ಪ್ರೀತಿಸಿ ಕೈ ಹಿಡಿದ ಗಂಡ ಕುಡುಕನಾದ.. ಪರಿಚಯಸ್ಥ ಪ್ರಿಯಕರನಾದ; ಹೆಂಡತಿ ಹುಡ್ಕೊಂಡ್ ಬಂದು ಆಕೆಯ ಉಸಿರು ತೆಗೆದ ಕುಡುಕ ಗಂಡ

 

ಪ್ರೀತಿಸಿ ಮದುವೆಯಾದ ಗಂಡ ಕುಡುಕನಾದ, ಗಂಡನ ಕುಡಿತದ ಚಟಕ್ಕೆ ಬೇಸತ್ತ ಅವಳು ಪರಿಯಸ್ಥನ ಪ್ರೀತಿಯ ಬಲೆಗೆ ಬಿದ್ದು, ದೇವಸ್ಥಾನಕ್ಕೆ ಹೋಗುವುದಾಗಿ ಗಂಡನ ಮನೆಯಿಂದ ಬಂದವಳು ಪ್ರಿಯಕರನ ಜೊತೆ ಒಂದಾಗಿದ್ದಳು. ಗಂಡನ ಮನೆಯಿಂದ ಬಂದು ವಾರವಾಗಿತ್ತು ಅಷ್ಟೇ ಪ್ರಿಯಕರನ ಮನೆಯಲ್ಲಿ ಹೆಣವಾಗಿದ್ದಾಳೆ.

ಮೃತ ಭಾರತಿ ಆಂಧ್ರಪ್ರದೇಶದ ಪುಲ್ಮಿತ್ತಿ ಗ್ರಾಮದವಳು, ಅಕ್ಕನ ಮದುವೆಗೆಂದ್ದು ಬಂದವಳಿಗೆ ಮಧುಗಿರಿ ತಾಲೂಕಿನ ಚಿಕ್ಕದಾಳವಟ ಗ್ರಾಮದ ಹರೀಶ್ ಪರಿಚಯವಾಗಿತ್ತು, ಪ್ರೀತಿಯ ಬಲೆಗೆ ಬಿದ್ದು 15 ವರ್ಷಗಳ ಹಿಂದೆ ಮದುವೆಯಾಗಿದ್ದರು, ಇವರ ದಾಪಂತ್ಯಕ್ಕೆ ಇಬ್ಬರು ಮಕ್ಕಳು ಸಹ ಇದ್ದರು. ಕೈಹಿಡಿದ ಹರೀಶ್ ಕುಡುಕನಾಗಿದ್ದ, ಕುಡುಕ ಗಂಡನಿಂದ ಬೇಸತ್ತಿದ್ದ ಭಾರತಿಗೆ ಅದೇ ಗ್ರಾಮದ ಗಂಗರಾಜ್ ಪರಿಚಯವಾಗಿತ್ತು. ಈ ಗಂಗರಾಜ್ ಕೋಳೂರಿನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ, ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ ಭಾರತಿ ಮಗಳನ್ನು ಕರೆದುಕೊಂಡು ಬಂದು ಗಂಗರಾಜ್ ಜೊತೆ ವಾಸವಾಗಿದ್ದಳು.

ಮನೆ ಬಿಟ್ಟು ಹೋದ ಹೆಂಡತಿ ಬೆನ್ನತ್ತ ಹರೀಶ್ ಗೆ ಕೋಳೂರು ಗ್ರಾಮದಲ್ಲಿ ಗಂಗರಾಜ್ ಜೊತೆ ಇರುವ ಮಾಹಿತಿ ತಿಳಿಯುತ್ತೆ. ಹೆಂಡತಿಯನ್ನ ಕರೆದುಕೊಂಡು ಹೋಗಲು ಹರೀಶ್ ಕಳೆದ ಮಂಗಳವಾರ ಗಂಗರಾಜ್ ಮನೆಗೆ ಬಂದಿದ್ದಾನೆ, ಮರುದಿನ ಬೆಳಗ್ಗೆ ಕೆಲಸ ನಿಮಿತ್ತ ಗಂಗರಾಜ್ ಸಂಬಂಧಿಕರ ಮನೆಗೆ ಹೋಗಿದ್ದ, ಈ ವೇಳೆ ಭಾರತಿ ಮತ್ತು ಹರೀಶ್ ನಡುವೆ ಜಗಳವಾಗಿದೆ, ಭಾರತಿ ಕತ್ತು ಬಿಗಿದು ಹರೀಶ್ ಆಕೆಯ ಉಸಿರು ನಿಲ್ಲಿಸಿ ಮಗಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,‌ ಸದ್ಯ ಆರೋಪಿ ಹರೀಶ್ ನನ್ನ ಪೊಲೀಸರು ಬಂಧಿಸಿದ್ದಾರೆ.

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

5 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

20 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago