ದುಷ್ಕರ್ಮಿಗಳಿಂದ ಹೇಯ ಕೃತ್ಯ: ಫಸಲುಯುಕ್ತ ದ್ರಾಕ್ಷಿ ತೋಟ ನಾಶ

ಮನುಷ್ಯ ಮನುಷ್ಯರ ಮಧ್ಯೆ ದ್ವೇಶ ಈರ್ಶೆಗಳೆಷ್ಟಿದ್ದರೆ ನೇರ ನೇರ ಫೈಟ್ ಮಾಡಿಕೊಳ್ಳಲಿ. ಅದರ ಬದಲಿಗೆ ಪ್ರಕೃತಿ ಸೌಂದರ್ಯದ ಮೇಲೆ ದೌರ್ಜನ್ಯ ತೋರುವ ಮೂಲಕ ರೋಷಾವೇಶ ತೋರ್ಪಡಿಸಿಕೊಳ್ಳೋದು ಎಷ್ಟು ಸರಿ…. ಅಂತದೊಂದು ಘಟನೆಗೆ ತಡರಾತ್ರಿ ಚಿಕ್ಕಬಳ್ಳಾಪುರದ ಗ್ರಾಮವೊಂದರಲ್ಲಿ ನಡೆದಿದೆ….

ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ-ಕಡಶೀಗನಹಳ್ಳಿ ಮಧ್ಯೆ ಇರುವ ಕಾಂತಮ್ಮ ನಾರಾಯಣಸ್ವಾಮಿ ಹೆಸರಿಗೆ ಸೇರಿದ ಎರಡು ಎಕರೆಯಲ್ಲಿ ಹಾಕಿದ್ದ ದ್ರಾಕ್ಷಿ ತೋಟ ಫಸಲಿಗೆ ಬಂದಿತ್ತು.

ತಡರಾತ್ರಿ ಏಕಾಏಕಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 50 ರಿಂದ 60 ದ್ರಾಕ್ಷಿ ಗಿಡಗಳು,‌ ದ್ರಾಕ್ಷಿ ಚಪ್ಪರದ ಚಪ್ಪಡಿಗಳು, ಪೆನ್ಸಿಂಗ್ ಮೆಶ್ ಬಲೆ, ದ್ರಾಕ್ಷಿಗೆ ಅಳವಡಿಸಿದ್ದ ಡ್ರಿಪ್ ಪೈಪುಗಳನ್ನು ಕತ್ತರಿಸಿ ನೆಳಕ್ಕುರುಳಿಸಿದ್ದಾರೆ.

ಸುಮಾರು ಇಪ್ಪತೈದು ಜನ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಕೃತ್ಯದಿಂದ ಸುಮಾರು ಹತ್ತು ಲಕ್ಷದಷ್ಟು ನಷ್ಟ ಹೊಂದಿರಬಹುದು ಎನ್ನಲಾಗಿದೆ.

ಈ ಕೃತ್ಯದ ಬಗ್ಗೆ ಮಾತನಾಡಿರುವ ಮಾಲೀಕ ನಾರಾಯಣಸ್ವಾಮಿ, ರಸ್ತೆ ವಿಚಾರವಾಗಿ ಅಕಾಶ್, ರತ್ನಮ್ಮ, ಶಿವಕುಮಾರ್ ಕುಟುಂಬದ ಜತೆ ವ್ಯಾಜ್ಯವಿತ್ತು. ಈ ಹಿಂದೆಯೂ ಸಹ ಒಮ್ಮೆ ಹೀಗಾಗಿತ್ತು. ಆ ದಿನ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಕ್ರಮ ಜರುಗಿಸಲಿಲ್ಲ. ಅದೆ ದೈರ್ಯದ ಮೇಲೆ ಇವತ್ತು ಈ ಕೃತ್ಯ ಎಸಗಿದ್ದಾರೆ. ಒಂದು ವೇಳೆ ಅಷ್ಟೊತ್ತಲ್ಲಿ ನಾವೇನಾದ್ರು ಅಡ್ಡಬಂದಿದ್ದರೆ ನಮಗೂ ಸಾವು ಕಾದಿತ್ತೇನೋ ಎಂಬ ಅನುಮಾನ ವ್ಯಕ್ತಪಡಿಸಿದರು.

ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದೇವೆ. ಈ ಬಾರಿಯಾದ್ರು ಈ ಘಟನೆಗೆ ಕಾರಣರಾದವನ್ನ, ಅವರ ಹಿಂಬಾಲಕರನ್ನ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಅವಲತ್ತುಕೊಂಡಿದ್ದಾರೆ.

ನಾರಾಯಣಸ್ವಾಮಿ ಪುತ್ರ ಪ್ರದೀಪ್ ಮಾತನಾಡಿ, ರಾಕ್ಷಸರು ಮಾಡೋ ಕೆಲಸ ಮಾಡಿದ್ದಾರೆ. ಅವರ ಜತೆ ಬಂದಿದ್ದಂತಹ ಎಲ್ಲ ಗ್ಯಾಂಗ್ ನ್ನು ಬಂಧಿಸಬೇಕು. ಅವರನ್ನ ಬೀದಿಯಲ್ಲಿ ಮೆರವಣಿಗೆ ಮಾಡಬೇಕು. ಹಾಕಿದ್ದ ಬಂಡವಾಳ ಕೈಗೆ ಸಿಗುತ್ತೆ ಅಂತ ಆಸೆಗಣ್ಣುಗಳಿಂದ ಕಾಯುತಿದ್ದ ವೇಳೆ ಫಸಲು ತುಂಬಿದ ದ್ರಾಕ್ಷಿಯನ್ನ ಕತ್ತರಿಸಿ ಬಿಸಾಕಿದ ದರುಳರನ್ನ ಕೂಡಲೆ ಬಂಧಿಸಿ ಕ್ರಮ ಜರುಗಿಸಬೇಕೆಂದು ಎಸ್ ಪಿ ಕುಶಾಲ್ ಚೌಕ್ಸೆಯಲ್ಲಿ ಮನವಿ ಮಾಡಿದ್ದಾರೆ.

ಇನ್ನೂ ನಂದಿಗಿರಿಧಾಮ ಪೊಲೀಸರು ದೂರು ಬಂದ ಕೂಡಲೆ ಎಚ್ವೆತ್ತುಕೊಂಡು ಈ ಕೃತ್ಯದಲ್ಲಿ ಪಾಲ್ಗೊಂಡವರನ್ನ ಬಂಧಿಸಿ ಅನ್ಯಾಯಕ್ಕೊಳಗಾದ ರೈತರ ಅಳಲಿಗೆ ಸ್ಪಂದಿಸುವರೆ ಕಾದು ನೋಡಬೇಕಿದೆ….

Ramesh Babu

Journalist

Recent Posts

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

5 hours ago

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

17 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

18 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

19 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

19 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

1 day ago