ದಲಿತ ಬರಹಗಾರರು ತಮ್ಮ ಸಮುದಾಯಕ್ಕೆ ಮುಖಮಾಡಿ ಮಾತನಾಡಬೇಕು, ಬೆನ್ನು ಮಾಡಿ ಅಲ್ಲ – ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ದಲಿತ ಬರಹಗಾರರು ತಮ್ಮ ಸಮುದಾಯಕ್ಕೆ ಮುಖಮಾಡಿ ಮಾತನಾಡಬೇಕು, ಬೆನ್ನು ಮಾಡಿ ಅಲ್ಲ. ತಮ್ಮ ಸುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ನಗರದ ಆರ್.ಡಿ.ಕನ್ವಂಷನ್ ಹಾಲ್ನಲ್ಲಿ ಭಾನುವಾರ ನಡೆದ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬಿಗ್ ಕನ್ನಡ ಸಹಯೋಗದಲ್ಲಿ ಪ್ರಕಟಿಸಲಾಗಿರುವ ಉಪನ್ಯಾಸಕ ಡಾ.ಪ್ರಕಾಶ್ ಮಂಟೇದ ಅವರು ಬರೆದಿರುವ ‘ಅರಿವೇ ಕಂಡಾಯ’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕ ಸಂಚಾರದ ಅನುಭವ ಇದ್ದಾಗ ಮಾತ್ರ ಭಾರತ ನಮಗೆ ಅರ್ಥವಾಗುವುದು ಸುಲಭವಾಗಲಿದೆ. ಸಾಮಾಜಿಕ ಸತ್ಯದ ಸಂಗತಿಗಳನ್ನು ಗುಣವಾಚಕಗಳು ಮುಚ್ಚಿಡುತ್ತವೆ. ಹಾಗಾಗಿ ಬರಹಗಾರರು ಗುಣವಾಚಕಗಳಿಗೆ ಒಳಗಾಗದೆ ಸಂವಾದಗಳನ್ನು ಹುಟ್ಟುಹಾಕಬೇಕು. ನಮ್ಮ ಇಂದಿನ ಓದು ಸಂವಿಧಾನಕ್ಕೆ ಬಂದು ನಿಂತಿದೆ, ಅದರಿಂದ ಮುಂದಕ್ಕೆ ಹೋಗಿಲ್ಲ. ಸಂವಿಧಾನದ ಅಚೆಗಿನ ಓದು ಈಗ ನಮ್ಮದಾಗಬೇಕಿದೆ. ಸದಾ ಜನ ಚಳುವಳಿಗಳ ಜೊತೆಗಿರುವವರು ಬರೆದಾಗ ಆದು ವಾಸ್ತವಕ್ಕೆ ಹತ್ತಿರವಾಗಿರಲಿದೆ. ನಮ್ಮ ಹೊಟ್ಟೆಯ ಹಸಿವು ನೀಗಿದ ತಕ್ಷಣ ಜ್ಞಾನದ ಹಸಿವನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ನಾವು ಸದಾ ಎಚ್ಚರವಹಿಸಬೇಕಾಗಿದೆ ಎಂದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರಗತಿಪರ ಚಿಂತಕ ಮಂಜುನಾಥ ಎಂ. ಅದ್ದೆ, ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ರಾಜಕಾರಣ ನಡೆಯಬೇಕು. ಆದರೆ ಈಗ ಒಬ್ಬರನ್ನು ಮತ್ತೊಬ್ಬರು ಬಗ್ಗುಬಡಿಯುವ ರಾಜಕಾರಣ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

ಭಾಷೆ ದುಡಿಯುವ ಜನರ ಗುರುತಿಸುವಿಕೆಯಾಗಿದೆ. ಹೆಚ್ಚು ವಿದ್ಯೆ ಕಲಿತವರಲ್ಲಿ ಜಾತಿ ವ್ಯವಸ್ಥೆ ಇಲ್ಲದಾಗಬೇಕಿತ್ತು. ಆದರೆ ವಿಶ್ವ ವಿದ್ಯಾಲಯಗಳಿಗೆ ಹೋಗುತ್ತಿದ್ದಂತೆ ಜಾತಿದಿಗಳಾಗಿ ರೂಪುಗೋಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಇದು ದುರಿತಕಾಲವಾಗಿದ್ದು, ಇಲ್ಲಿ ಜಾತಿ ಮೇಲಾಟದಲ್ಲಿ ಮುಳುಗದೆ ಮುನ್ನಡೆಯಬೇಕು. ಪ್ರಯೋಗಾಲಯದಲ್ಲಿ ಕಪ್ಪೆಯನ್ನು ಸೀಳುವಂತೆ ಸೀಳಿ ನೋಡುವುದನ್ನು ಬಿಟ್ಟು ನಡೆಯಬೇಕಾಗಿದೆ. ನಮ್ಮ ಹಕ್ಕುಗಳನ್ನು ಪಡೆಯುವ ಮಾರ್ಗ ಸದಾ ಕಾಲ ನ್ಯಾಯಯುತವಾಗಿರಬೇಕಾಗಿದೆ ಎಂದರು.

ಪುಸ್ತಕ ಕುರಿತು ಮಾತನಾಡಿದ ಪುಸ್ತಕ ಪ್ರಕಾಶಕ ಆಕೃತಿ ಗುರುಪ್ರಸಾದ್, ಪ್ರತಿ ನಿತ್ಯವು ರಾಜಕಾರಣ,ಪ್ರಸ್ತುತ ಸಂಗತಿಗಳ ಕುರಿತ ಅಂಕಣಗಳನ್ನು ಎಲ್ಲರು ಬರೆಯುತ್ತಾರೆ. ಆದರೆ ತಮ್ಮ ಸಮುದಾಯದ ಕುರಿತು ಅಂಕಗಳು ಬರೆಯುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಉಪನ್ಯಾಸಕ ಡಾ.ಪ್ರಕಾಶ್ ಮಂಟೇದ ಅವರ ‘ಅರಿವೇ ಕಂಡಾಯ’ ಅಂಕಣ ಬರಹಗಳ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ ಎಂದರು.

‘ಅರಿವೇ ಕಂಡಾಯ’ ಪುಸ್ತಕ ಕುರಿತು ಲೇಖಕಿ ಡಾ.ಕೆ.ವಿ.ನೇತ್ರಾವತಿ,ಡಾ.ರವಿಕುಮಾರ್ ನೀಹ,ಡಾ.ಸುಭಾಷ್ ರಾಜಮಾನೆ, ರವಿಕುಮಾರ್ ಬಾಗಿ ಮಾತನಾಡಿದರು. ಉದ್ಯಮಿ ಜಿ.ರಾಜಗೋಪಾಲ್, ಪ್ರಕಾಶಕಿ ಜಗದಾಂಬ ಇದ್ದರು.

Ramesh Babu

Journalist

Recent Posts

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣ: ಆರೋಪಿಗಳಾದ ಯಶಸ್ವಿನಿ, ಬೇಕರಿ ರಘು ದೊಡ್ಡಬಳ್ಳಾಪುರ ಕೋರ್ಟ್ ಗೆ ಶರಣು

ನಟ ಪ್ರಥಮ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು…

38 minutes ago

ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ……..

ನಮ್ಮ ನಿಷ್ಠೆ ಪ್ರಕೃತಿಗೆ....... ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ...... ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು.......…

4 hours ago

ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ಸಿಎಂ ಸಭೆ: ಸಭೆಯ ಪ್ರಮುಖಾಂಶಗಳು ಇಲ್ಲಿವೆ ಓದಿ…

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಮತ್ತು ಶಾಸಕರುಗಳ ಜೊತೆ ನಡೆಸಿದ ಸಭೆಯಲ್ಲಿ…

16 hours ago

ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರಾಗಿ ಪುಷ್ಪಲತಾ ಆಯ್ಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಗ್ರಾಮದ ಪುಷ್ಪಲತಾ ಸೋಮಶೇಖರ್ ರವರನ್ನು ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರನ್ನಾಗಿ…

1 day ago

ಮೆಡಿಕವರ್ ಆಸ್ಪತ್ರೆಯಿಂದ ಸೃಷ್ಟಿ ಗ್ಲೋಬಲ್ ಶಾಲೆಯಲ್ಲಿ ಜೀವ ರಕ್ಷಣೆ (BLS) ತರಬೇತಿ ಕಾರ್ಯಕ್ರಮ

ಬೆಂಗಳೂರು ಕೊಡಿಗೆಹಳ್ಳಿ, : ಮೆಡಿಕವರ್ ಆಸ್ಪತ್ರೆಯು ಕೊಡಿಗೆಹಳ್ಳಿಯ ಸೃಷ್ಟಿ ಗ್ಲೋಬಲ್ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು, ಶಾಲಾ…

1 day ago

ನಟ ಪ್ರಥಮ್ ವಿರುದ್ದ ಹಲ್ಲೆ ಆರೋಪ: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ಪ್ರಥಮ್ ನೀಡಿದ ದೂರಿನಲ್ಲೇನಿದೆ…? ಯಾರ ಮೇಲೆ ದೂರು ನೀಡಿದ್ದಾರೆ….?

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

1 day ago