
ಕಳೆದ ಮೂರು ದಿನಗಳಿಂದ ನಡೆದ “ದೊಡ್ಡಬಳ್ಳಾಪುರ ಸ್ಯಾರಿ ಸಂತೆ”ಗೆ ಭಾನುವಾರ ಅದ್ಧೂರಿಯಾಗಿ ತೆರೆ ಕಂಡಿತು. ಮೂರು ದಿನಗಳ ಕಾಲ ಲಕ್ಷಾಂತರ ಮಂದಿ ಸ್ಯಾರಿ ಸಂತೆ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಂತಿಮ ದಿನವಾದ ಭಾನುವಾರ ಖ್ಯಾತ ಸಂಗೀತ ಮಾಂತ್ರಿಕ ರಘು ದೀಕ್ಷಿತ್ ತಂಡದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2 ಕೋಟಿಗೂ ಅಧಿಕ ವಹಿವಾಟು
ಮೂರು ದಿನಗಳ ಕಾಲ ನಡೆದ ಸ್ಯಾರಿ ಸಂತೆ ಮಹಿಳೆಯ ಮನ ಗೆದ್ದಿದ್ದಲ್ಲದೆ, ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಆಯೋಜಕರ ಪ್ರಕಾರ ಸುಮಾರು 2 ಕೋಟಿ ರೂ. ಗು ಅಧಿಕ ವ್ಯಾಪಾರ ಆಗಿದೆ ಎನ್ನಲಾಗಿದೆ.

ಭಾರತದ ಮ್ಯಾಂಜೆಸ್ಚರ್ ಅಂತಾನೇ ದೊಡ್ಡಬಳ್ಳಾಪುರ ನಗರವನ್ನು ಕರೆಯಲಾಗುತ್ತಿದೆ, ನೇಕಾರಿಕೆ ಇಲ್ಲಿನ ಮೂಲ ವೃತ್ತಿ, ಇತ್ತಿಚೇಗೆ ಸೂರತ್ ಸೀರೆಗಳಿಂದ ಇಲ್ಲಿನ ನೇಕಾರಿಕೆ ನೆಲಕಚ್ಚಿತ್ತು, ನೇಕಾರರು ಸಂಕಷ್ಟದಲ್ಲಿದ್ದರು, ದೊಡ್ಡಬಳ್ಳಾಪುರ ಸೀರೆಗಳಿಗೆ ಮಾರುಕಟ್ಟೆಯನ್ನ ಕಲ್ಪಿಸ ಬೇಕೆನ್ನುವ ಉದ್ದೇಶದಿಂದ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ದೊಡ್ಡಬಳ್ಳಾಪುರ ಸ್ಯಾರಿ ಸಂತೆ ಕಾರ್ಯಕ್ರಮವನ್ನು ಶಾಸಕರಾದ ಧೀರಜ್ ಮುನಿರಾಜು ಅಯೋಜನೆ ಮಾಡಿದ್ದರು.

ಸ್ಯಾರಿ ಸಂತೆಯಲ್ಲಿ ದೊಡ್ಡಬಳ್ಳಾಪುರ ನೇಕಾರರು ತಾವು ನೇಯ್ದ ಸೀರೆಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು, ಸುಮಾರು 75 ಸೀರೆ ಮಾರಾಟ ಮಳಿಗೆಗಳನ್ನ ನೇಕಾರರು ಹಾಕಿದ್ದರು, ಸ್ಯಾರಿ ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ, ಇದರಿಂದ ನೇಕಾರರು ಖುಷಿಗೊಂಡಿದ್ದಾರೆ.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ನಮ್ಮ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ರೈತಪರವಾರ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಹೈನುಗಾರಿಕೆ, ಫ್ಲೋರಿ ಕಲ್ಚರ್ ಗೆ ಬೋರ್ಡ್ ಸ್ಥಾಪನೆಗೆ ಲೋಕಸಭೆಯಲ್ಲಿ ಖಾಸಗಿ ಬಿಲ್ ಮಂಡಿಸಿದ್ದಾರೆ. ಅದೇ ರೀತಿ ನೇಕಾರರ ಮಳಿಗೆ ಕಟ್ಟಲು ಸರ್ಕಾರದಲ್ಲಿ ಅನುದಾನ ಇಲ್ಲ ನಿಮ್ಮ ಅನುದಾನದಲ್ಲಿ ಹಣ ಮೀಸಲಿಡಬೇಕು ಅದೇ ರೀತಿ ಹ್ಯಾಂಡ್ ಲೂಮ್ ರಿಸರ್ವೇಶನ್ ಆಕ್ಟ್ ನಂತೆ ಪವರ್ ಲೂಂ ರಿಸರ್ವೇಶನ್ ಆಕ್ಟ್ ಜಾರಿಗೆ ತಂದು ನೇಕಾರರ ಸಂಕಷ್ಟ ನೀಗಿಸಬೇಕು ಎಂದು ಮನವಿ ಮಾಡಿದರು.