ನಾಯಿಗಳನ್ನು ಬೇಟೆಯಾಡಲು ವಿಫಲಪ್ರಯತ್ನ ನಡೆಸಿದ ಚಿರತೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಬೈಯ್ಯಪ್ಪನಹಳ್ಳಿ ಗ್ರಾಮದ ಮಂಗಳಮ್ಮ ಅವರ ತೋಟಕ್ಕೆ ಚಿರತೆ ನುಗ್ಗಿ ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಬೇಟೆಯಾಡಲು ವಿಫಲಪ್ರಯತ್ನ ನಡೆಸಿರುವ ವಿಡಿಯೋ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ತಡ ರಾತ್ರಿ ತೋಟದ ಮನೆಯ ಬಳಿ ಬಂದಿರುವ ಚಿರತೆ ನಾಯಿಗಳನ್ನು ಹಿಡಿಯಲು ಕಾಲುವೆಯಲ್ಲಿ ಅವಿತು ಹೊಂಚು ಹಾಕಿದೆ.

ಇದನ್ನು ಗಮನಿಸಿದ ಎರಡು ನಾಯಿಗಳು ಜೋರಾಗಿ ಬೊಗಳಿವೆ. ಗಲಾಟೆ ಹೆಚ್ಚಾಗುತ್ತಲೇ ಹಾಗೂ ತೋಟದಲ್ಲಿ ಅಳವಡಿಸಿರುವ ಸೋಲಾರ್ ಸಿ.ಸಿ. ಟಿವಿ ಕ್ಯಾಮರ ಮುಂದೆ ರಾತ್ರಿ ವೇಳೆ ಯಾವುದಾದರು ಪ್ರಾಣಿ, ಮನುಷ್ಯ ಬಂದರೆ ಬೆಳಕು ಬರುತ್ತದೆ. ಈ ರೀತಿಯ ಬೆಳಕು ಬಂದಿರುವುದರಿಂದಲು ಸಹ ಚಿರತೆ ಗಾಬರಿಗೊಂಡ ಓಡಿ ಹೋಗಿದೆ.

Leave a Reply

Your email address will not be published. Required fields are marked *