ಪಕ್ಷಿಗಳಿಗೆ ನೂಲುಗಳ ಉರುಳು: ದೊಡ್ಡಬಳ್ಳಾಪುರದ ವಿವಿಧ ಕಡೆಗಳಲ್ಲಿ ಗಾಳಿಪಟದ ದಾರ, ಕಸದಲ್ಲಿ ನೂಲುಗಳಿಂದ ಪಕ್ಷಿಗಳ ಸಾವು: ನಗರ ಭಾಗದಲ್ಲಿ ಹೆಚ್ಚಿನ ಪಕ್ಷಿಗಳಿಗೆ ಸಮಸ್ಯೆ

ದೊಡ್ಡಬಳ್ಳಾಪುರದಲ್ಲಿ ಗಾಳಿಪಟದ ದಾರ, ವ್ಯರ್ಥವಾಗಿ ಎಸೆಯಲಾಗುವ ನೂಲುಗಳು ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಸಾಕಷ್ಟು ಪಕ್ಷಿಗಳು ಇದರಿಂದ ಸಮಸ್ಯೆಗೆ ಸಿಲುಕುತ್ತಿದೆ.

ದೊಡ್ಡಬಳ್ಳಾಪುರದಲ್ಲಿ ಕೈಗಾರಿಕೆಗಳು ಬೆಳೆದಂತೆ ಮರಗಳ ಸಂಖ್ಯೆ, ಕೃಷಿವಲಯದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ನಗರಭಾಗದಲ್ಲಿ ಪಕ್ಷಿಗಳ ಪ್ರಮಾಣದಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷಿಗಳ ಸಂತತಿ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅನುಪಯುಕ್ತವಾದ ನೂಲುಗಳನ್ನು ಕೆರೆಯಂಗಳದಲ್ಲಿ , ಹರಿದ ಬಲೆಗಳನ್ನು ಕೆರೆಗಳ ಬಳಿ ಹಾಕುವುದರಿಂದ ಹಾಗೂ ಗಾಳಿಪಟ ಹಾರಿಸುವುದ ಪರಿಣಾಮವಾಗಿ ಪಕ್ಷಿಗಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ನೂಲುಗಳು ಪಕ್ಷಿಗಳ ಕಾಲು, ರೆಕ್ಕೆ, ಕೊಕ್ಕಿಗೆ ಸಿಲುಕಿ ಸಮಸ್ಯೆಗೆ ಗುರಿಯಾಗಿರುವ ಕೆಲವೆಡೆ ಸಾವನಪ್ಪಿರುವ ಘಟನೆಗಳು ನಡೆದಿದೆ. ಇದರ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು ಪಕ್ಷಿಗಳ ಸಂತತಿಯ ಉಳಿವಿಗಾಗಿ ಎಲ್ಲರೂ ಕೆಲಸ ಮಾಡಬೇಕಿದೆ.

ನೂಲುಗಳ ಸಂಕಷ್ಟ
ಗಾಳಿಪಟದ ದಾರಗಳು ಸಿಲುಕಿ ಮನುಷ್ಯರಿಗೆ ಸಮಸ್ಯೆಯಾದ ಸಾಕಷ್ಟು ಉದಾಹರಣೆ ಇವೆ. ಇದೇ ರೀತಿಯಲ್ಲಿ ಗಾಳಿಪಟ ದಾರಕ್ಕೆ ಸಿಲುಕಿ ಪಕ್ಷಿಗಳ ಕತ್ತು , ರೆಕ್ಕೆಗಳು ಕತ್ತರಿಸಿ ಹೋಗಿ ಅವುಗಳ ಸಾವನಪ್ಪಿರುವ ಅನೇಕ ಘಟನೆಗಳಿವೆ. ಇನ್ನೂ ಮೀನಿನ ಬಲೆಯ ಚೂರುಗಳು, ಸೀರೆಗಳ ಅನುಪಯುಕ್ತ ನೂಲುಗಳು ಈ ಪಕ್ಷಿಗಳ ಕಾಲು, ಕೊಕ್ಕು, ರೆಕ್ಕೆಗೆ ಸಿಲುಕಿ ಅವುಗಳು ಹಾರಲಾರದೆ, ಆಹಾರ ಸೇವಿಸಲಾಗದೆ ಪರದಾಡುವ ಪರಿಸ್ಥಿತಿಯಿದೆ. ಕೆಲವು ದಿನಗಳವರೆಗೆ ಇದು ತೆಗೆಯಲಾಗದಿದ್ದಾಗ ಅವುಗಳು ಸಾವನಪ್ಪಿರುವ ಉದಾಹರಣೆಗಳನ್ನು ಕೂಡ ಕಾಣಬಹುದಾಗಿದೆ.

ಏನಾಗಬೇಕು?
* ಗಾಳಿಪಟ ಹಾರಿಸುವ ಅಪಾಯದ ಬಗ್ಗೆ ಅರಿವು
* ಪಕ್ಷಿಗಳ ಮಹತ್ವದ ಬಗ್ಗೆ ಜಾಗೃತಿ
* ನೂಲುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
* ಹರಿದ ಬಲೆಗಳನ್ನು ಕೆರೆಯಂತಹ ಜಲಮೂಲಗಳಿಗೆ ಹಾಕುವುದಕ್ಕೆ ಕಡಿವಾಣ ಹಾಕಬೇಕು.

ದೊಡ್ಡಬಳ್ಳಾಪುರ ನಗರದಲ್ಲಿ ಸಾಕಷ್ಟು ಪಕ್ಷಿಗಳು ಗಾಳಿಪಟದ ದಾರ, ನೂಲಿನಿಂದ ಸಾವನಪ್ಪುತ್ತಿವೆ. ಇದರಿಂದ ಸಾಕಷ್ಟು ಪಕ್ಷಿಗಳು ಮರೆಯಾಗುತ್ತಿದ್ದು, ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ- ಚಿದಾನಂದಮೂರ್ತಿ ಆಧ್ಯಕ್ಷ, ಯುವಸಂಚಲನ ಸಂಘಟನೆ.

Ramesh Babu

Journalist

Recent Posts

ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್: ಮನೆಯಲ್ಲಿ ದಟ್ಟ ಹೊಗೆ: ಭಯಭೀತರಾದ ಜನ: ತಪ್ಪಿದ ಭಾರೀ ಅನಾಹುತ

ಮೊಬೈಲ್ ಚಾರ್ಜ್ ಆಗುತ್ತಿರುವಾಗ ಶಾರ್ಟ್ ಸರ್ಕಿಟ್ ಆಗಿ ಮನೆಯಲ್ಲಿ ದಟ್ಟಹೊಗೆ ಆವರಿಸಿಕೊಂಡು ಕೆಲಕಾಲ ಎಲ್ಲರಲ್ಲಿ ಆತಂಕ ಮೂಡಿಸಿದ್ದ ಘಟನೆ ದೊಡ್ಡಬಳ್ಳಾಪುರ…

3 hours ago

ವೈಚಾರಿಕ ( ವೈಜ್ಞಾನಿಕ ) ಅಧ್ಯಾತ್ಮ………

ಅಧ್ಯಾತ್ಮ ಮತ್ತು ಸದ್ಗುರು ಜಗ್ಗಿ ವಾಸುದೇವ್........ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು. ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ…

4 hours ago

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ: ಪಾಕಿಸ್ತಾನ ತಂಡವನ್ನು 61 ರನ್ ಗಳಿಂದ ಬಗ್ಗುಬಡಿದ ಭಾರತ: ದೇಶದ ಜನತೆಗೆ ಮಹಾಶಿವರಾತ್ರಿ ಗಿಫ್ಟ್

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ…

5 hours ago

ಫೆ.26ರಂದು ಪ್ರಸಿದ್ದ ಮಧುರೆ ಶನಿಮಹಾತ್ಮಸ್ವಾಮಿ 71ನೇ ಬ್ರಹ್ಮರಥೋತ್ಸವ

ಫೆ.26ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಚಿಕ್ಕಮಧುರೆ ಶ್ರೀ ಶನಿಮಹಾತ್ಮಸ್ವಾಮಿಯ 71ನೇ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕ…

15 hours ago

Accident Update: ನೆಲಮಂಗಲದ ಜಿಂದಾಲ್‌ ಸಮೀಪ ಭೀಕರ ಅಪಘಾತ: ಅಪಘಾತದಲ್ಲಿ ದೊಡ್ಡಬಳ್ಳಾಪುರದ ಐವರ ಸಾವು ಕೇಸ್: ಮೃತರಲ್ಲಿ ಮೂವರ ಕಣ್ಣುಗಳ ದಾನ

ನೆಲಮಂಗಲದ ಜಿಂದಾಲ್‌ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ…

16 hours ago

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಫಾರ್ಮ್ ಪಾರ್ಟಿ: ಸಂತಸದಿಂದ ಪ್ರಾಣಿಗಳ ಜೊತೆಯಲ್ಲಿ ಸಮಯ ಕಳೆದ ವಿದ್ಯಾರ್ಥಿಗಳು ಮತ್ತು ಪೋಷಕರು

ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಶನಿವಾರದಂದು ನಡೆದ ಸೈನ್ಸ್ ಫೆಸ್ಟ್ ನಂತರ ಮಕ್ಕಳಿಗೆ ಮತ್ತು ಪೋಷಕರಿಗೆ ಮನರಂಜನೆ ಉಣಬಡಿಸುವ ಪ್ರಯುಕ್ತ ಮಧ್ಯಾಹ್ನ…

16 hours ago