ಮನೆಗಳಿಗೆ ಕನ್ನ ಹಾಕಲು ಹೊಂಚಾಕಿ ಕುಳಿತ್ತಿದ್ದ ಕಳ್ಳರು, ಕಳೆದ ರಾತ್ರಿ ಸುಮಾರು 9:15ರ ಸಮಯದಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಮನೆ ಬಳಿ ಹೋಗಿ, ಬಾಗಿಲು ಮುರಿದು ದೇವರ ಮನೆಯಲ್ಲಿದ್ದ ಸುಮಾರು 80 ಸಾವಿರ ನಗದು ದೋಚಿ ಎಸ್ಕೇಪ್ ಆಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಪಾಲನಜೋಗಿಹಳ್ಳಿ ರಸ್ತೆಯ ಎಪಿಎಂಸಿ ವೆಸ್ಟ್ ಗೇಟ್ ಎದುರಿನ ಸುಭಾಷ್ ನಗರದಲ್ಲಿರುವ ಮನೆಯಲ್ಲಿ ನಡೆದಿದೆ….
ಅರುಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ…. ಅರುಣ್ ರವರು ವರಮಹಾಲಕ್ಷ್ಮಿ ಹಬ್ಬದಂದು ದೇವರ ಮನೆಯಲ್ಲಿ ವರಲಕ್ಷ್ಮಿ ಪೂಜೆ ಮಾಡಿ ದೇವರ ಬಳಿ ಸುಮಾರು 80 ಸಾವಿರ ಇಟ್ಟಿದ್ದರು, ಹಬ್ಬ ಮುಗಿದು ಹಲವು ದಿನಗಳಾದರೂ ಈ ಹಣವನ್ನು ತೆಗೆದುಕೊಳ್ಳದೇ ದೇವರ ಮನೆಯಲ್ಲಿ ಹಾಗೇ ಬಿಟ್ಟಿದ್ದರು. ಇದೀಗ ಕಳ್ಳರ ಪಾಲಾಗಿದೆ….
ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ…
ನನ್ನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ನಂತರ ಆಸ್ಪತ್ರೆಯಿಂದ ಮತ್ತೆ ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು ಊಟ ಮಾಡಿಕೊಂಡು ಬರಲು ಹೆಂಡತಿ ಮನೆಗೆ ಹೋಗಿದ್ದೆ. ಊಟ ಮಾಡಿಕೊಂಡು ರಾತ್ರಿ ಸುಮಾರು 9:30ರಲ್ಲಿ ಮನೆಗೆ ವಾಪಸ್ ಬಂದು ನೋಡುವಷ್ಟರಲ್ಲಿ ಮನೆ ಬಾಗಿಲು ಮುರಿದಿತ್ತು, ಕಿಟಿಕಿ ಗಾಜಿಗೆ ಕಲ್ಲು ಬಿದ್ದು, ಕಿಟಕಿ ಗಾಜುಗಳು ಕೆಳಗೆ ಬಿದ್ದಿತ್ತು, ದೇವರ ಮನೆಯಲ್ಲಿದ್ದ 80 ಸಾವಿರ ನಗದು ದೋಚಿದ ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ಅರುಣ್ ಹೇಳಿದ್ದಾರೆ.
ಇತ್ತೀಚೆಗೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಂಗಡಿ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಶುಕ್ರವಾರ ರಾತ್ರಿಯಷ್ಟೇ ನಗರದ ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಫರ್ನೀಚರ್ಸ್ ಹಾಗೂ ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ಯತ್ನ ನಡೆದಿತ್ತು. ಬುಧವಾರದಂದು ತೂಬಗೆರೆ ಗ್ರಾಮದ ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳರ ಕೈಚಳಕ ಕಂಡುಬಂದಿತ್ತು. ಅದೇ ದಿನ ಹಾಡೋನಹಳ್ಳಿಯಲ್ಲಿ ಎರಡು ಮೇಕೆ ಹೋತಗಳನ್ನು ಕದ್ದಿದ್ದರು. ಇದೀಗ ಮನಗೆ ಕನ್ನ ಹಾಕಿದ್ದಾರೆ….
ಕಳ್ಳರ ಕಾಟದಿಂದ ದೊಡ್ಡಬಳ್ಳಾಪುರ ಜನತೆ ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕೂಡಲೇ ಕಳ್ಳರ ಜಾಡು ಹಿಡಿದು ಬಂಧಿಸಿ, ಇನ್ನುಮುಂದೆ ಯಾವುದೇ ಕಳ್ಳತನದ ಕೃತ್ಯಗಳು ಮರುಕಳಿಸದಂತೆ ಎಚ್ವರವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…