ದೊಡ್ಡಬಳ್ಳಾಪುರ ನಂದು ಇಲ್ಲಿಗೆ ಯಾರೇ ಬರಲಿ….. ಎಂದು ಡೈಲಾಗ್ ಹೊಡೆದ ಶಿವಣ್ಣ….

ದೊಡ್ಡಬಳ್ಳಾಪುರ ನನಗೆ ಹೊಸದೇನಲ್ಲ. ಮನಮೆಚ್ಚಿದ ಹುಡುಗಿ, ತವರಿಗೆ ಬಾ ತಂಗಿ, ವಾಲ್ಮೀಕಿ ಸಿನಿಮಾಗಳನ್ನು ಇಲ್ಲಿ ಮಾಡಿದ್ದೇನೆ. ಕೆ.ಸಿ.ಎನ್ ಗೌಡರು ಅನ್ನದಾತರು ಎಂದು ಅಪ್ಪಾಜಿ ಹೇಳುತ್ತಿದ್ದರು ಎಂದು ಹೇಳಿದ ಡಾ.ಶಿವರಾಜ್ ಕುಮಾರ್.

ನಿಮ್ಮ ಪ್ರೀತಿಗೆ ನಾನು ಚಿರಋಣಿ. ದೊಡ್ಡಬಳ್ಳಾಪುರ ನಂದು ಇಲ್ಲಿಗೆ ಯಾರೇ ಬರಲಿ….. ಎಂದು ಡೈಲಾಗ್ ಹೊಡೆದ ಶಿವಣ್ಣ. ಹಾಗೇ ಅಭಿಮಾನಿಗಳ ಅಪೇಕ್ಷೆಯಂತೆ ಮುತ್ತಣ್ಣ ಪೀಪಿ ಊದೂವ ಸೇರಿದಂತೆ ಅಪ್ಪು ಅವರ ಸಿನಿಮಾದ ಹಾಡುಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದ ಶಿವಣ್ಣ…

ಶಿವಣ್ಣ ಹಾಡಿಗೆ ಅಭಿಮಾನಿಗಳಿಂದ ಶಿಣ್ಣೆ, ಚಪ್ಪಾಳೆ ಹೊಡೆದರು. ಹಾಡು ಹಾಡುತ್ತಾ ಒಂದೆರೆಡು ಸ್ಟೆಪ್ಸ್ ಹಾಕಿದ ಭಜರಂಗಿ. ಶಿವಣ್ಣ ಹಾಡು ಹಾಡುವಾಗ ಅಭಿಮಾನಿಗಳಿಂದ ಮೊಬೈಲ್ ಹಿಡಿದು ರೆಕಾರ್ಡ್ ಮಾಡಿಕೊಂಡರು. ಶಿವಣ್ಣ ಹಾಡಿಗೆ ಧ್ವನಿಗೂಡಿಸಿದ ಅಭಿಮಾನಿಗಳು.

Leave a Reply

Your email address will not be published. Required fields are marked *

error: Content is protected !!