ಪ್ರಾಮಾಣಿಕತೆ ಮೆರೆದ 108 ಅಂಬುಲೆನ್ಸ್ ಚಾಲಕ: ಯಾವ ವಿಚಾರದಲ್ಲಿ ಪ್ರಾಮಾಣಿಕ ಮೆರೆದಿದ್ದಾರೆ…? ಇಲ್ಲಿದೆ ಮಾಹಿತಿ ಓದಿ….

ನಿನ್ನೆ ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದ್ದ. ಮೃತನ ಬಳಿ‌ ಇದ್ದ ಬೆಲೆ ಬಾಳುವ ವಸ್ತುಗಳನ್ನು ಮೃತನ ಗೆಳೆಯನಿಗೆ ಹಸ್ತಾಂತರ ಮಾಡುವ ಮೂಲಕ 108 ಅಂಬುಲೆನ್ಸ್ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ನಿನ್ನೆ ಸಂಜೆ ಹೊಸಕೋಟೆ – ದಾಬಸ್‌ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ನಾಗದೇನಹಳ್ಳಿಯ ಗೀತಂ ಕಾಲೇಜ ಬಳಿಯ ಮೇಲ್ಲೇತುವೆಯಲ್ಲಿ ದೇವನಹಳ್ಳಿ ಕಡೆಯಿಂದ ಬಂದ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು.

ಈ ಕುರಿತು ಮಾಹಿತಿ ತಿಳಿದ 108 ಸಿಬ್ಬಂದಿ ನರಸಿಂಹಮೂರ್ತಿ ಕೆ, ಸ್ಥಳಕ್ಕೆ ದೌಡಾಯಿಸಿ, ಬ್ಯಾಟರಾಯನಪುರ ಸಮೀಪದ ಕೆಂಪಾಪುರ ನಿವಾಸಿ ಮದನ್ (40) ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಸ್ತೆ ನಡುವೆ ಸಾವನಪ್ಪಿದ್ದರು.

ಇನ್ನೂ ಮೃತನ ಕುರಿತು ದಾಖಲೆ ಪರಿಶೀಲನೆ ನಡೆಸಿದ 108 ಚಾಲಕ ನರಸಿಂಹಮೂರ್ತಿ ಮೃತನ ಧರಿಸಿದ್ದ 40 ಗ್ರಾಂ ನಷ್ಟು ಚಿನ್ನ, 25 ಸಾವಿರ ಹಣ, ಮೊಬೈಲ್ ಮತ್ತು ಪರ್ಸ್ ನ್ನು ಮೃತನ ಗೆಳೆಯನಿಗೆ ಹಸ್ತಾಂತರ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇನ್ನೂ ಮೃತನು ಯುಗಾದಿ ಹಿನ್ನೆಲೆ ನಂದಿಗಿರಿಗೆ ಭೇಟಿ ನೀಡಿದ್ದಾಗ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!