ಪ್ರೀತಿಸಿ ಕೈ ಹಿಡಿದ ಗಂಡ ಕುಡುಕನಾದ.. ಪರಿಚಯಸ್ಥ ಪ್ರಿಯಕರನಾದ; ಹೆಂಡತಿ ಹುಡ್ಕೊಂಡ್ ಬಂದು ಆಕೆಯ ಉಸಿರು ತೆಗೆದ ಕುಡುಕ ಗಂಡ

 

ಪ್ರೀತಿಸಿ ಮದುವೆಯಾದ ಗಂಡ ಕುಡುಕನಾದ, ಗಂಡನ ಕುಡಿತದ ಚಟಕ್ಕೆ ಬೇಸತ್ತ ಅವಳು ಪರಿಯಸ್ಥನ ಪ್ರೀತಿಯ ಬಲೆಗೆ ಬಿದ್ದು, ದೇವಸ್ಥಾನಕ್ಕೆ ಹೋಗುವುದಾಗಿ ಗಂಡನ ಮನೆಯಿಂದ ಬಂದವಳು ಪ್ರಿಯಕರನ ಜೊತೆ ಒಂದಾಗಿದ್ದಳು. ಗಂಡನ ಮನೆಯಿಂದ ಬಂದು ವಾರವಾಗಿತ್ತು ಅಷ್ಟೇ ಪ್ರಿಯಕರನ ಮನೆಯಲ್ಲಿ ಹೆಣವಾಗಿದ್ದಾಳೆ.

ಮೃತ ಭಾರತಿ ಆಂಧ್ರಪ್ರದೇಶದ ಪುಲ್ಮಿತ್ತಿ ಗ್ರಾಮದವಳು, ಅಕ್ಕನ ಮದುವೆಗೆಂದ್ದು ಬಂದವಳಿಗೆ ಮಧುಗಿರಿ ತಾಲೂಕಿನ ಚಿಕ್ಕದಾಳವಟ ಗ್ರಾಮದ ಹರೀಶ್ ಪರಿಚಯವಾಗಿತ್ತು, ಪ್ರೀತಿಯ ಬಲೆಗೆ ಬಿದ್ದು 15 ವರ್ಷಗಳ ಹಿಂದೆ ಮದುವೆಯಾಗಿದ್ದರು, ಇವರ ದಾಪಂತ್ಯಕ್ಕೆ ಇಬ್ಬರು ಮಕ್ಕಳು ಸಹ ಇದ್ದರು. ಕೈಹಿಡಿದ ಹರೀಶ್ ಕುಡುಕನಾಗಿದ್ದ, ಕುಡುಕ ಗಂಡನಿಂದ ಬೇಸತ್ತಿದ್ದ ಭಾರತಿಗೆ ಅದೇ ಗ್ರಾಮದ ಗಂಗರಾಜ್ ಪರಿಚಯವಾಗಿತ್ತು. ಈ ಗಂಗರಾಜ್ ಕೋಳೂರಿನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ, ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ ಭಾರತಿ ಮಗಳನ್ನು ಕರೆದುಕೊಂಡು ಬಂದು ಗಂಗರಾಜ್ ಜೊತೆ ವಾಸವಾಗಿದ್ದಳು.

ಮನೆ ಬಿಟ್ಟು ಹೋದ ಹೆಂಡತಿ ಬೆನ್ನತ್ತ ಹರೀಶ್ ಗೆ ಕೋಳೂರು ಗ್ರಾಮದಲ್ಲಿ ಗಂಗರಾಜ್ ಜೊತೆ ಇರುವ ಮಾಹಿತಿ ತಿಳಿಯುತ್ತೆ. ಹೆಂಡತಿಯನ್ನ ಕರೆದುಕೊಂಡು ಹೋಗಲು ಹರೀಶ್ ಕಳೆದ ಮಂಗಳವಾರ ಗಂಗರಾಜ್ ಮನೆಗೆ ಬಂದಿದ್ದಾನೆ, ಮರುದಿನ ಬೆಳಗ್ಗೆ ಕೆಲಸ ನಿಮಿತ್ತ ಗಂಗರಾಜ್ ಸಂಬಂಧಿಕರ ಮನೆಗೆ ಹೋಗಿದ್ದ, ಈ ವೇಳೆ ಭಾರತಿ ಮತ್ತು ಹರೀಶ್ ನಡುವೆ ಜಗಳವಾಗಿದೆ, ಭಾರತಿ ಕತ್ತು ಬಿಗಿದು ಹರೀಶ್ ಆಕೆಯ ಉಸಿರು ನಿಲ್ಲಿಸಿ ಮಗಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,‌ ಸದ್ಯ ಆರೋಪಿ ಹರೀಶ್ ನನ್ನ ಪೊಲೀಸರು ಬಂಧಿಸಿದ್ದಾರೆ.

Ramesh Babu

Journalist

Recent Posts

ಬಸ್-ನೀರಿನ ಟ್ಯಾಂಕರ್ ಟ್ರ್ಯಾಕ್ಟರ್ ನಡುವೆ ಅಪಘಾತ: ಫುಲ್ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

ದೊಡ್ಡಬಳ್ಳಾಪುರ ತಾಲೂಕಿನ ಪಾಲನಜೋಗಹಳ್ಳಿ ಸಮೀಪ ಹಿಂದೂಪುರ–ಯಲಹಂಕ ರಾಜ್ಯ ಹೆದ್ದಾರಿಯಲ್ಲಿ ಬಸ್ ಹಾಗೂ ನೀರಿನ ಟ್ಯಾಂಕರ್ ಹೊತ್ತ ಟ್ರ್ಯಾಕ್ಟರ್ ನಡುವೆ ಸಂಭವಿಸಿದ…

2 hours ago

ಶಾಸಕ ಪ್ರದೀಪ್ ಈಶ್ವರ್ ಕಾರಿಗೆ ಮುತ್ತಿಗೆ; ಚಪ್ಪಲಿ ಎಸೆತ, ಉದ್ವಿಗ್ನ ವಾತಾವರಣ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಮುತ್ತಿಗೆ ಹಾಕಿದ ಘಟನೆ ಶನಿವಾರ…

7 hours ago

ಹೆಚ್‌ಡಿಕೆಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್: “32 ಎಕರೆ ಆಸ್ತಿ ದಾಖಲೆ ನನ್ನ ಮುಖದ ಮೇಲೆ ಬಿಸಾಕಿ”

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ…

8 hours ago

ಕೆಂಪೇಗೌಡರ ಹೆಸರನ್ನು ಶಾಶ್ವತಗೊಳಿಸಲು ಹೊಸ ಯೋಜನೆಗಳು: ಟೌನ್ ಪ್ಲಾನಿಂಗ್, ಕಾಲೇಜು, ಅಭಿವೃದ್ಧಿ ಕೇಂದ್ರ ಸ್ಥಾಪನೆ – ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

10 hours ago

517ನೇ ಕೆಂಪೇಗೌಡ ಜಯಂತಿ: ವಿಮಾನ ನಿಲ್ದಾಣದಲ್ಲಿ ನಾಡಪ್ರಭುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪನಮನ

ದೇವನಹಳ್ಳಿ: 517ನೇ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ…

12 hours ago

“ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ” – ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪ್ರತೀಕಾರಾತ್ಮಕ ಅಶ್ಲೀಲತೆ , ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಗೃಹ ಇಲಾಖೆಗೆ ಸೂಚನೆ…

1 day ago