ಮನುಷ್ಯ ಮನುಷ್ಯರ ಮಧ್ಯೆ ದ್ವೇಶ ಈರ್ಶೆಗಳೆಷ್ಟಿದ್ದರೆ ನೇರ ನೇರ ಫೈಟ್ ಮಾಡಿಕೊಳ್ಳಲಿ. ಅದರ ಬದಲಿಗೆ ಪ್ರಕೃತಿ ಸೌಂದರ್ಯದ ಮೇಲೆ ದೌರ್ಜನ್ಯ ತೋರುವ ಮೂಲಕ ರೋಷಾವೇಶ ತೋರ್ಪಡಿಸಿಕೊಳ್ಳೋದು ಎಷ್ಟು ಸರಿ…. ಅಂತದೊಂದು ಘಟನೆಗೆ ತಡರಾತ್ರಿ ಚಿಕ್ಕಬಳ್ಳಾಪುರದ ಗ್ರಾಮವೊಂದರಲ್ಲಿ ನಡೆದಿದೆ….
ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ-ಕಡಶೀಗನಹಳ್ಳಿ ಮಧ್ಯೆ ಇರುವ ಕಾಂತಮ್ಮ ನಾರಾಯಣಸ್ವಾಮಿ ಹೆಸರಿಗೆ ಸೇರಿದ ಎರಡು ಎಕರೆಯಲ್ಲಿ ಹಾಕಿದ್ದ ದ್ರಾಕ್ಷಿ ತೋಟ ಫಸಲಿಗೆ ಬಂದಿತ್ತು.
ತಡರಾತ್ರಿ ಏಕಾಏಕಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 50 ರಿಂದ 60 ದ್ರಾಕ್ಷಿ ಗಿಡಗಳು, ದ್ರಾಕ್ಷಿ ಚಪ್ಪರದ ಚಪ್ಪಡಿಗಳು, ಪೆನ್ಸಿಂಗ್ ಮೆಶ್ ಬಲೆ, ದ್ರಾಕ್ಷಿಗೆ ಅಳವಡಿಸಿದ್ದ ಡ್ರಿಪ್ ಪೈಪುಗಳನ್ನು ಕತ್ತರಿಸಿ ನೆಳಕ್ಕುರುಳಿಸಿದ್ದಾರೆ.
ಸುಮಾರು ಇಪ್ಪತೈದು ಜನ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಕೃತ್ಯದಿಂದ ಸುಮಾರು ಹತ್ತು ಲಕ್ಷದಷ್ಟು ನಷ್ಟ ಹೊಂದಿರಬಹುದು ಎನ್ನಲಾಗಿದೆ.
ಈ ಕೃತ್ಯದ ಬಗ್ಗೆ ಮಾತನಾಡಿರುವ ಮಾಲೀಕ ನಾರಾಯಣಸ್ವಾಮಿ, ರಸ್ತೆ ವಿಚಾರವಾಗಿ ಅಕಾಶ್, ರತ್ನಮ್ಮ, ಶಿವಕುಮಾರ್ ಕುಟುಂಬದ ಜತೆ ವ್ಯಾಜ್ಯವಿತ್ತು. ಈ ಹಿಂದೆಯೂ ಸಹ ಒಮ್ಮೆ ಹೀಗಾಗಿತ್ತು. ಆ ದಿನ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಕ್ರಮ ಜರುಗಿಸಲಿಲ್ಲ. ಅದೆ ದೈರ್ಯದ ಮೇಲೆ ಇವತ್ತು ಈ ಕೃತ್ಯ ಎಸಗಿದ್ದಾರೆ. ಒಂದು ವೇಳೆ ಅಷ್ಟೊತ್ತಲ್ಲಿ ನಾವೇನಾದ್ರು ಅಡ್ಡಬಂದಿದ್ದರೆ ನಮಗೂ ಸಾವು ಕಾದಿತ್ತೇನೋ ಎಂಬ ಅನುಮಾನ ವ್ಯಕ್ತಪಡಿಸಿದರು.
ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದೇವೆ. ಈ ಬಾರಿಯಾದ್ರು ಈ ಘಟನೆಗೆ ಕಾರಣರಾದವನ್ನ, ಅವರ ಹಿಂಬಾಲಕರನ್ನ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಅವಲತ್ತುಕೊಂಡಿದ್ದಾರೆ.
ನಾರಾಯಣಸ್ವಾಮಿ ಪುತ್ರ ಪ್ರದೀಪ್ ಮಾತನಾಡಿ, ರಾಕ್ಷಸರು ಮಾಡೋ ಕೆಲಸ ಮಾಡಿದ್ದಾರೆ. ಅವರ ಜತೆ ಬಂದಿದ್ದಂತಹ ಎಲ್ಲ ಗ್ಯಾಂಗ್ ನ್ನು ಬಂಧಿಸಬೇಕು. ಅವರನ್ನ ಬೀದಿಯಲ್ಲಿ ಮೆರವಣಿಗೆ ಮಾಡಬೇಕು. ಹಾಕಿದ್ದ ಬಂಡವಾಳ ಕೈಗೆ ಸಿಗುತ್ತೆ ಅಂತ ಆಸೆಗಣ್ಣುಗಳಿಂದ ಕಾಯುತಿದ್ದ ವೇಳೆ ಫಸಲು ತುಂಬಿದ ದ್ರಾಕ್ಷಿಯನ್ನ ಕತ್ತರಿಸಿ ಬಿಸಾಕಿದ ದರುಳರನ್ನ ಕೂಡಲೆ ಬಂಧಿಸಿ ಕ್ರಮ ಜರುಗಿಸಬೇಕೆಂದು ಎಸ್ ಪಿ ಕುಶಾಲ್ ಚೌಕ್ಸೆಯಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ನಂದಿಗಿರಿಧಾಮ ಪೊಲೀಸರು ದೂರು ಬಂದ ಕೂಡಲೆ ಎಚ್ವೆತ್ತುಕೊಂಡು ಈ ಕೃತ್ಯದಲ್ಲಿ ಪಾಲ್ಗೊಂಡವರನ್ನ ಬಂಧಿಸಿ ಅನ್ಯಾಯಕ್ಕೊಳಗಾದ ರೈತರ ಅಳಲಿಗೆ ಸ್ಪಂದಿಸುವರೆ ಕಾದು ನೋಡಬೇಕಿದೆ….
ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್ಆರ್ಟಿಸಿ ಬಸ್ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…
ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…
ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…
ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…
ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…