ನಾಟಿ ಔಷಧಿ ಕುಡಿದು ಮಗು ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಚಿಕ್ಕಬಳ್ಳಾಪುರ: ನಾಟಿ ಔಷಧಿಯಿಂದ 8 ವರ್ಷದ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟ ಪಾ‍ಳ್ಯದಲ್ಲಿ ನಡೆದಿದೆ.

ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್(8) ಮೃತಪಟ್ಟ ಬಾಲಕ. ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿಗೂ ನೀಡಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರೂ ಅಸ್ವಸ್ಥಗೊಂಡಿದ್ದು ಕೂಡಲೇ ತಂದೆ-ಮಗಳು ಆಸ್ಪತ್ರೆ ಸೇರಿದರೆ 8 ವರ್ಷದ ಬಾಲಕ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವೇದೇಶ್ ಎಂಬ ಮಗುವಿಗೆ ಕಿವಿಯ ಬಳಿ ಅಲರ್ಜಿ ಆಗಿರುತ್ತದೆ. ನಾನಾ ಕಡೆ ಚಿಕಿತ್ಸೆ ಕೊಡಿಸಿದರೂ ಕೂಡ ಅಲರ್ಜಿ ಕಡಿಮೆ ಆಗಿರಲಿಲ್ಲ. ಹಾಗಾಗಿ ಅಕ್ಕ ಪಕ್ಕದ ಮನೆಯವರು, ಈ ರೀತಿಯ ಸಮಸ್ಯೆಗಳಿಗೆ ಮಂತ್ರ ಹಾಕಿ ಔಷಧಿ ನೀಡುತ್ತಾರೆ ಎಂದು ಭೋಯಿನಹಳ್ಳಿಯ ಸತ್ಯನಾರಾಯಣ ಎಂಬಾತನ ಹೆಸರನ್ನು ಹೇಳುತ್ತಾರೆ. ಜನರ ಮಾತನ್ನೇ ನಂಬಿಕೊಂಡು ಸತ್ಯನಾರಾಯಣ ಬಳಿ ಹೋಗುತ್ತಾರೆ. ಮೊದಲು ಮಗುವನ್ನು ನೋಡಿ ಇದು ಒಂದೇ ಬಾರಿ ವಾಸಿ ಆಗಲ್ಲ. ನೀವು ಮೂರು ಬಾರಿ ಬರಬೇಕು ಎಂದು ಮಂತ್ರವಾದಿ ಹೇಳುತ್ತಾನೆ. ಮಂತ್ರವಾದಿಯ ಮಾತನ್ನು ಕೇಳಿ ಈಗ ಮಗುವನ್ನು ಕಳೆದುಕೊಂಡಿದೆ.

ಮಂತ್ರವಾದಿ ಬಳಿ ತೋರಿಸಿದಾಗ, ಮಂತ್ರ ಹಾಕಿದ್ದೇನೆ ಒಂದು ಔಷಧವನ್ನು ನೀಡುತ್ತೇನೆ, ಅದನ್ನ ಮೂರು ದಿನ ಕುಡಿಸಿ ಎಂದು ಹೇಳಿ ಒಂದು ಔಷಧಿಯನ್ನು ಕೊಡುತ್ತಾನೆ. ಅವನ ಮಾತನ್ನು ನಂಬಿಕೊಂಡು ಮಗುವಿಗೆ ಔಷಧಿ ಕೊಡುತ್ತಾರೆ. ಔಷಧಿ ತುಂಬಾ ಕಹಿ ಇದೆ ಎಂದು ಮಗು ಕುಡಿಯಲು ಹಠ ಮಾಡಿದಾಗ ಮಗುವಿನ ತಂದೆ ಮತ್ತು ಅಕ್ಕ ಕೂಡ ಹಠ ಮಾಡುತ್ತಿದ್ದ ಮಗುವಿನ ಮುಂದೆಯೇ ಕುಡಿದು ಆ ಮಗುವಿಗೂ ಕುಡಿಸುತ್ತಾರೆ.

ಈ ವೇಳೆ ಮಗು ಹೊಟ್ಟೆ ಉರಿ ಎಂದು ಒದ್ದಾಡುತ್ತಿರುತ್ತದೆ. ಆಗ ನಾಟಿ ಔಷಧಿ ವೈದ್ಯನಿಗೆ ಕರೆ ಮಾಡಿದಾಗ, ಆ ಔಷಧಿ ಹಾಗೇ, ಸ್ವಲ್ಪ‌ ಹೊತ್ತು ಹೋದರೆ ಎಲ್ಲಾ ಸರಿ ಹೋಗುತ್ತೆ ಎಂದು ಹೇಳುತ್ತಾನೆ. ಅಷ್ಟರ ವೇಳೆ ತಂದೆ ಮತ್ತು ಮಗಳಿಗೂ ಇದರ ಎಫೆಕ್ಟ್ ಕಾಣಿಸುತ್ತದೆ. ತಕ್ಷಣ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ವೈದ್ಯರು ಚಿಕಿತ್ಸೆ ನೀಡಿದ ಕಾರಣ ತಂದೆ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗುತ್ತಾರೆ. ಆದರೆ ಮೂರು ದಿನಗಳಿಂದ ಗಂಡು ಮಗು ವೇದೇಶ್ ಗೆ ನಾಟಿ ಔಷಧಿ ಕುಡಿಸಿದ್ದ ಕಾರಣ ಮಗು ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪುತ್ತಾನೆ.

ಒಟ್ಟಾರೆ ಯಾರೋ ಮಂತ್ರವಾದಿಗಳು, ನಾಟಿ ವೈದ್ಯರು ಹೇಳಿದರು ಎಂದು ಕುರುಡಾಗಿ ನಂಬಿ ಅವರು ಹೇಳಿದ ಮಾತು ಕೇಳಿವ ವ್ಯಕ್ತಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ. ನಾಟಿ ವೈದ್ಯನ ಮಾತು ಕೇಳಿ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರು ದಿಕ್ಕು ದೋಚದ ಪರಿಸ್ಥಿತಿಗೆ ತಲುಪಿದ್ದಾರೆ.

Ramesh Babu

Journalist

Recent Posts

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

4 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

17 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

19 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

19 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

19 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

24 hours ago