ಅತಿಯಾದ ಮದ್ಯ ಸೇವನೆಯಿಂದ ಅಮಲೇರಿದ ವ್ಯಕ್ತಿ, ಸರಿಯಾಗಿ ಬೆಳಕಿಲ್ಲದ ಪ್ರದೇಶದಲ್ಲಿ ಕುಳಿತಿದ್ದಾಗ ಹೆಬ್ಬಾವು ಆತನ ಮೇಲೆ ಹರಿದಾಡಿತು. ಹಾವು ಆತನ ದೇಹಕ್ಕೆ ಸುತ್ತಿಕೊಂಡಿರುವುದನ್ನು ಗಮನಿಸಿದ ನೆರೆಹೊರೆಯವರು ಎಚ್ಚರಿಕೆ ನೀಡಿದರೂ, ಮದ್ಯಪಾನ ಮಾಡಿದ ವ್ಯಕ್ತಿ ಅಪಾಯದ ಬಗ್ಗೆ ಗಮನ ಹರಿಸಲಿಲ್ಲ.
ಈ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಓಕ್ ಮಂಡಲದ ಸಿಂಗನಪಲ್ಲಿಯಲ್ಲಿ ನಡೆದಿದೆ.
ಅದೃಷ್ಟವಶಾತ್, ಹೆಬ್ಬಾವು ಆತನನ್ನು ಕಚ್ಚುವ ಮೊದಲು ಸ್ಥಳೀಯರು ಮುಂದೆ ಬಂದು ಆತನನ್ನು ಹೆಬ್ಬಾವಿನಿಂದ ರಕ್ಷಣೆ ಮಾಡಿದ್ದಾರೆ.