ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಮೂವರು ಅಣ್ಣತಮ್ಮಂದಿರ ನಡುವೆ ತಗಾದೆ: ಅಣ್ಣನ ಕೊಲೆಯಲ್ಲಿ ಅಂತ್ಯ

ಒಂಭತ್ತು ತಿಂಗಳು ಹೊತ್ತು‌ಹೆತ್ತು ಬೆಳೆಸಿದ ಮಕ್ಕಳು ಮುಪ್ಪಾದಾಗ ತಂದೆ-ತಾಯಿಗೆ ಆಸೆರೆಯಾಗುತ್ತಾರೆ ಎಂಬ ಆಸೆರೆಯಿಂದ ಕೂಲಿನಾಲಿ ಮಾಡಿ ಬೆಳೆಸಿದ್ರು. ಆದ್ರೆ ತಂದೆ ಸತ್ತ ಮೇಳೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಕ್ಕಳೇ ತಂದೆಗೆ ಬರುವ ಸಾವಿರ ರೂಪಾಯಿ ಪಿಂಚಣಿಗಾಗಿ ಕಿತ್ತಾಡಿ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ…ಇಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತೀರಾ…

ಹೀಗೆ ತಾಯಿಯ ಪಿಂಚಣಿ ಹಣಕ್ಕಾಗಿ ಸ್ವಂತ ಅಣ್ಣನ ಮನೆಯ ಬಾಗಿಲನ್ನು ಹೊಡೆದಿರುವ ಅಣ್ಣತಮ್ಮಂದಿರು, ಮಕ್ಕಳಿಂದಲೇ ತನ್ನ ಹಿರಿಯ ಮಗನನ್ನು ದೊಣ್ಣೆಗಳಿಂದ ಭೀಕರವಾಗಿ ಕೊಲೆ ಮಾಡಿರುವ ದೃಶ್ಯಗಳು ಕಂಡು ಕಣ್ಣೀರಿಡುತ್ತಿರುವ ತಾಯಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದಲ್ಲಿ..

ಸ್ವಂತ ತಮ್ಮಂದಿರ ಕೈಯಲ್ಲಿ ಭೀಕರವಾಗಿ ಕೊಲೆಯಾಗಿರುವನ‌ ಹೆಸರು ನರಸಿಂಹಮೂರ್ತಿ.. ಮಾಡಿದೆಲ್ಲಾ ಮಾಡಿ ಅಮಾಯಕರಂತೆ ನಿಂತುಕೊಂಡಿರುವವರ ಹೆಸರು ರಾಮಾಂಜಿ ಹಾಗೂ ಗಂಗಾಧರಪ್ಪ ಇವರಿಬ್ಬರು ಒಡ ಹುಟ್ಟಿದ ಅಣ್ಣತಮ್ಮಂದಿರು..

ಇನ್ನೂ ಗಂಗಮ್ಮ ಹಾಗೂ ಹನುಮಂತರಾಯಪ್ಪ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಇದ್ರು..ಇನ್ನೂ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದ ಹನುಮಂತರಾಯಪ್ಪ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ..ಮೃತಪಟ್ಟ ನಂತರ ತಂದೆಯ ಪಿಂಚಣಿ ಹಣ ತಾಯಿಗೆ ಬರುತ್ತಿತ್ತು ಇದೆ ಹಣ ವಿಚಾರಕ್ಕೆ ಮೂವರ ಮಕ್ಕಳ ನಡುವೆ ತಗಾದೆ ಶುರುವಾಗಿದೆ..ನಾನೇ ತಾಯಿಯನ್ನು ನೋಡಿಕೊಳ್ಳುತ್ತಿದ್ದು ನನಗೆ ಹಣ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ನರಸಿಂಹಮೂರ್ತಿ ಹಾಗೂ ರಾಮಾಂಜಿ, ಗಂಗಾಧರಪ್ಪ ನಡುವೆ ಮಾತಿಗೆ ಮಾತು ಬೆಳೆದು ರಾಜಿಪಂಚಾಯತಿಗಳು ನಡೆದಿದೆ…ಆದ್ರೆ ಅಣ್ಣ ನರಸಿಂಹಮೂರ್ತಿ ನಮಗೆ ತಾಯಿಯ ಪಿಂಚಣಿ ಹಣ ನೀಡುವುದಿಲ್ಲಾ ಎಂದು ಕೋಪಗೊಂಡ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹಮೂರ್ತಿ ಮನೆ ಬಳಿ ಹೋಗಿ ಮನೆಯ ಬಾಗಿಲು ಒಡೆದು ಮನೆಯ ಒಳಗೆ ಇದ್ದ ನರಸಿಂಹಮೂರ್ತಿಯನ್ನು ದೊಣ್ಣೆಗಳಿಂದ ಒಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ..

ಇನ್ನೂ ತಂದೆ ಸತ್ತ ಮೇಲೆ ತಾಯಿಗೆ ಬರುತ್ತಿದ್ದ ಒಂದು ಸಾವಿರ ಪಿಂಚಣಿ ಹಣದಲ್ಲಿ ತನ್ನ ಹಿರಿಯ ಮಗ ನರಸಿಂಹಮೂರ್ತಿಗೆ ಒಂದು ಸಾವಿರ ರೂಪಾಯಿಯನ್ನು ಕೊಟ್ಟಿದ್ಲು..ಇದರಿಂದ ಕುಪಿತಗೊಂಡ ಇಬ್ಬರು ಮಕ್ಕಳು ನಮಗೂ ಹಣಕೊಡುವಂತೆ ಬೇಡಿಕೆ ಇಟ್ಟಿದ್ರು..ಇದೇ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ..

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ..

ಒಟ್ಟಾರೇ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬಂತೆ ಕೇವಲ ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವುದು ವಿರ್ಪಯಾಸವಾಗಿದೆ..

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

3 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

6 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

6 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

20 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

21 hours ago