ಒಂಭತ್ತು ತಿಂಗಳು ಹೊತ್ತುಹೆತ್ತು ಬೆಳೆಸಿದ ಮಕ್ಕಳು ಮುಪ್ಪಾದಾಗ ತಂದೆ-ತಾಯಿಗೆ ಆಸೆರೆಯಾಗುತ್ತಾರೆ ಎಂಬ ಆಸೆರೆಯಿಂದ ಕೂಲಿನಾಲಿ ಮಾಡಿ ಬೆಳೆಸಿದ್ರು. ಆದ್ರೆ ತಂದೆ ಸತ್ತ ಮೇಳೆ ತಾಯಿಯನ್ನು ನೋಡಿಕೊಳ್ಳಬೇಕಾದ ಮಕ್ಕಳೇ ತಂದೆಗೆ ಬರುವ ಸಾವಿರ ರೂಪಾಯಿ ಪಿಂಚಣಿಗಾಗಿ ಕಿತ್ತಾಡಿ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ…ಇಷ್ಟಕ್ಕೂ ಆ ಘಟನೆ ನಡೆದಿದ್ದು ಎಲ್ಲಿ ಅಂತೀರಾ…
ಹೀಗೆ ತಾಯಿಯ ಪಿಂಚಣಿ ಹಣಕ್ಕಾಗಿ ಸ್ವಂತ ಅಣ್ಣನ ಮನೆಯ ಬಾಗಿಲನ್ನು ಹೊಡೆದಿರುವ ಅಣ್ಣತಮ್ಮಂದಿರು, ಮಕ್ಕಳಿಂದಲೇ ತನ್ನ ಹಿರಿಯ ಮಗನನ್ನು ದೊಣ್ಣೆಗಳಿಂದ ಭೀಕರವಾಗಿ ಕೊಲೆ ಮಾಡಿರುವ ದೃಶ್ಯಗಳು ಕಂಡು ಕಣ್ಣೀರಿಡುತ್ತಿರುವ ತಾಯಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದಲ್ಲಿ..
ಸ್ವಂತ ತಮ್ಮಂದಿರ ಕೈಯಲ್ಲಿ ಭೀಕರವಾಗಿ ಕೊಲೆಯಾಗಿರುವನ ಹೆಸರು ನರಸಿಂಹಮೂರ್ತಿ.. ಮಾಡಿದೆಲ್ಲಾ ಮಾಡಿ ಅಮಾಯಕರಂತೆ ನಿಂತುಕೊಂಡಿರುವವರ ಹೆಸರು ರಾಮಾಂಜಿ ಹಾಗೂ ಗಂಗಾಧರಪ್ಪ ಇವರಿಬ್ಬರು ಒಡ ಹುಟ್ಟಿದ ಅಣ್ಣತಮ್ಮಂದಿರು..
ಇನ್ನೂ ಗಂಗಮ್ಮ ಹಾಗೂ ಹನುಮಂತರಾಯಪ್ಪ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಇದ್ರು..ಇನ್ನೂ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಕೆಲಸ ಮಾಡುತ್ತಿದ್ದ ಹನುಮಂತರಾಯಪ್ಪ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ..ಮೃತಪಟ್ಟ ನಂತರ ತಂದೆಯ ಪಿಂಚಣಿ ಹಣ ತಾಯಿಗೆ ಬರುತ್ತಿತ್ತು ಇದೆ ಹಣ ವಿಚಾರಕ್ಕೆ ಮೂವರ ಮಕ್ಕಳ ನಡುವೆ ತಗಾದೆ ಶುರುವಾಗಿದೆ..ನಾನೇ ತಾಯಿಯನ್ನು ನೋಡಿಕೊಳ್ಳುತ್ತಿದ್ದು ನನಗೆ ಹಣ ಸೇರಬೇಕು ಎಂದು ಹಠಕ್ಕೆ ಬಿದ್ದಿದ್ದ ನರಸಿಂಹಮೂರ್ತಿ ಹಾಗೂ ರಾಮಾಂಜಿ, ಗಂಗಾಧರಪ್ಪ ನಡುವೆ ಮಾತಿಗೆ ಮಾತು ಬೆಳೆದು ರಾಜಿಪಂಚಾಯತಿಗಳು ನಡೆದಿದೆ…ಆದ್ರೆ ಅಣ್ಣ ನರಸಿಂಹಮೂರ್ತಿ ನಮಗೆ ತಾಯಿಯ ಪಿಂಚಣಿ ಹಣ ನೀಡುವುದಿಲ್ಲಾ ಎಂದು ಕೋಪಗೊಂಡ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹಮೂರ್ತಿ ಮನೆ ಬಳಿ ಹೋಗಿ ಮನೆಯ ಬಾಗಿಲು ಒಡೆದು ಮನೆಯ ಒಳಗೆ ಇದ್ದ ನರಸಿಂಹಮೂರ್ತಿಯನ್ನು ದೊಣ್ಣೆಗಳಿಂದ ಒಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ..
ಇನ್ನೂ ತಂದೆ ಸತ್ತ ಮೇಲೆ ತಾಯಿಗೆ ಬರುತ್ತಿದ್ದ ಒಂದು ಸಾವಿರ ಪಿಂಚಣಿ ಹಣದಲ್ಲಿ ತನ್ನ ಹಿರಿಯ ಮಗ ನರಸಿಂಹಮೂರ್ತಿಗೆ ಒಂದು ಸಾವಿರ ರೂಪಾಯಿಯನ್ನು ಕೊಟ್ಟಿದ್ಲು..ಇದರಿಂದ ಕುಪಿತಗೊಂಡ ಇಬ್ಬರು ಮಕ್ಕಳು ನಮಗೂ ಹಣಕೊಡುವಂತೆ ಬೇಡಿಕೆ ಇಟ್ಟಿದ್ರು..ಇದೇ ವಿಚಾರಕ್ಕೆ ಅಣ್ಣತಮ್ಮಂದಿರ ನಡುವೆ ನಡೆದ ಗಲಾಟೆಯಲ್ಲಿ ಒಡಹುಟ್ಟಿದ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ..
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ..
ಒಟ್ಟಾರೇ ಹುಟ್ಟುತ್ತ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬಂತೆ ಕೇವಲ ತಾಯಿಯ ಸಾವಿರ ಹಣ ಪಿಂಚಣಿ ಹಣಕ್ಕೆ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವುದು ವಿರ್ಪಯಾಸವಾಗಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…