
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾರಾಯಣಪ್ಪನವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ(ಅ.9) ನಿಧನರಾಗಿದ್ದಾರೆ, ಶನಿವಾರ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನಾರಾಣಪ್ಪನವರ ನಿಧನಕ್ಕ ಸಂತಾಪ ವ್ಯಕ್ತಪಡಿಸಿದ ಲಾಯರ್ ಪ್ರತಾಪ್, ಹಳ್ಳಿರೈತ ಅಂಬರೀಷ್, ಸೇರಿದಂತೆ ರಾಜಕೀಯ ಮುಖಂಡರು, ರೈತರು ನಾರಾಯಣಪ್ಪ ತೂಬಗೆರೆಯ ಹಿರಿಯ ಮುಖಂಡರು, ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸಾಲ ಕೊಡಿಸುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಿದ್ದರು, ಈ ಕಾರಣದಿಂದ ಅವರನ್ನು ತೂಬಗೆರೆ ಸುತ್ತಮುತ್ತಲಿನ ರೈತರು ಸಬ್ಸಿಡಿ ನಾರಾಯಣಪ್ಪ ಅಂತಾನೇ ಕರೆಯುತ್ತಿದ್ದರು. ಆರ್.ಎಲ್.ಜಾಲಪ್ಪನವರು ಗರಡಿಯಲ್ಲಿ ಪಳಗಿದ ಮುಖಂಡರು, ಜೆ.ನರಸಿಂಹಸ್ವಾಮಿಯವರ ಸ್ನೇಹಿತರಾಗಿದ್ದರು. ತೂಬಗೆರೆಯಲ್ಲಿ ಅನ್ನದಾತರಾಗಿದ್ದ ಅವರು, ತೂಬಗೆರೆಯಲ್ಲಿ ನಡೆಯುತ್ತಿದ್ದ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಬರುವ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆಯನ್ನ ಮಾಡುತ್ತಿದ್ದರು, ಅವರ ಸಾವು ತೂಬಗೆರೆ ಹೋಬಳಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದರು.