ನಿವೃತ್ತ ಯೋಧನಿಗೆ ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ

ದೇಶ ರಕ್ಷಣೆಗಾಗಿ 23 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಯೋಧನಿಗೆ ಮದಗೊಂಡನಹಳ್ಳಿ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಯೋಧನಾಗಿ ಜಮ್ಮು-ಕಾಶ್ಮೀರ_ ಜೈಪುರ್ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ತನ್ನ ಗ್ರಾಮಕ್ಕೆ ಮರಳಿದ ಯೋಧನಿಗೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದವರು ಶ್ರೀ ಶಕ್ತಿ ಸಂಘದ ಮಹಿಳೆಯರು, ಶಾಲಾ ಮಕ್ಕಳು ಸ್ನೇಹಿತರು ಸೇರಿ ಕಾಡನೂರು ಕೈಮರದ ಗೇಟ್‌ನಿಂದ ಬೈಕ್ ರ‌್ಯಾಲಿ ಮೂಲಕ ಪೂರ್ಣ ಕುಂಭ ಸ್ವಾಗತ ಕೋರಿ‌ ಮೆರವಣಿಗೆ ಮೂಲಕ ಊರಿಗೆ ಬರ ಮಾಡಿಕೊಂಡರು.

ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ಮೂಲಕ ಗ್ರಾಮಕ್ಕೆ ಕರೆತಂದ ನಂತರ ಗ್ರಾಮದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತಿಸಿದರು.

ತಾನು ವ್ಯಾಸಂಗ ಮಾಡಿದ ಗ್ರಾಮದ ಶಾಲೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಸೈನಿಕ
ಎಂ. ಆರ್. ಶ್ರೀನಿವಾಸ್ ದೇಶ ಬಲಿಷ್ಠವಾಗಬೇಕಾದರೆ
ಸೈನ್ಯ ಬಲಿಷ್ಠವಾಗಿರಬೇಕು ಎಂದು ಹೇಳಿದರು.

ತನ್ನ 23 ವರ್ಷದ ಸೇವಾ ಅನುಭವವನ್ನು ವಿಸ್ತಾರವಾಗಿ ವಿವರಿಸಿದ ಅವರು ಪ್ರತಿಯೊಂದು ಮನೆಯಲ್ಲೂ ಒಬ್ಬೊಬ್ಬ ಯೋಧ ದೇಶ ಸೇವೆಗೆ ದಾವಿಸಬೇಕು ಆಗ ದೇಶ ಬಲಿಷ್ಠವಾಗುತ್ತದೆ ನಾನು ಸೈನಿಕ ವೃತ್ತಿಯಲ್ಲಿದ್ದು ನಿವೃತ್ತನಾಗಿದ್ದು ನನ್ನ ಮಗನನ್ನು ನಾನು ಸೈನಿಕನನ್ನಾಗಿ ಮಾಡಬೇಕು ಎಂಬ ಹಂಬಲ ನನಗಿದೆ ದೇಶ ಸೇವೆಯೇ ಈಶ ಸೇವೆ ಎಂದರು.

ಮದಗೊಂಡನಹಳ್ಳಿ ನಿವಾಸಿ ಕನಕರಾಜ್ ಮಾತನಾಡಿ ನಮ್ಮೂರಿನ ಹಿರಿಮೆ ಹೆಚ್ಚಿಸಿ, ಮುಂದಿನ ಪೀಳಿಗೆಗೆ ಮಾದರಿಯಾಗಿರುವ ನಮ್ಮೂರಿನ ಬಾಲಕನೊಬ್ಬ ದೇಶ ಸೇವೆಗೆ ಆಯ್ಕೆಯಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯ ರೈತನ ಮಗ, ಯೋಧನಾಗಿ ಸೇವೆ ಸಲ್ಲಿಸಿದ್ದು ಜೈ ಜವಾನ್ ಜೈ ಕಿಸಾನ್ ಘೋಷಣೆಗೆ ಹಿಡಿದ ಕನ್ನಡಿ ಎಂದರು.

ಈ ವೇದಿಕೆಯಲ್ಲಿ ಕೆಸ್ತೂರು ವಿಎಸ್ಎಸ್ಎನ್ ನಿರ್ದೇಶಕರಾದ ಕೆ.ಎಚ್. ಮಾರೆಗೌಡ್ರು,
ನಾರಾಯಣಪ್ಪ, ಮುಖ್ಯ ಶಿಕ್ಷಕಿ ಮಂಜುಳಾ ನಂಜೇಗೌಡ, ಹೇಮೇಂದ್ರ, ಮನು ಕುಮಾರ್ಮು, ಕೇಶ್ ನಾಗೇಶ್, ಶಿವ ಕುಮಾರ್, ಚಂದ್ರಶೇಖರ್, ಚೇತನ್ ಹಾಗೂ ಬೋಧಕ, ಬೋಧಕೇತರ ವರ್ಗ, ಅಕ್ಕಪಕ್ಕದ ಗ್ರಾಮದವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *