ನಮ್ಮೂರಿನಲ್ಲಿ ಒಬ್ಬ ಆಧುನಿಕ ಹರಿಶ್ಚಂದ್ರನಂತೆ ಶವಗಳಿಗೆ ಮುಕ್ತಿ ನೀಡುವ ಕರ್ಮಯೋಗಿ ಲಕ್ಷ್ಮಮ್ಮ; ಕಾಯಕಯೋಗಿ ಲಕ್ಷ್ಮಮ್ಮ ಅವರಿಗೆ ನನ್ನದೊಂದು ಸಲಾಮ್

ಮನುಷ್ಯನಿಗೆ ಕಂಠದಲ್ಲಿ ಉಸಿರು ಇರೋವರೆಗೆ ಮಾತ್ರ ಬೆಲೆ, ಸತ್ತ ಮೇಲೆ ಬೆಲೆ ಇದ್ದರೂ ಅದನ್ನು ಬದಿಗೊತ್ತಿ ಮೂರು ಕಾಸಿಗೂ ಬೆಲೆ ಇಲ್ಲದ ಹಾಗೆ ನಡೆಸಿಕೊಳ್ಳುವ ಉದಾಹರಣೆ ಕಂಡಿದ್ದೇವೆ. ಅದೇ ರೀತಿ ಬದುಕಿದ್ದಾಗ ಭೂಮಿ‌ ಮೇಲೆ ಏನಿಕ್ಕೆ ಇದಾನೋ ಎಂದು ಹೇಳಿ ಸತ್ತಾಗ ಹೋದ್ನಲ್ಲಪ್ಪಾ…. ಎಂದು ಮೊಸಳೆ ಕಣ್ಣೀರಿಡುವವರನ್ನು ಕಂಡಿದ್ದೇವೆ. ಮನುಷ್ಯ ಸತ್ತ ಮೇಲೆ ನಗು ನಗುತಾ.. ಕಳುಹಿಸಿಕೊಟ್ಟರೆ ಮುಕ್ತಿ ಸಿಗುತ್ತೆ ಎಂಬ ಮಾತಿದೆ, ಅದು ಎಷ್ಟು ಸರಿನೋ ಗೊತ್ತಿಲ್ಲ.

ನಮ್ಮೂರಲ್ಲಿ ಒಂದು‌ ಮುಕ್ತಿಧಾಮ ಇದೆ, ಇದು ಆರಂಭವಾದಾಗ ಶವಗಳನ್ನು ಸುಡುವ ಕಾಯಕಕ್ಕೆ ಗಂಡ-ಹೆಂಡತಿ ತೊಡಗಿಸಿಕೊಂಡಿರುತ್ತಾರೆ. ಏಳು ವರ್ಷಗಳ ಹಿಂದೆ ಗಂಡ‌ ಅದೇ ಸ್ಥಳದಲ್ಲಿ ಮರಣ ಹೊಂದುತ್ತಾರೆ. ತನ್ನ ಗಂಡ ಇಲ್ಲ ಎಂದು ಬೇರೆಡೆ ಹೋಗಿ ಕೆಲಸ ಮಾಡದೇ ಅದೇ ಕೆಲಸವನ್ನು ಒಬ್ಬೊಂಟಿಯಾಗಿ ಸತತವಾಗಿ ಏಳು ವರ್ಷಗಳಿಂದ ಅಸುನೀಗಿದ ಶವಗಳಿಗೆ ಹಮ್ಮು-ಬಿಮ್ಮು ಇಲ್ಲದೇ ಧೈರ್ಯದಿಂದ ಆಧುನಿಕ ಹರಿಶ್ಚಂದ್ರನಂತೆ ಮುಕ್ತಿ ನೀಡುವ ಕಾಯಕ ಮಾಡಿಕೊಂಡು ಬರುತ್ತಿರುವ ವ್ಯಕ್ತಿ ಯಾರೆಂದರೆ ಅವರೆ ದಿಟ್ಟ ಮಹಿಳೆ ಲಕ್ಷ್ಮಮ್ಮ.

ಈಕೆ ಸುಮಾರು 7 ವರ್ಷಗಳಿಂದ ಹೆಣ ಸುಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.  ಸಹಾಯಕನಿಂದ ಮೊದಲೆ ಶವ ಸುಡುವ ಸಿಲಿಕಾನ್ ಪೆಟ್ಟಿಗೆಯಲ್ಲಿ ಕಟ್ಟಿಗೆಯನ್ನು ಜೋಡಿಸಿ ಇಟ್ಟಿಕೊಂಡಿರುತ್ತಾರೆ ಶವ ಬಂದ ಕೂಡಲೇ ವಿಧಿ ವಿಧಾನಾಗಳನ್ನು ಪೂರೈಸಿ ಸುಡಲಾಗುತ್ತದೆ. ಒಂದು ಹೆಣ ಸಂಪೂರ್ಣವಾಗಿ ಸುಡಲು 5ರಿಂದ 6ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅಂತ್ಯ ಸಂಸ್ಕಾರ ಮುಗಿದ ಕೂಡಲೇ ಬೂದಿಯನ್ನು ತೆಗೆದು ಸಿಲಿಕಾನ್ ಪೆಟ್ಟಿಗೆ ಸ್ವಚ್ಚಗೊಳಿಸಿ ಮತ್ತೊಂದು ಶವದ ಸಂಸ್ಕಾರಕ್ಕೆ ಅಣಿಯಾಗುತ್ತಾರೆ, ಇಲ್ಲಿಯ ವರೆಗೂ ಸುಮಾರು 5 ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕಲ್ಪಿಸಿದ ಕೀರ್ತಿ ಲಕ್ಷ್ಮಮ್ಮ ದಂಪತಿಗೆ ಸಲ್ಲುತ್ತದೆ.

2019-2020 ವೇಳೆಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ಅಟ್ಟಹಾಸ ಹೆಚ್ಚಾಗಿ ಪ್ರತಿನಿತ್ಯ ಸಾವಿಗೀಡಾಗುವವರ ಸಂಖ್ಯೆ ಏರುತ್ತಲೆ ಇತ್ತು, ಜಿಲ್ಲಾಡಳಿತಕ್ಕೆ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವುದು ದೊಡ್ಡ ತಲೆ ನೋವಾಗಿ ಪರಣಮಿಸಿತ್ತು, ಆಗ ಸಹಕಾರ ನೀಡಿದ್ದು ಇದೇ ಮುಕ್ತಿಧಾಮದಲ್ಲಿ ಕೆಲಸ ಮಾಡುವ ಲಕ್ಷ್ಮಮ್ಮ.

ಕೋವಿಡ್ ಸಂದರ್ಭದಲ್ಲಿ ಮುಕ್ತಿಧಾಮದ ಮುಂದೆ ಪ್ರತಿ ನಿತ್ಯ ಶವಗಳು ದಹನಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದವು, ಈ ಸಂದರ್ಭದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆ ಸಹಜ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಸಮಯ ನಿಗದಿ ಮಾಡಿ ಮತ್ತೆ ಸಂಜೆ 5 ರಿಂದ ಮಧ್ಯ ರಾತ್ರಿ ಸುಮಾರು 12 ರಿಂದ 1 ಗಂಟೆಯ ವರೆಗೆ ದೇವಾಂಗ ಮಂಡಳಿ , ತಾಲ್ಲೂಕು ಆಡಳಿತ, ನಗರಸಭೆ ಸಹಕಾರದೊಂದಿಗೆ ಲಕ್ಷ್ಮಮ್ಮ ನೂರಾರು ಶವಗಳ ಸಂಸ್ಕಾರ ನೆರವೇರಿಸಿದ್ದಾರೆ.

ಇವರ ಸೇವೆಗೆ ಮೆಚ್ಚಿ ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.

ಒಟ್ಟಾರೆ ಈಕೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಒಬ್ಬ ಮಹಿಳೆ ಎಲ್ಲಾ ಕೆಲಸವನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಮಹಿಳೆ. ಆದ್ದರಿಂದ ಈಕೆಯ ಸೇವೆಗೆ  ನನ್ನದೊಂದು‌ ಸಲಾಮ್‌.

Ramesh Babu

Journalist

Recent Posts

ಗಣೇಶ ಹಬ್ಬದ ಸಂಭ್ರಮದ ನಡುವೆ ಮಸಣವಾದ ಮನೆ: ಅಗ್ನಿ ದುರಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…

2 hours ago

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

14 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

14 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

15 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

20 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

1 day ago