ಯುವಕ ತಾನು ಪ್ರೀತಿ ಮಾಡ್ತಿದ್ದ ಯುವತಿಯನ್ನ, ಮತ್ತೊಬ್ಬ ಯುವಕ ಪ್ರೀತಿಸಿದ್ದ ಅನ್ನೋ ಕಾರಣಕ್ಕಾಗಿ ಪಾರ್ಟಿ ಮಾಡೋ ನೆಪದಲ್ಲಿ ಫಾರ್ಮ್ಹೌಸ್ಗೆ ಕರೆದು ಮನೋಸೋ ಇಚ್ಚೆ ಚಾಕುವಿನಲ್ಲಿ ಇರಿದು ಕೊಲೆ ಮಾಡಿರುವ ಘಟನೆ ನೆಲಮಂಗಲದ ರೈಲ್ವೇ ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ.
ವೇಣುಗೋಪಲ್ ಎಂಬಾತ ದರ್ಶನ್ ಎಂಬ ಯುವಕನನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ.
ವೇಣುಗೋಪಾಲ್ ಪ್ರೀತಿಸುತ್ತಿದ್ದ ಯುವತಿಯನ್ನ, ದರ್ಶನ್ ಕೂಡ ಪ್ರೀತಿಸುತ್ತಿದ್ದ. ಆಕೆ ವೇಣುಗೋಪಾಲ್ನನ್ನು ಬಿಟ್ಟು, ದರ್ಶನ್ನನ್ನ ಪ್ರೀತಿಸುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ವೇಣುಗೋಪಾಲ್ ದರ್ಶನ್ ಕೊಲೆ ಮಾಡಲು ಸಂಚು ರೂಪಿಸಿದ್ದನು.
ಇದೇ ಕಾರಣಕ್ಕೆ ಪಾರ್ಟಿ ಮಾಡೋ ನೆಪದಲ್ಲಿ ರಾತ್ರಿ 9.30ರ ಸುಮಾರಿಗೆ ಯುವತಿಯ ಮಾಜಿ ಲವ್ವರ್ ವೇಣುಗೋಪಾಲ್ ಹಾಲಿ ಲವ್ವರ್ ದರ್ಶನ್ರನ್ನು ತೋಟದ ಮನೆಗೆ ಕರೆಸಿದ್ದನು.
ಈ ವೇಳೆ ಮಾತಿಗೆ ಮಾತು ಬೆಳೆದು ವೇಣು ಗೋಪಾಲ್, ಹಾಲಿ ಲವ್ವರ್ ದರ್ಶನ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡ್ತಿದ್ದಂತೆ ಮಾಜಿ ಪ್ರಿಯತಮ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಸದ್ಯ ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಂಡ ರಚನೆ ಮಾಡಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಎಸ್ಪಿ ಸಿ.ಕೆ ಬಾಬಾ ಪ್ರತಿಕ್ರಿಯಿಸಿದ ಅವರು, ರಾತ್ರಿ 9:30 ರ ವೇಳೆ ರೈಲ್ವೆಗೊಲ್ಲಹಳ್ಳಿ ಬಳಿ ಘಟನೆ ನಡೆದಿದೆ. ತೋಟದ ಮನೆಯಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ದರ್ಶನ್(26) ಕೊಲೆಯಾಗಿದ್ದಾನೆ. ಯುವತಿಯ ವಿಚಾರಕ್ಕೆ ತೋಟದ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಹೊಸ ಲವರ್ ಜೊತೆ ಯುವತಿ ಮದುವೆ ಮಾಡಿಕೊಳ್ಳುವ ಪ್ಲಾನ್ ಇತ್ತು. ಯುವಕ-ಯುವತಿಯ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದರು.
ಕೊಲೆ ಆರೋಪಿಯನ್ನು ವಶಕ್ಕೆ ಪಡೆಯಲು ಹೀಗಾಗಲೇ ಒಂದು ತಂಡ ರಚನೆ ಮಾಡಿದ್ದೇವೆ. ಆರೋಪಿಯನ್ನು ಕೂಡಲೇ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದರು.