
ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ ಮೋಟಾರ್ ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ…
ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ 2 ದ್ವಿಚಕ್ರ ವಾಹನಗಳು ಸೇರಿದಂತೆ, ಒಟ್ಟು 11 ವಿವಿಧ ಕಂಪನಿಯ ಮೋಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಪತ್ತೆ ಮಾಡುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳಾದ, ಟಿ. ಮುರಳಿ, ಮಹಮದ್ ಅಲ್ಲಾವುದೀನ್, ಅರ್ಜುನ್ ಗೌಡ, ನರಸಿಂಹಯ್ಯ ಮತ್ತು ಸಿಬ್ಬಂದಿ ಮಹೇಶ್, ಮಂಜುನಾಥ್, ಹೆಚ್.ಎನ್ ರವಿ, ರವಿಚಂದ್ರ, ನರೇಶ್, ಆಸಿಫ್, ಮಹದೇವ್ & ಶಾರದಮ್ಮ ರವರ ತಂಡವು ಯಶಸ್ವಿಯಾಗಿರುತ್ತದೆ.