ಧಾರವಾಡ ಜಿಲ್ಲೆಯಲ್ಲಿ ಚಾಕಲೇಟ್ ಗ್ಯಾಂಗ್ ಪುಲ್ ಆ್ಯಕ್ಟೀವ್ ಆಗಿದೆ. ಬಿಹಾರ ಮೂಲದ ಮಹ್ಮದ್ ಶಮ್ಶದ್ ಎಂಬುವನು ಧಾರವಾಡದಲ್ಲಿ ಮಲ್ಲಿಕಾರ್ಜುನ್ ಎಂಬುವರಿಗೆ ಚಾಕಲೇಟ್ ತನ್ನಿಸಿ ಪ್ರಜ್ಞೆ ತಪ್ಪಿಸಿ ಆತನ ಬಳಿ ಇದ್ದ ಒಂದೂವರೆ ತೊಲೆಯ ಬಂಗಾರದ ಚೈನ್ ಮತ್ತು 25 ಸಾವಿರ ಮೌಲ್ಯದ ವಿವೋ ಫೋನ್ ಕದ್ದು ಪರಾರಿಯಾಗಿದ್ದ. ಈ ಘಟನೆ ನಡೆದದ್ದು ನವೆಂಬರ್ 9 ರಂದು ನಗರದ ಶ್ರಿನಿವಾಸ ಚಿತ್ರಮಂದಿರದಲ್ಲಿ.
ಇನ್ನು ಎನ್ ಜಿ ಓ ದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಎಂಬುವರು ಸಿನಿಮಾ ನೋಡಲಿಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಮಲ್ಲಿಕಾರ್ಜುನ್ ಗೆ ಮಹ್ಮದ ಶಮ್ಶದ್ ಪರಿಚಯವಾಗುತ್ತೆ. ಪರಿಚಯದಿಂದ ಇಬ್ಬರು ಸೇರಿ ಚಲನಚಿತ್ರ ವೀಕ್ಷಣೆಗೆ ಹೋದಾಗ ಮಹ್ಮದ ಶಮ್ಶದ್ ಚಾಕಲೇಟ್ ಕೊಟ್ಡಿದ್ದಾನೆ. ಆ ಚಾಕಲೇಟ್ ನ ಮಲ್ಲಿಕಾರ್ಜುನ್ ತಿಂದು 10 ನಿಮಿಷದಲ್ಲಿ ಮೂರ್ಚೆ ಹೋಗುತ್ತಾನೆ. ಬಳಿಕ ಮಹ್ಮದ್ ಶಮ್ಶದ್ ಮಲ್ಲಿಕಾರ್ಜುನ್ ಬಳಿ ಇದ್ದ ಗೋಲ್ಡ ಚೈನ್ ಮತ್ತು ಮೋಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಜೊತೆಗೆ ಯಾವುದೇ ಕುರುಹುಗಳಿಲ್ಲದೆ ಒಂದೆ ತಿಂಗಳಲ್ಲಿ ಪ್ರಕರಣವನ್ನ ಬೇಧಿಸಿದ ಶಹರ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ..ಇನ್ನು ಈ ಬಿಹಾರ ಮೂಲದ ಮಹ್ಮದ್ ಶಮಶದ್ ನ ಜೊತೆ ಯಾರಿದಾರೆ..ಎನ್ನುವುದರ ಬಗ್ಗೆ ಪೋಲಿಸರು ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ.
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…