ಪ್ರಾಣ ಬಿಡುತ್ತೇವೆ ಹೊರೆತು ಭೂಮಿ ಬಿಡಲ್ಲ- ಗೊಲ್ಲಹಳ್ಳಿ ಜನ ಎಚ್ಚರಿಕೆ

ದಲಿತ ನಾಯಕರಾದವರೇ ಇಂದು ನಮಗೆ (ಲಂಬಾಣಿ ಜನಕ್ಕೆ) ಅನ್ಯಾಯ ಮಾಡಲು ಹೊರಟಿದ್ದಾರೆ. ನಮ್ಮ ಅಭಿವೃದ್ಧಿಗಾಗಿ ನಾವು ಆಯ್ಕೆ ಮಾಡಿ ಕಳಿಸಿದವರೇ ನಮ್ಮ ಹೊಟ್ಟೆ ಮೇಲೆ ಹೊಡೆಯಲು ಪ್ಲಾನ್ ಮಾಡಿದ್ದಾರೆ. ಒಂದು ಜನಾಂಗದವರನ್ನು ಮೆಚ್ಚಿಸಲು ಮತ್ತೊಂದು ಜನಾಂಗದವರನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರ ಜನ ಆರೋಪಿಸಿ ಆಕ್ರೋಶವ್ಯಕ್ತಪಡಿಸಿದ್ದಾರೆ….

ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರದಲ್ಲಿ ಬಚ್ಚಹಳ್ಳಿ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾಧೀನದಲ್ಲಿದ್ದೇವೆ. ಇದೀಗ ನಮ್ಮಿಂದ ಈ ಜಮೀನನ್ನು ಕಿತ್ತುಕೊಳ್ಳುವ ಹುನ್ನಾರ ನಡೀತಿದೆ. ಇದು ಸರ್ಕಾರಿ ಗೋಮಾಳ ಕೂಡಲೇ ತೆರವು ಮಾಡಬೇಕು ಎಂದು ಕಂದಾಯ ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಾರೆ. ದಲಿತರ ಬೊಗಸೆಯಷ್ಟು ಜಾಗ ಕಿತ್ತುಕೊಂಡು ಬದುಕು ನಾಶ ಮಾಡಲು ಹೊರಟಿದ್ದಾರೆ. ನಾವು ಹತ್ತಾರು ಎಕರೆ ಜಗದಲ್ಲಿ ಇಲ್ಲ. ಒಂದು ಗುಂಟೆ ಎರಡು ಗುಂಟೆ ಜಾಗದಲ್ಲಿ ಹಸುಗಳನ್ನು ಕಟ್ಟಿಕೊಂಡು ಅವುಗಳಿಗೆ ಹುಲ್ಲಿನ ಬಣವೆ ಹಾಕಿಕೊಂಡು, ತಿಪ್ಪೆ ಮಾಡಿಕೊಂಡಿದ್ದೇವೆ, ಇದೇ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸ ಕೂಡ ಮಾಡ್ತಿದ್ದೇವೆ. ಅಧಿಕಾರಿಗಳು ಈಗ ಈ ಜಾಗವನ್ನು ನಮ್ಮಿಂದ ಕಿತ್ತುಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಮಗೆ ಈ ಜಾಗ ಬಿಟ್ಟರೆ ಬೇರೆಲ್ಲೂ ಒಂದು ಇಂಚು ಜಾಗ ಇಲ್ಲ ಎಂದು ಹೇಳಿದ್ದಾರೆ..

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಮೆತ್ತುತ್ತಿದ್ದಾರೆ. ಈ ರೀತಿ ಅನ್ಯಾಯ ಮಾಡಬಾರದು. ಒಂದು ಸಮುದಾಯದವರನ್ನು ಸಮಾಧಿ ಮಾಡಿ ಆ ಸಮಾಧಿ ಮೇಲೆ ಬೇರೊಂದು ಸಮುದಾಯದ ಭವನ ನಿರ್ಮಿಸೋದು ಎಷ್ಟು ಸರಿ. ಉಳ್ಳವರಿಗೆ ಒಂದು ನ್ಯಾಯ ಇಲ್ಲದವರಿಗೆ ಇನ್ನೊಂದು ನ್ಯಾಯ. ಉಳ್ಳವರು ಲಕ್ಷ ಲಕ್ಷ ಹಣ ಕೊಟ್ಟು ಜಮೀನುಗಳನ್ನು ಉಳಿಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಅಂತವರಿಗೆ ಏನು ಬೇಕಾದರೂ ಮಾಡಿ ಕೊಡುತ್ತಾರೆ. ನಾವು ಎಲ್ಲಿಂದ ಹಣ ತರೋದು, ಕೂಲಿ ಮಾಡೋದು ಜೀವನ ಸಾಗಿಸಲು ಸಾಸಲ್ಲ. ಹೊಟ್ಟೆ ಬಟ್ಟೆ  ಕಟ್ಟಿ ನಾಲ್ಕು ಕಾಸು ಉಳಿಸಿ ಇಷ್ಟು ಮನೆ ಕಟ್ಟಿಕೊಂಡು, ಒಂದೆರಡು ಹಸು ಸಾಕಿಕೊಂಡು ಕೂಲಿ ನಾಲಿ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಹಣ, ಅಧಿಕಾರ ಇರುವವರ ಜಮೀನುಗಳನ್ನು ಬಿಟ್ಟು ನಮ್ಮಂಥ ತಲೆ ಮೇಲೆ ಬಟ್ಟೆ ಇಲ್ಲದವರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವು ಖಂಡಿತ ಬದುಕುವುದಿಲ್ಲ. ಅಧಿಕಾರಿಗಳ ಮುಂದೆಯೇ ಪ್ರಾಣ ಕಳೆದುಕೊಳ್ಳುತ್ತೇವೆ. ನಮ್ಮ ಬದುಕೇ ಕಿತ್ತುಕೊಂಡಮೇಲೆ ನಾವು ಏಕೆ ಬದುಕಿರಬೇಕು. ಈ ಜಾಗ ಹೊರತುಪಡಿಸಿ ಬೇರೆ ಕಡೆ ಸಾಕಷ್ಟು ಜಮೀನು ಇವೆ. ಅಲ್ಲೆಲ್ಲ ಬಿಟ್ಟು ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿರುವ ನಮ್ಮ ಜಮೀನು ಮೇಲೆ ಕಣ್ಣು ಹಾಕಿದ್ದಾರೆ.  ಹಣ ಇರುವವರು ಲಕ್ಷ ಲಕ್ಷ ಕೊಟ್ಟು 2 ಎಕರೆ, 5 ಎಕರೆ, 10 ಎಕರೆ ಜಮೀನು ಮಾಡಿಕೊಳ್ಳುತ್ತಾರೆ. ನಮ್ಮ ಅತ್ರ ಹಣ ಇಲ್ಲ ಕೂಲಿ ಮಾಡಿ ಜೀವನ ಮಾಡೋರು ನಾವೆಲ್ಲಿ ಹಣ ಕೊಟ್ಟು ಜಮೀನು ಮಾಡಿಕೊಳ್ಳಲು ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ನಾವು ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಂದವರು. 2-3 ಬಾರಿ ಗುಡಿಸಲಿಗೆ ಬೆಂಕಿ ಕೂಡ ಬಿದ್ದಿತ್ತು. ನಾವು ತಾಲ್ಲೂಕು ಕಚೇರಿಯಿಂದ ಪಡೆದಿದ್ದ ಸಾಗುವಳಿ ಚೀಟಿ ದಾಖಲೆಗಳು ಸುಟ್ಟುಹೋಗಿವೆ. ನಾವು ಓದು ಬರಹ ಕಲಿತವರಲ್ಲ. ನಮಗೆ ಏನು ಮಾಡಬೇಕೆಂದು ತಿಳಿದಿಲ್ಲ. ಈಗ ನೋಡಿದ್ರೆ ನಮಗೆ ತಿಳಿಸದೇ ಬೇರೆಯವರಿಗೆ ನೀಡಲು ಹೊರಟಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವೆಲ್ಲಿ ಹೋಗಬೇಕು?  ಒಬ್ಬೊಬ್ಬರಿಗೆ 3 ಜನ, 6 ಜನ ಮಕ್ಕಳಿದ್ದಾರೆ. 100 ಕುಟುಂಬ ಇವೆ ಅವರು ಹೇಗೆ ಬದುಕುತ್ತಾರೆ. ಇಲ್ಲಿ ಬಿಟ್ಟು ಕಾಡಿಗೆ ಹೋಗೋಣ ಅಂದ್ರೆ ಅಲ್ಲೂ ಅವಕಾಶ ಇಲ್ಲ. ಇಲ್ಲಿನ ಶಾಸಕರು ಪ್ರಭಾವ ಬಳಸಿ ಲಂಬಾಣಿ ಜನಾಂಗದ ಜಾಗವನ್ನು ಕಿತ್ತುಕೊಂಡು ಬೇರೊಂದು ಜನಾಂಗಕ್ಕೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ…

ಈಗೇನಾದರೂ ನಮ್ಮ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡರೆ ನಾವು ಪ್ರಾಣ ಬಿಡುತ್ತೇವೆ ಹೊರೆತು ಜಾಗ ಬಿಡಲ್ಲ. ಚುನಾವಣೆ ಬಹಿಷ್ಕಾಂರ ಹಾಕ್ತೇವೆ, ರಸ್ತೆ ತಡೆದು ಪ್ರತಿಭಟನೆ ಮಾಡ್ತೀವಿ. ನಮಗೆ ನ್ಯಾಯ ಕೊಡಿ ನಮ್ಮ ಜಮೀನು ನಮಗೆ ಉಳಿಸಿ ಕೊಡಿ  ನಿಮಗೆ ಕೈ ಮುಗಿದು ಕೇಳಿಕೊಳ್ಳುವುದರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.

Ramesh Babu

Journalist

Recent Posts

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

6 hours ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

6 hours ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

11 hours ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

3 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

3 days ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

3 days ago