ಮನುಷ್ಯನಿಗೆ ಕಂಠದಲ್ಲಿ ಉಸಿರು ಇರೋವರೆಗೆ ಮಾತ್ರ ಬೆಲೆ, ಸತ್ತ ಮೇಲೆ ಬೆಲೆ ಇದ್ದರೂ ಅದನ್ನು ಬದಿಗೊತ್ತಿ ಮೂರು ಕಾಸಿಗೂ ಬೆಲೆ ಇಲ್ಲದ ಹಾಗೆ ನಡೆಸಿಕೊಳ್ಳುವ ಉದಾಹರಣೆ ಕಂಡಿದ್ದೇವೆ. ಅದೇ ರೀತಿ ಬದುಕಿದ್ದಾಗ ಭೂಮಿ ಮೇಲೆ ಏನಿಕ್ಕೆ ಇದಾನೋ ಎಂದು ಹೇಳಿ ಸತ್ತಾಗ ಹೋದ್ನಲ್ಲಪ್ಪಾ…. ಎಂದು ಮೊಸಳೆ ಕಣ್ಣೀರಿಡುವವರನ್ನು ಕಂಡಿದ್ದೇವೆ. ಮನುಷ್ಯ ಸತ್ತ ಮೇಲೆ ನಗು ನಗುತಾ.. ಕಳುಹಿಸಿಕೊಟ್ಟರೆ ಮುಕ್ತಿ ಸಿಗುತ್ತೆ ಎಂಬ ಮಾತಿದೆ, ಅದು ಎಷ್ಟು ಸರಿನೋ ಗೊತ್ತಿಲ್ಲ.
ನಮ್ಮೂರಲ್ಲಿ ಒಂದು ಮುಕ್ತಿಧಾಮ ಇದೆ, ಇದು ಆರಂಭವಾದಾಗ ಶವಗಳನ್ನು ಸುಡುವ ಕಾಯಕಕ್ಕೆ ಗಂಡ-ಹೆಂಡತಿ ತೊಡಗಿಸಿಕೊಂಡಿರುತ್ತಾರೆ. ಏಳು ವರ್ಷಗಳ ಹಿಂದೆ ಗಂಡ ಅದೇ ಸ್ಥಳದಲ್ಲಿ ಮರಣ ಹೊಂದುತ್ತಾರೆ. ತನ್ನ ಗಂಡ ಇಲ್ಲ ಎಂದು ಬೇರೆಡೆ ಹೋಗಿ ಕೆಲಸ ಮಾಡದೇ ಅದೇ ಕೆಲಸವನ್ನು ಒಬ್ಬೊಂಟಿಯಾಗಿ ಸತತವಾಗಿ ಏಳು ವರ್ಷಗಳಿಂದ ಅಸುನೀಗಿದ ಶವಗಳಿಗೆ ಹಮ್ಮು-ಬಿಮ್ಮು ಇಲ್ಲದೇ ಧೈರ್ಯದಿಂದ ಆಧುನಿಕ ಹರಿಶ್ಚಂದ್ರನಂತೆ ಮುಕ್ತಿ ನೀಡುವ ಕಾಯಕ ಮಾಡಿಕೊಂಡು ಬರುತ್ತಿರುವ ವ್ಯಕ್ತಿ ಯಾರೆಂದರೆ ಅವರೆ ದಿಟ್ಟ ಮಹಿಳೆ ಲಕ್ಷ್ಮಮ್ಮ.
2019-2020 ವೇಳೆಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ಅಟ್ಟಹಾಸ ಹೆಚ್ಚಾಗಿ ಪ್ರತಿನಿತ್ಯ ಸಾವಿಗೀಡಾಗುವವರ ಸಂಖ್ಯೆ ಏರುತ್ತಲೆ ಇತ್ತು, ಜಿಲ್ಲಾಡಳಿತಕ್ಕೆ ಕೋವಿಡ್ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವುದು ದೊಡ್ಡ ತಲೆ ನೋವಾಗಿ ಪರಣಮಿಸಿತ್ತು, ಆಗ ಸಹಕಾರ ನೀಡಿದ್ದು ಇದೇ ಮುಕ್ತಿಧಾಮದಲ್ಲಿ ಕೆಲಸ ಮಾಡುವ ಲಕ್ಷ್ಮಮ್ಮ.
ಇವರ ಸೇವೆಗೆ ಮೆಚ್ಚಿ ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿದೆ. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.
ಒಟ್ಟಾರೆ ಈಕೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಒಬ್ಬ ಮಹಿಳೆ ಎಲ್ಲಾ ಕೆಲಸವನ್ನು ಮಾಡಬಹುದು ಎಂದು ತೋರಿಸಿಕೊಟ್ಟ ಮಹಿಳೆ. ಆದ್ದರಿಂದ ಈಕೆಯ ಸೇವೆಗೆ ನನ್ನದೊಂದು ಸಲಾಮ್.
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…