ನೀರಿನಲ್ಲಿ ಯುವತಿಯ ಶವ ಪತ್ತೆ ಪ್ರಕರಣ: ಪಿಯುಸಿ ಫೇಲ್: ಮನನೊಂದ ಯುವತಿ ಆತ್ಮಹತ್ಯೆ ಶಂಕೆ

ನೀರಿನ ಹೊಂಡಾದಲ್ಲಿ ಯುವತಿಯ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ರಾಗರಾಳ್ಳುಗುಟ್ಟೆ ಬಳಿ‌ ಇಂದು ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದಿದೆ.

ತಾಲೂಕಿನ ಮೆಳೇಕೋಟೆ ಮೂಲದ ಉಮೇಶ್ ಪುತ್ರಿ ರೂಪಶ್ರೀ(18), ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ..

ಇತ್ತೀಚೆಗೆ ದ್ವಿತಿಯಾ ಪಿಯುಸಿ ಫಲಿತಾಂಶ ಹೊರಬಂದಿತ್ತು. ಮೃತ ಯುವತಿ ಪಿಯುಸಿಯಲ್ಲಿ‌ ಫೇಲಾಗಿದ್ದಳು ಎಂದು ತಿಳಿದುಬಂದಿದೆ.‌ ಫೇಲಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತ ಯುವತಿ ಗಡ್ಡಂಬಚ್ಚಳ್ಳಿಯ ಅಜ್ಜಿ‌ಮನೆಯಲ್ಲಿ ವಾಸವಿದ್ದಳು ಎಂದು ತಿಳಿದುಬಂದಿದೆ..

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ..

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

Leave a Reply

Your email address will not be published. Required fields are marked *