ಅವರಿಬ್ಬರು ಪ್ರೀತಿ ಅಮರ, ಮಧುರ, ಪ್ರೇಮ ಎಂದು 6 ವರ್ಷಗಳು ಸುತ್ತಾಡಿದ್ರು. ಆದ್ರೆ, ಮದುವೆ ಎಂಬ ಕೂಗು ಕೇಳುತ್ತಿದಂತೆ ಪೋಷಕರು ಬಿಲ್ ಕುಲ್ ವಿರೋಧ ವ್ಯಕ್ತಪಡಿಸಿದ್ರು, ಇದೆಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಅಮರ ಪ್ರೇಮಿಗಳು ಪೊಲೀಸರ ಮೊರೆ ಹೋಗಿ ಸಾಂಪ್ರದಾಯದಂತೆ ಮದುವೆ ಆಗಿ ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ…ಇಷ್ಟಕ್ಕೂ ಈ ಮದುವೆ ನಡೆದಿದ್ರು ಆದ್ರು ಎಲ್ಲಿ ಅಂತೀರಾ… ಈ ಸ್ಟೋರಿ ಓದಿ…..
ಹೀಗೆ ಪೊಲೀಸರೇ ತಾಳಿ ಕಟ್ಟಿಸಿ, ಕಾಲುಂಗರ ತೊಡಿಸಿ ನೂತನ ವಧು ವರರಿಗೆ ಆಶೀರ್ವಾದ ನೀಡುತ್ತಿರುವ ಘಟನೆ ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ. ಹೌದು, ಕಳೆದ ಆರು ವರ್ಷಗಳಿಂದ ಶಿಡ್ಲಘಟ್ಟ ತಾಲೂಕಿನ ದೊಡ್ಡದಾಸೇನಹಳ್ಳಿ ಗ್ರಾಮದ ಕಾರ್ತೀಕ್ ಹಾಗೂ ಶಿಡ್ಲಘಟ್ಟ ನಗರದ ಅಂಕಿತಾ ಪ್ರೀತಿ ಪ್ರೇಮ ಎಂದು ಸುತ್ತಾಟ ನಡೆಸಿದ್ರು. ಆದ್ರೆ, ಅಂಕಿತಾಗೆ ಮತ್ತೊಬ್ಬ ಯುವಕನ ಜೊತೆ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಇದೇ ವಿಚಾರವನ್ನು ಪ್ರಿಯಕರ ಕಾರ್ತೀಕ್ ಗೆ ಅಂಕಿತಾ ತಿಳಿಸಿದ್ದಾಳೆ. ಆದ್ರೆ ಕಾರ್ತಿಕ್ ಇನ್ನೂ ಎರಡು ವರ್ಷಗಳ ಕಾಲ ಮದುವೆ ಬೇಡ ಎಂದು ತಿಳಿಸಿದ್ದಾನೆ. ಇದರಿಂದ ಬೇಸರಗೊಂಡ ಅಂಕಿತಾ ಕಳೆದ ದಿನ ಶಿಡ್ಲಘಟ್ಟ ನಗರಠಾಣೆಯ ಮೊರೆ ಹೋಗಿ ದೂರು ದಾಖಲಿಸಿದ್ದಾಳೆ. ಸದ್ಯ ಇಂದು ಶಿಡ್ಲಘಟ್ಟ ಠಾಣೆಯ ಪೊಲೀಸರು ಯುವಕ-ಯುವತಿಯ ಕಡೆ ಪೋಷಕರನ್ನು ಠಾಣೆಗೆ ಕರೆಸಿ ಮದುವೆ ಮಾಡಿಸುವಂತೆ ಒಪ್ಪಿಸಿದ್ದಾರೆ. ಆದರೆ, ಮದುವೆಗೆ ಯುವತಿಯ ತಾಯಿ, ಅಕ್ಕ-ಬಾವ ಒಪ್ಪಿಗೆ ಸೂಚಿಸಿದ್ದು, ತಂದೆ ಹಾಗೂ ಯುವಕನ ಪೋಷಕರು ಬಿಲ್ ಕುಲ್ ಒಪ್ಪದ ಹಿನ್ನೆಲೆ ಪೊಲೀಸರು ಯುವಕ-ಯುವತಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸ್ ಠಾಣೆ ಮುಂಭಾಗ ಅರಿಶಿನ ಕುಂಕುಮ ಜೊತೆಗೆ ತಾಳಿಯನ್ನು ಕಟ್ಟಿಸಿ ನಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ತಂದೆಯ ಸ್ಥಾನದಲ್ಲಿ ನಿಂತು ನವ ವಧುವಿಗೆ ಕಾಲುಂಗರ ತೊಡಿಸಿ ಆಶೀರ್ವಾದ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಇನ್ನೂಈ ಜೊಡಿಯ ಆರು ವರ್ಷಗಳ ಪ್ರೀತಿಗೆ ಪೊಲೀಸರಿಂದ ನ್ಯಾಯ ದೊರೆಕಿದ್ದು, ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ ಪೋಷಕರ ವಿರೋಧ ನಡುವೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಪೊಲೀಸರು ಹಾರ ತೂರಾಯಿ ಕಾನೂನು ಬದ್ಧವಾಗಿ ಮದುವೆ ಮಾಡಿಸಿಕೊಟ್ಟಿರುವುದು ಎಲ್ಲರ ಗಮನವನ್ನು ಸೆಳೆದಿದೆ.
ರಾಜ್ಯ ರಾಜಕೀಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಬಳಿ…
ನಮ್ಮ ನಾಯಕರು ಮತ್ತು ಉಗ್ರ ಧರ್ಮ ಹಾಗು ರಾಷ್ಟ್ರೀಯವಾದ..... ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು..... ತಾವೇ ಸೃಷ್ಟಿಸಿಕೊಂಡ, ನಾವೇ…
ಕಳೆದ ಮೂರು ದಿನಗಳಿಂದ ನಡೆದ "ದೊಡ್ಡಬಳ್ಳಾಪುರ ಸ್ಯಾರಿ ಸಂತೆ"ಗೆ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು. ಮೂರು ದಿನಗಳ ಕಾಲ ಲಕ್ಷಾಂತರ…
ಉತ್ತರಪ್ರದೇಶ : ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ…
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರು ತಮ್ಮ ಸೇವಾ ಮನೋಭಾವದಿಂದ ಸರ್ವಜನ ಮಾನ್ಯರಾಗಿದ್ದರು ಎಂದು ಕನ್ನಡ ಜಾಗೃತ ಪರಿಷತ್ತು…
ಕುಮಟಾ: ಬಡವರ ಹಸಿವು ನೀಗಿಸಲು ಸರ್ಕಾರ ನೀಡುವ 'ಅನ್ನಭಾಗ್ಯ' ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋಡೌನ್ ಮೇಲೆ ಕುಮಟಾ ತಹಶೀಲ್ದಾರ್…