ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಸಮೀಪ ಅಪರಿಚಿತ ಶವ ಪತ್ತೆಯಾಗಿದೆ. ಕಾರ್ಮಿಕನೆಂದು ತಿಳಿದು ಬಂದಿದ್ದು, ಆತನ ಸಾವಿಗೆ ಕಾರಣ ತಿಳಿದು ಬಂದಿರುವುದಿಲ್ಲ.
ಶವದ ಬಳಿ ಸಿಕ್ಕಿರುವ ಕೆಎಸ್ ಆರ್ ಟಿಸಿ ಬಸ್ ಪಾಸ್ ನಲ್ಲಿ ಬಿ.ಎಸ್.ಸುರೇಶ್ ಕುಮಾರ್(34), ತಿಳಿದು ಬಂದಿದೆ, ಮೃತ ವ್ಯಕ್ತಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಮಿಕನಾಗಿದ್ದು, ತೊಂಡೆಬಾವಿ -ದೊಡ್ಡಬಳ್ಳಾಪುರ ಮಾರ್ಗದಲ್ಲಿ ಬಸ್ ಪಾಸ್ ಪಡೆದು ಕೊಂಡಿದ್ದಾನೆ.
ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.