ತುಮಕೂರಿನಲ್ಲಿ ಸಮಾವೇಶ ಮುಗಿಸಿ ನಗರಕ್ಕೆ ತಡವಾಗಿ ಬಂದ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರು. ಆದ್ದರಿಂದ ಬೇರೆ ಬೇರೆ ತಾಲೂಕಿನಿಂದ ಬಂದ ಕಾರ್ಯಕರ್ತರು ಸಮಾವೇಶ ನಡೆಯುವ ಮಧ್ಯದಲ್ಲೇ ಸ್ಥಳದಿಂದ ಸಾಲುಗಟ್ಟಿ ಹೊರಟರು.
ವೇದಿಕೆ ಮುಂಭಾಗ ಸುಮಾರು ಐದು ಸಾವಿರ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಕುರ್ಚಿಗಳು ಕಾರ್ಯಕರ್ತರಿಲ್ಲದೆ ಖಾಲಿ ಖಾಲಿ ಉಳಿದಿತ್ತು.
ಕಾರ್ಯಕರ್ತರು ಹೊರಡುವುದನ್ನು ಗಮನಿಸಿದ ಶಾಸಕ ಟಿ.ವೆಂಕಟರಮಣಯ್ಯ, ಯಾರು ಹೊರಡಬೇಡಿ ದಯವಿಟ್ಟು ಕುಳಿತುಕೊಳ್ಳಿ, ಖಾಲಿ ಕುರ್ಚಿ ಕಂಡರೆ ಮಾಧ್ಯಮದವರು ಫೋಟೋ ತೆಗೆದು ಸುದ್ದಿ ಮಾಡುತ್ತಾರೆ ಎಂದು ತಿಳಿಸಿದರೂ ಶಾಸಕರ ಮನವಿಗೆ ಕಿವಿಗೊಡದೇ ಸ್ಥಳದಿಂದ ಎದು ಹೊರಟ ಕಾರ್ಯಕರ್ತರು.
ಕೆಲವೇ ಮಂದಿಗೆ ಭಾಷಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು.