ಪ್ರಜ್ವಲ್ ರೇವಣ್ಣ ಮೇಲೆ ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಕೊನೆಗೂ ವಿಡಿಯೊ‌ ಮೂಲಕ ಪ್ರತ್ಯಕ್ಷ: ವಿಡಿಯೊದಲ್ಲಿ ಏನು ಹೇಳಿದ್ದಾರೆ..?

ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ, ಸದ್ಯಕ್ಕೆ ವಿದೇಶದಲ್ಲಿ ಅಜ್ಞಾತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಒಂದು ತಿಂಗಳ ಬಳಿಕ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ.

ವಿದೇಶದಲ್ಲಿದ್ದುಕೊಂಡೇ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ, ಮೊದಲಿಗೆ ನನ್ನ‌ ತಾತ ದೇವೇಗೌಡರು, ನನ್ನ‌ ತಂದೆ-ತಾಯಿ, ಕುಮಾರಣ್ಣ, ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೇನೆ ಎಂದು ಪ್ರಾರಂಭ ಮಾಡಿದ್ದಾರೆ.

ನಾನು ವಿದೇಶದಲ್ಲಿ ಎಲ್ಲಿ ಎದ್ದೇನೆ ಎಂದು ಸರಿಯಾದ ಮಾಹಿತಿ ನೀಡದೇ ಇದ್ದಿದ್ದಕ್ಕೆ ಕ್ಷಮೆ ಕೋರಿ, ಇಂದು ಮಾಹಿತಿ ನೀಡಲು ವಿಡಿಯೊ ಮಾಡಿದ್ದೇನೆ, ಮೇ. 26 ರಂದು ಚುನಾವಣೆ ನಡೆಯಿತು, ಅಂದು ನನ್ನ ಮೇಲೆ ದೂರು, ಪ್ರಕರಣ ಇರಲಿಲ್ಲ, ಎಸ್ಐಟಿ‌ ಕೂಡ ರಚನೆ ಆಗಿರಲಿಲ್ಲ, ಮೇ.26ಕ್ಕೆ ಕೂಡ ನಾನು ವಿದೇಶಕ್ಕೆ ಹೋಗೋದು ಮೊದಲೇ ನಿಶ್ಚಯವಾಗಿತ್ತು, ಹಾಗಾಗಿ ನಾನು ಫಾರಿನ್ ಗೆ ಹೋದೆ, ಫಾರಿನ್ ಗೆ ಹೋದ ನಂತರ ಯೂಟೂಬ್ ಹಾಗೂ ನ್ಯೂಸ್ ಚಾನಲ್ ನಲ್ಲಿ ಈ ಬಗ್ಗೆ ಮಾಹಿತಿ ದೊರೆಯಿತು. ಮಾಹಿತಿ ದೊರೆತ ನಂತರ ಎಸ್ಐಟಿ ನೋಟಿಸ್ ಕೊಡುವ ಕೆಲಸ ಆಯಿತು, ನನ್ನ ಎಕ್ಸ್ ಖಾತೆ ಮೂಲಕ ಹಾಗೂ ನನ್ನ ಲಾಯರ್ ಮೂಲಕ 7 ದಿನಗಳ ಕಾಲ ಸಮಯಾವಕಾಶ ಕೇಳಿದ್ದೆ, ಕೇಳಿದ ಮೇಲೆ ಅದರ ಮರುದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ನಾಯಕರು ಈ ವಿಚಾರವನ್ನ ಪ್ರಚಾರ, ಚರ್ಚೆ ಮಾಡಿ ರಾಜಕೀಯ ಪಿತೂರಿ ಮಾಡುವ ಕೆಲಸ‌ ಮಾಡಿದರು.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ ಮೇಲೆ ನಾನು ಖಿನ್ನತೆಯಿಂದ ಐಸೋಲೇಷನ್ ಗೆ ಹೋಗಿದ್ದೆ.

ಹಾಸನದಲ್ಲೂ ಕೆಲ ಶಕ್ತಿಗಳು ಎಲ್ಲವೂ ಒಟ್ಟಿಗೆ ಸೇರಿ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡುವಂತ ಕೆಲಸ ಆಗಿದೆ.

ರಾಜಕೀಯವಾಗಿ ನಾನು ಬೆಳೆಯುತ್ತಿದ್ದೇನೆ, ಏನಾದರೂ ಮಾಡಿ ನನ್ನನ್ನು ಕುಗ್ಗಿಸಬೇಕು ಎಂದು ಭಾವಿಸಿದರು. ಈ ಎಲ್ಲವನ್ನೂ ನೋಡಿ ಅಘಾತಗೊಂಡು ನಾನೇ ದೂರ ಉಳಿದೆ. ಹಾಗಾಗಿ ಇದರ ಬಗ್ಗೆ ಯಾರೂ ಕೂಡ ತಪ್ಪು ತಿಳಿಯುವುದು ಬೇಡ, ನಾನೇ ಖುದ್ದಾಗಿ ಮೇ.30ರ ಶುಕ್ರವಾರ ಬೆಳಗ್ಗೆ 10ಕ್ಕೆ ಎಸ್ಐಟಿ ಮುಂದೆ ಬಂದು ಈ ಪ್ರಕರಣಕ್ಕೆ ಸಹಕಾರ ನೀಡುವ ಮೂಲಕ ಸರಿಯಾದ ರೀತಿ ಉತ್ತರ ನೀಡುತ್ತೇನೆ.

ನ್ಯಾಯಾಲದ ಮೇಲೆ ನಂಬಿಕೆ ಇದೆ, ನನ್ನ ಮೇಲೆ ಸುಳ್ಳ ಪ್ರಕರಣಗಳಿವೆ ನ್ಯಾಯಾಲದ ಮೂಲಕ ಸುಳ್ಳ ಪ್ರಕರಣಗಳಿಂದ ಹೊರಬರುತ್ತೇನೆ ಎಂಬ ನನಗೆ ನಂಬಿಕೆ ಇದೆ ಎಂದು ವಿಡಿಯೋದಲ್ಲಿ‌ ಹೇಳಿದ್ದಾರೆ.

Ramesh Babu

Journalist

Recent Posts

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

2 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

2 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

5 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

8 hours ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

20 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

21 hours ago