

8 hours ago

ಎಲ್ರಿ ಅಧಿಕಾರಿಗಳು, ಜನರ ಸಮಸ್ಯೆ ಕೇಳೋದ್ಯಾರು..?- ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಸಚಿವ ಕೆ.ಎಚ್ ಮುನಿಯಪ್ಪ ತೀವ್ರ ತರಾಟೆ

ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್…

19 hours ago

1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ಜೊತೆಗೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತಗಳ ಸರ್ವಾಂಗೀಣ ಅಭಿವೃದ್ಧಿಗಳಿಗೆ…

23 hours ago

ಪ್ರಸ್ತುತ ಒಂದು ಮಲೇರಿಯಾ, 6 ಡೆಂಗ್ಯೂ ದಾಖಲು: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:- ಡಿಸಿ ಡಾ.ಕೆ ಎನ್ ಅನುರಾಧ

ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ…

2 days ago

ಗ್ರಾಮಾಂತರ ಪೊಲೀಸ್ ಠಾಣೆಗೆ ಬೊಲೆರೋ ವಾಹನ ಹಸ್ತಾಂತರ

ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಪೊಲೀಸ್ ಠಾಣೆಯ ಜೀಪ್ ಗೂ ಶಾಸಕರ…

2 days ago

ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಡ್ಯಾಂ ನಿರ್ಮಾಣ ಬೇಡ- ತಹಶೀಲ್ದಾರ್ ಮಲ್ಲಪ್ಪಗೆ ರೈತರ ಮನವಿ

ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಣೆಗೆ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಲಕ್ಕೇನಹಳ್ಳಿ…

2 days ago