ಪ್ರೀತಿ-ಪ್ರೇಮ-ಮದುವೆ: ಸಂಸಾರ ನಡೆಸಲು ಅಡ್ಡ ಬಂದ ಜಾತಿ- ಗಂಡನಿಂದಲೇ ಯುವತಿ ಕೊಲೆಯಾಗಿರೋ ಶಂಕೆ

ಬಾಗೇಪಲ್ಲಿ: ಪ್ರೀತಿ- ಪ್ರೇಮ ಎಂಬ ಹೆಸರಿನ ನೆಪ ಹೇಳಿಕೊಂಡು ಪ್ರೀತಿಯ ನಾಟಕವಾಡಿ ದಲಿತ ಯುವತಿಯನ್ನ ತನ್ನ ಬುಟ್ಟಿಗೆ ಬೀಳಿಸಿಕೊಂಡು ಮದುವೆಯಾಗಿ ತನ್ನ ಆಸೆಯನ್ನೆಲ್ಲಾ ತೀರಿಸಿಕೊಂಡ ನಂತರ ಅಮಾಯಕ ಯುವತಿಯನ್ನು ನೇಣು ಬಿಗಿದು ಕೊಂದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮೇಲ್ಜಾತಿ ಯುವಕನಿಂದ ನಡೆದಿದೆ.

ಚೇಳೂರು ಪೋಲೀಸ್ ಠಾಣೆಯ ಚಾಕವೇಲು ಗ್ರಾಮದ  ಎರಡನೇ ಬ್ಲಾಕ್ ನಿವಾಸಿ ಮಣಿಕಂಠ ಬಿನ್ ಲೇಟ್ ಶಂಕರಪ್ಪ ಎಂಬುವರು ಒಂದು ವರ್ಷದ ಹಿಂದೆ ಬಾಗೇಪಲ್ಲಿಗೆ ಗಾರ್ಮೆಟ್ಸ್‌ಗೆ ಬರುತ್ತಿದ್ದ ಆಂಧ್ರಪ್ರದೇಶದ ತನಕಲ್ಲು ಮಂಡಲ್ ರಾಚವಾರಪಲ್ಲಿ ಕೊಂಗರಾಳ್ಳ ಕಾಲೋನಿ ನಿವಾಸಿ ಕೊರಚ ಸಮುದಾಯಕ್ಕೆ ಸೇರಿದ ಗಂಗುಲಪ್ಪ ಅವರ ಮಗಳಾದ ಅನಿತಾ (23) ಅವರನ್ನ ಪ್ರೀತಿಯ ನಾಟಕವಾಡಿ ಪೋಷಕರು ಮತ್ತು ಸಂಬಂಧಿಕರ ವಿರೋಧದ ನಡುವೆ ಈ ಪ್ರೇಮಿಗಳಿಬ್ಬರೆ ದೇವಾಲಯದಲ್ಲಿ  ಮದುವೆಯಾಗಿದ್ದರು.

 ಮದುವೆಯಾದ ಸ್ವಲ್ಪ ದಿನಗಳ ಕಾಲ ಚಿಕ್ಕಬಳ್ಳಾಪುರ ಮತ್ತು ಅನಿತಾ ಅವರ ತವರೂರಾದ ಕೊಂಗರಾಳ್ಳ ಗ್ರಾಮದಲ್ಲಿ ವಾಸ ಮಾಡಿ ನಂತರ ಚಾಕವೇಲು ಗ್ರಾಮಕ್ಕೆ ಅನಿತಾ ಅವರನ್ನು ಕರೆ ತಂದಿದ್ದಾನೆ. ಮಣಿಕಂಠ ಮದುವೆಯಾದ ಅನಿತಾ ಪರಿಶಿಷ್ಠ ಜಾತಿಯವಳು ಎಂಬ ಕಾರಣವೊಡ್ಡಿ ನಾವು ಸವರ್ಣಿಯರು ನಮ್ಮ ಮನೆಗೆ ಸೇರಿಸುವುದಿಲ್ಲ ಎಂದು ಮಣಿಕಂಠನ ತಾಯಿ ಸಾವಿತ್ರಮ್ಮ, ಅಕ್ಕ ಕುಸುಮ, ಬಾವನಾದ ರಾಘವೇಂದ್ರ ಗಲಾಟೆ ಮಾಡಿ ಮನೆಯೊಳಗೆ ಸೇರಿಸಿಕೊಳ್ಳದ ಕಾರಣಕ್ಕೆ ಜೋಡಿಗಳು ಕಳೆದ ಆರು ತಿಂಗಳಿಂದ ಆರೋಪಿ ಮಣಿಕಂಠ ಅವರ ಹಳೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಭೂ- ಮಾಪನ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಮಣಿಕಂಠ ಸಂಬಂಧಿಕರ ಮಾತು ಕೇಳಿ ಅವರ ಜೊತೆಗೂಡಿ ಪ್ರೀತಿಸಿ ಮದುವೆಯಾದ ಅನಿತಾಳಿಗೆ ನಾನಾ ವಿಧದಲ್ಲಿ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

 ಅನಿತಾ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ನರಕಯಾತನೆ ಅನುಭವಿಸಿತ್ತಿದ್ದರು, ಮಣಿಕಂಠ ಮತ್ತು ಆತನ ಸಂಬಂಧಿಕರು ಏನಾದರೂ ಮಾಡಿ ಅನಿತಾಳನ್ನು ಸಾಯಿಸಬೇಕೆಂದು ಹಲವು ಬಗೆಯಲ್ಲಿ ಹೊಂಚು ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಗುರುವಾರ ಸಂಜೆ ಹಳೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆಂದು ಚಾಕವೇಲು ಗ್ರಾಮದ ಸಾರ್ವಜನಿಕರು ಹೇಳಿದ್ದು, ನಾನು ಚಾಕವೇಲುಗೆ ಹೋಗಿ ನೋಡಿದಾಗ ನನ್ನ ಮಗಳು ಅನುಮಾನಸ್ಪದವಾಗಿ ಮೃತಪಟ್ಟಿದ್ದು ತನ್ನ ಮಗಳ ಸಾವಿಗೆ ಈ ನಾಲ್ಕು ಜನರೇ ಕಾರಣ, ಇವರ ವಿರುಧ್ದ ಕಾನೂನಿನ ಕ್ರಮ ಜರುಗಿಸಿ ಎಂದು ಮೃತಳ ತಾಯಿ ಡಿ.ನಾಗಮ್ಮ ಚೇಳೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸದ್ಯ ಭೂ- ಮಾಪನ ಇಲಾಖೆಯ ಗುಮಾಸ್ತ ಮಣಿಕಂಠ ಚಾಕವೇಲು ಗ್ರಾಮದಲ್ಲಿರುವ ಪೊಲೀಸ್ ಚೌಕಿಯೊಳಗೆ ಗುರುವಾರ ರಾತ್ರಿ ಬಂದು ಶರಣಾಗಿದ್ದಾನೆ.

ರಾತ್ರಿ ಹತ್ತಾರು ವಾಹನಗಳಲ್ಲಿ ಮೃತ ಅನಿತಾಳ ಸಂಬಂಧಿಕರು ಹಾಗೂ ಗ್ರಾಮಸ್ಥರು ಸುಮಾರು 50 ರಿಂದ 60 ಜನರಿದ್ದ ಆಂಧ್ರಪ್ರದೇಶದ ತನಕಲ್ಲು ಗ್ರಾಮದಿಂದ ಬಂದು ಚಾಕವೇಲು ಗ್ರಾಮದ ಪೊಲೀಸ್ ಚೌಕಿಗೆ ನುಗ್ಗಿ ತನ್ನ ಮಗಳನ್ನ ಸಾಯಿಸಿರುವ ಇವನನ್ನು ಇಲ್ಲೇ ಸಾಯಿಸುತ್ತೇವೆಂದು ಗಲಾಟೆ ಮಾಡಿ ಚೌಕಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ, ಗಲಾಟೆ ತಿಳಿಗೊಳಿಸಲು ಪೊಲೀಸರು ಹರ ಸಾಹಸ ಮಾಡಿದರಾದರೂ  ಪೊಲೀಸರಿಗೆ ಕೇರ್ ಮಾಡದ ಆಂಧ್ರ ಜನರು ಚೌಕಿಗೆ ನುಗ್ಗಲು ಯತ್ನಿಸಿದರು ಎನ್ನಲಾಗಿದೆ.

 ಇದೇ ಸಮಯಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ  ಶಿವಕುಮಾರ್ ಅವರು  ದಿಢೀರನೇ ಭೇಟಿ ನೀಡಿ ವಸ್ತು ಸ್ಥಿತಿ ಕಣ್ಣಾರೇ ಕಂಡು ಪರಸ್ಥಿತಿ ತಿಳಿಗೊಳಿಸಿ ನಿಮಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ರೊಚ್ಚಿ ಗೆದ್ದ ಜನರನ್ನು ಸಮಾಧಾನ ಮಾಡಿದ್ದಾರೆ.

 ನಂತರ ಆರೋಪಿಯನ್ನು ಪೊಲೀಸ್ ಜೀಪ್‍ನಲ್ಲಿ ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸುತ್ತಿರುವಾಗ ನೂರಾರು ಜನರ ಗುಂಪು ಪೊಲೀಸ್ ಜೀಪಿಗೆ ಅಡ್ಡ ಹೋಗಿ ಮುಗಿಬಿದ್ದ ಜನರು ಪೊಲೀಸ್ ವಾಹನವನ್ನು ಜಖಂಗೊಳಿಸಲು ಪ್ರಯತ್ನಿಸಿದ್ದಾರೆ.

ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಅನಾಹುತವನ್ನು ತಪ್ಪಿಸಿ ಆರೋಪಿ ಮಣಿಕಂಠನನ್ನು ಚಿಕ್ಕಬಳ್ಳಾಪುರ ಜೈಲಿಗೆ ಕಳುಹಿಸಿದ್ದಾರೆ.

ಅನಿತಾಳ ತಾಯಿ ನಾಗಮ್ಮ ಅವರು ಸಲ್ಲಿಸಿರುವ ದೂರಿನ‌ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಸಬ್‌ ಇನ್ಸ್ ಪೆಕ್ಟರ್ ಜಿ.ಜಿ. ನರಸಿಂಹ ನಾಯುಡು. ತನಿಖೆ ಮುಂದುವರಿಸಿದ್ದಾರೆ.

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

11 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

12 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

13 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

13 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

17 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

19 hours ago