“ಡ್ರಗ್ಸ್ ಮುಕ್ತ ಕರ್ನಾಟಕ” ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ 5 ಕಿ.ಮೀ ಮ್ಯಾರಥಾನ್ ಅನ್ನು ಮಾ.9ರ ಭಾನುವಾರದಂದು ಆಯೋಜನೆ ಮಾಡಲಾಗಿದೆ.
ಈ ಮ್ಯಾರಥಾನ್ ರಾಜನಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಿಂದ ಮಾ.9ರ ಬೆಳಗ್ಗೆ 6:30ಕ್ಕೆ ಪ್ರಾರಂಭಗೊಂಡು ಇಟ್ಕಲ್ ಪುರ ಗ್ರಾಮದ ಸರ್ಕಾರಿ ಶಾಲೆ, ಆಂಜನೇಯ ಸ್ಟ್ಯಾಚು ನಂತರ ನೆಲಮಂಗಲ ಮುಖ್ಯ ರಸ್ತೆಯಲ್ಲಿ ಬಂದು ಪ್ರೆಸಿಡೆನ್ಸಿ ಕಾಲೇಜಿನ ಬಳಿ ಮುಕ್ತಾಯಗೊಳ್ಳಲಿದೆ.
ಮ್ಯಾರಥಾನ್ ನಲ್ಲಿ ನಟ ಧೃವ ಸರ್ಜಾ, ಶ್ರೀಮುರಳಿ, ನಿರೂಪಕ ಅಕುಲ್ ಬಾಲಾಜಿ, ನಟಿ ಮಾಳವಿಕಾ ಕಾಮತ್, ನಟಿ ಸ್ಪೂರ್ತಿ ಉಡಿಮನೆ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ, ಎಲ್ಲರೂ ಒಂದಾಗಿ ಡ್ರಗ್ಸ್ ಮುಕ್ತ ಮತ್ತು ಸೈಬರ್ ಅಪರಾಧ ಕುರಿತ ಜಾಗೃತಿ ಮೂಡಿಸೋಣ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಮ್ಯಾರಥಾನ್ ನಲ್ಲಿ ಭಾಗವಹಿಸಿ ಅಭಿಯಾನವನ್ನ ಯಶಸ್ವಿಗೊಳಿಸಿ ಎಂದು ಪೊಲೀಸ್ ಇಲಾಖೆ ಕೋರಿದೆ.