ನಿಗದಿತ ದಿನಾಂಕಗಳಂದೇ ರಾಗಿ ತರಲು ರೈತರಿಗೆ ಮನವಿ

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ದೊಡ್ಡಬಳ್ಳಾಪುರದ ಗುಂಡಮಗೆರೆ ಕ್ರಾಸ್ ಬಳಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮುಗಳಲ್ಲಿ ಸ್ಥಾಪಿಸಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರಾಗಿ ತರುತ್ತಿರುವುದರಿಂದ ಜನಸಂದಣಿ ಉಂಟಾಗುತ್ತಿದೆ.

ನೋಂದಣಿ ಸಮಯದಲ್ಲಿ ನೀಡಿರುವ ನಿಗದಿತ ದಿನಾಂಕಗಳಂದೇ ರೈತರು ತಮ್ಮ ರಾಗಿ ತರಬೇಕು. ಎಲ್ಲಾ ನೋಂದಾಯಿತ ರೈತರ ರಾಗಿ ದಾಸ್ತಾನನ್ನು ತೆಗೆದುಕೊಳ್ಳಲಾಗುವುದು. ರೈತಬಾಂಧವರು ಯಾವುದೇ ಆತಂಕಕ್ಕೆ ಒಳಗಾಗದೇ ತಮಗೆ ನೀಡಿರುವ ದಿನಾಂಕಗಳಂದೇ ರಾಗಿಯ‌ನ್ನು ಖರೀದಿ ಕೇಂದ್ರಕ್ಕೆ ತರಬೇಕು ಎಂದು ತಿಳಿಸಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿ

ಹೆಚ್ಚಿನ ವಿವರಗಳಿಗೆ 99640 90996,90368 78847. ಅಥವಾ 63660 21925 ಖರೀದಿ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *