ದೊಡ್ಡಬಳ್ಳಾಪುರ ಕೋರ್ಟ್ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದಲ್ಲದೇ ದಂಡ ಕೂಡ ವಿಧಿಸಿದರು.
ನ್ಯಾಯಾಧೀಶರ ಸೂಚನೆ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಜಪ್ತಿ ಮಾಡಿ ಕೆಲವೊಂದು ವಾಹನಗಳ ಮಾಲೀಕರಿಗೆ ದಂಡ ಕೂಡ ವಿಧಿಸಿದರು.
ಇನ್ನು ಮುಂದೆ ನಿಗದಿತ ವಾಹನ ನಿಲುಗಡೆ ಸ್ಥಳದಲ್ಲಿ ಮಾತ್ರ ವಾಹನಗಳನ್ನು ಪಾರ್ಕ್ ಮಾಡುವಂತೆ ಎಚ್ಚರಿಸಿದರು.
ನ್ಯಾಯಾಲಯದ ಒಳಗಡೆ ಪ್ರವೇಶಿಸುವ ಮುನ್ನ ಸಾರ್ವಜನಿಕರು ಕೆಲವೊಂದು ಶಿಸ್ತುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇ ಬೇಕಾಗಿರುತ್ತದೆ. ಸಾರ್ವಜನಿಕರು ತಮ್ಮ ಮೊಬೈಲ್ ಗಳನ್ನು ಸೈಲೆಂಟ್ ಅಥವಾ ಸ್ವೀಚ್ ಆಫ್ ಮಾಡತಕ್ಕದು. ನ್ಯಾಯಾಲಯದ ಆವರಣದಲ್ಲಿ ತಂಬಾಕು ಹಾಗೂ ಧೂಮಪಾನ ಮಾಡಬಾರದು. ಸಾರ್ವಜನಿಕರು ನ್ಯಾಯಾಲಯವನ್ನು ದೇವಾಲಯದಂತೆ ಪರಿಗಣಿಸಿ ಶಿಸ್ತಿನಿಂದ ವರ್ತಿಸುವುದು… ನ್ಯಾಯಾಲಯ ಕಲಾಪ ನಡೆಯುತ್ತಿರುವಾಗ ನಿಶ್ಯಬ್ಧವಾಗಿರುವುದು. ನ್ಯಾಯಾಲಯದ ಒಳಭಾಗದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ನಿಂತು ಮಾತನಾಡಬಾರದು. ನ್ಯಾಯಾಲಯ ಒಳಂಗಣದಲ್ಲಿ ಉಗುಳುವುದು.. ಪ್ಲಾಸ್ಟಿಕ್ ಬಾಟಲ್ ಗಗಳನ್ನು ಹಾಕದೆ ಸ್ವಚ್ಛತೆ ಕಾಪಾಡುವುದು.. ನ್ಯಾಯಾಲಯದಲ್ಲಿನ ಶೌಚಲಯವನ್ನು ಸ್ವಚ್ಛತೆಯಿಂದಿಡುವುದು.. ಕಕ್ಷಿದಾರರು ವಕೀಲರೊಂದಿಗೆ ಸೌಜನ್ಯದಿಂದ ವರ್ತಿಸುವುದು… ಸೇರಿದಂತೆ ಇತರೆ ಶಿಸ್ತುಗಳನ್ನು ಪಾಲನೆ ಮಾಡಬೇಕು….
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಮುಸ್ಲಿಂ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರನ್ನು ಧಾರವಾಡ ನಗರದ ಹಾಶ್ಮಿನಗರದಲ್ಲಿ ಇರುವ ಮನೆಯಲ್ಲೇ ಹತ್ಯೆ ಮಾಡಿರುವ ಘಟನೆ…
ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ…