ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಮುತ್ತೈದೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ನೀಡುವುದು ವಾಡಿಕೆ

ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಮುಂಜಾನೆಯಿಂದಲೇ ಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲು ಜನ ಮುಂದಾಗುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಂದು, ಮುತ್ತೈದೆಯರಿಗೆ ಅರಿಶಿನ-ಕುಂಕುಮ ನೀಡುವುದರ ಜೊತೆಗೆ, ಹಸಿರು ಬಳೆಗಳನ್ನು ನೀಡುವುದು ವಾಡಿಕೆಯಾಗಿದೆ. ಹಸಿರು ಬಣ್ಣವು ಸಮೃದ್ಧಿ, ಸಂತೋಷ ಮತ್ತು ಹೊಸ ಆರಂಭಗಳ ಸಂಕೇತವಾಗಿದೆ. ಈ ಹಬ್ಬದಲ್ಲಿ, ಮುತ್ತೈದೆಯರು ಅರಿಶಿನ-ಕುಂಕುಮ ಮತ್ತು ಬಳೆಗಳನ್ನು ಸ್ವೀಕರಿಸುವ ಮೂಲಕ, ಲಕ್ಷ್ಮೀ ದೇವಿಯ ಆಶೀರ್ವಾದ ಮತ್ತು ಸೌಭಾಗ್ಯವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ವರಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ ಹೀಗಿದೆ….

ಸಿಂಹ ಲಗ್ನ ಪೂಜೆ ಮುಹೂರ್ತ: ಮುಂಜಾನೆ 06:29 ರಿಂದ ಬೆಳಗ್ಗೆ 08:46ರವರೆಗೆ. ಮುಂಜಾನೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 17 ನಿಮಿಷಗಳು. ಮಧ್ಯಾಹ್ನ ಪೂಜೆಗೆ ಶುಭ ಮುಹೂರ್ತ: ಮಧ್ಯಾಹ್ನ 1:22 ರಿಂದ 3:41. ಮಧ್ಯಾಹ್ನ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 19 ನಿಮಿಷ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಸಂಜೆ 7:27 ರಿಂದ ರಾತ್ರಿ 8:54 ರವರೆಗೆ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 1 ಗಂಟೆ 27 ನಿಮಿಷ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಆಗಸ್ಟ್‌ 8ರಂದು ರಾತ್ರಿ 11:55 ರಿಂದ ಆಗಸ್ಟ್‌ 9ರಂದು ಮುಂಜಾನೆ 01:50 ರವರೆಗೆ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಅವಧಿ: ಗಂಟೆ 56 ನಿಮಿಷ.

Leave a Reply

Your email address will not be published. Required fields are marked *

error: Content is protected !!