ದೊಡ್ಡಬಳ್ಳಾಪುರದಲ್ಲಿ ಗಾಳಿಪಟದ ದಾರ, ವ್ಯರ್ಥವಾಗಿ ಎಸೆಯಲಾಗುವ ನೂಲುಗಳು ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಸಾಕಷ್ಟು ಪಕ್ಷಿಗಳು ಇದರಿಂದ ಸಮಸ್ಯೆಗೆ ಸಿಲುಕುತ್ತಿದೆ.
ದೊಡ್ಡಬಳ್ಳಾಪುರದಲ್ಲಿ ಕೈಗಾರಿಕೆಗಳು ಬೆಳೆದಂತೆ ಮರಗಳ ಸಂಖ್ಯೆ, ಕೃಷಿವಲಯದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಅದರಲ್ಲೂ ನಗರಭಾಗದಲ್ಲಿ ಪಕ್ಷಿಗಳ ಪ್ರಮಾಣದಲ್ಲಿ ಸಾಕಷ್ಟು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷಿಗಳ ಸಂತತಿ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅನುಪಯುಕ್ತವಾದ ನೂಲುಗಳನ್ನು ಕೆರೆಯಂಗಳದಲ್ಲಿ , ಹರಿದ ಬಲೆಗಳನ್ನು ಕೆರೆಗಳ ಬಳಿ ಹಾಕುವುದರಿಂದ ಹಾಗೂ ಗಾಳಿಪಟ ಹಾರಿಸುವುದ ಪರಿಣಾಮವಾಗಿ ಪಕ್ಷಿಗಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ನೂಲುಗಳು ಪಕ್ಷಿಗಳ ಕಾಲು, ರೆಕ್ಕೆ, ಕೊಕ್ಕಿಗೆ ಸಿಲುಕಿ ಸಮಸ್ಯೆಗೆ ಗುರಿಯಾಗಿರುವ ಕೆಲವೆಡೆ ಸಾವನಪ್ಪಿರುವ ಘಟನೆಗಳು ನಡೆದಿದೆ. ಇದರ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು ಪಕ್ಷಿಗಳ ಸಂತತಿಯ ಉಳಿವಿಗಾಗಿ ಎಲ್ಲರೂ ಕೆಲಸ ಮಾಡಬೇಕಿದೆ.
ನೂಲುಗಳ ಸಂಕಷ್ಟ
ಗಾಳಿಪಟದ ದಾರಗಳು ಸಿಲುಕಿ ಮನುಷ್ಯರಿಗೆ ಸಮಸ್ಯೆಯಾದ ಸಾಕಷ್ಟು ಉದಾಹರಣೆ ಇವೆ. ಇದೇ ರೀತಿಯಲ್ಲಿ ಗಾಳಿಪಟ ದಾರಕ್ಕೆ ಸಿಲುಕಿ ಪಕ್ಷಿಗಳ ಕತ್ತು , ರೆಕ್ಕೆಗಳು ಕತ್ತರಿಸಿ ಹೋಗಿ ಅವುಗಳ ಸಾವನಪ್ಪಿರುವ ಅನೇಕ ಘಟನೆಗಳಿವೆ. ಇನ್ನೂ ಮೀನಿನ ಬಲೆಯ ಚೂರುಗಳು, ಸೀರೆಗಳ ಅನುಪಯುಕ್ತ ನೂಲುಗಳು ಈ ಪಕ್ಷಿಗಳ ಕಾಲು, ಕೊಕ್ಕು, ರೆಕ್ಕೆಗೆ ಸಿಲುಕಿ ಅವುಗಳು ಹಾರಲಾರದೆ, ಆಹಾರ ಸೇವಿಸಲಾಗದೆ ಪರದಾಡುವ ಪರಿಸ್ಥಿತಿಯಿದೆ. ಕೆಲವು ದಿನಗಳವರೆಗೆ ಇದು ತೆಗೆಯಲಾಗದಿದ್ದಾಗ ಅವುಗಳು ಸಾವನಪ್ಪಿರುವ ಉದಾಹರಣೆಗಳನ್ನು ಕೂಡ ಕಾಣಬಹುದಾಗಿದೆ.
ಏನಾಗಬೇಕು?
* ಗಾಳಿಪಟ ಹಾರಿಸುವ ಅಪಾಯದ ಬಗ್ಗೆ ಅರಿವು
* ಪಕ್ಷಿಗಳ ಮಹತ್ವದ ಬಗ್ಗೆ ಜಾಗೃತಿ
* ನೂಲುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
* ಹರಿದ ಬಲೆಗಳನ್ನು ಕೆರೆಯಂತಹ ಜಲಮೂಲಗಳಿಗೆ ಹಾಕುವುದಕ್ಕೆ ಕಡಿವಾಣ ಹಾಕಬೇಕು.
ದೊಡ್ಡಬಳ್ಳಾಪುರ ನಗರದಲ್ಲಿ ಸಾಕಷ್ಟು ಪಕ್ಷಿಗಳು ಗಾಳಿಪಟದ ದಾರ, ನೂಲಿನಿಂದ ಸಾವನಪ್ಪುತ್ತಿವೆ. ಇದರಿಂದ ಸಾಕಷ್ಟು ಪಕ್ಷಿಗಳು ಮರೆಯಾಗುತ್ತಿದ್ದು, ಅವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ- ಚಿದಾನಂದಮೂರ್ತಿ ಆಧ್ಯಕ್ಷ, ಯುವಸಂಚಲನ ಸಂಘಟನೆ.
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…
ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…
2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…
ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…