ತೂಬಗೆರೆ ಕಳ್ಳ, ಚಿಕ್ಕಬಳ್ಳಾಪುರದಲ್ಲಿ ಬಂಧನ

ಚಿಕ್ಕಬಳ್ಳಾಪುರ: ಅಂಗಡಿ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮ ಪೊಲೀಸರು ಬಂಧನ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಾರ್ನಾಳ ಮೂಲದ ಗಂಗಾಧರ್(33), ಬಂಧಿತ ಆರೋಪಿ.

ಆರೋಪಿಯಿಂದ 500 ಗ್ರಾಂ ಬೆಳ್ಳಿ, 60 ಸಾವಿರ ಹಣ, ಟಾಟಾ ಇಂಡಿಕಾ ಕಾರು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂದಿ ಗಿರಿಧಾಮ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *