ಡಯಾಲಿಸಿಸ್ ಅಂತಿಮವಲ್ಲ: ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

ಬೆಂಗಳೂರು , ವೈಟ್‌ಫೀಲ್ದ್‌ – 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್‌, ಔಷಧ ಮತ್ತುಬದುಕುವ ನಿರೀಕ್ಷೆಯಲ್ಲೇ ಸಾಗುತ್ತಿತ್ತು. 2022ರಲ್ಲಿ ಕೊನೆ ಹಂತದ ಕಿಡ್ನಿ ವೈಫಲ್ಯ ದೃಢಪಟ್ಟ ಬಳಿಕ ಭರವಸೆಯನ್ನು ಕಳೆದುಕೊಂಡಿದ್ದು , ಅವರಿಗೆ ನಿಯಮಿತ ಡಯಾಲಿಸಿಸ್ ಆರಂಭಿಸಲಾಯಿತು. ಕುಟುಂಬದಲ್ಲಿ ಸೂಕ್ತ ದಾನಿದಾರರಿಲ್ಲದೇ ಮೃತ ದಾನಿದಾರರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿದರು.

36 ತಿಂಗಳ ಡಯಾಲಿಸಿಸ್ ಇತಿಹಾಸ, ನಿಯಂತ್ರಣದಲ್ಲಿರದ ರಕ್ತದೊತ್ತಡ ಹಾಗೂ 2024ರಲ್ಲಿ ಸಂಭವಿಸಿದ ಹೈಪರ್‌ಟೆನ್ಷನ್‌ ಸ್ಟ್ರೋಕ್‌ನಂತಹ ಆರೋಗ್ಯ ಸವಾಲುಗಳ ನಡುವೆಯೂ ಅವರು ಚಿಕಿತ್ಸೆ ಪಾಲನೆ, ನಿಯಮಿತ ಡಯಾಲಿಸಿಸ್‌ ಮತ್ತು ಶಿಸ್ತಿನಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರು.

ಸುಮಾರು ಮೂರು ವರ್ಷಗಳ ಕಾಯುವಿಕೆಯ ನಂತರ, ರಸ್ತೆ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಯುವಕನ ಮೃತ ದಾನಿದಾರ ಕಿಡ್ನಿ ಲಭ್ಯವಾಯಿತು. ದಾನಿದಾರ ಕಿಡ್ನಿಯ ಕಾರ್ಯಕ್ಷಮತೆ ಉತ್ತಮವಾಗಿದ್ದು, ಕಸಿಗೆ ಸೂಕ್ತವಾಗಿತ್ತು.

ನೆಫ್ರಾಲಜಿಸ್ಟ್ ಡಾ. ನಿಶ್ಚಯ್ ಬಿ, ಹಾಗೂ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ಪ್ರಮೋದ್ ಎಸ್ ಮತ್ತು ಡಾ. ದಿಲೀಪ್ ಎಂ ರವರ ವೈದ್ಯರ ತಂಡದೊಂದಿಗೆ ನೇತೃತ್ವದಲ್ಲಿ ಕಿಡ್ನಿ ಕಸಿ ಯಶಸ್ವಿಯಾಗಿ ನೆರವೇರಿತು. ತಜ್ಞರ ನಿಗಾ ಮತ್ತು ಸೂಕ್ತ ಚಿಕಿತ್ಸೆಯಿಂದ ಕಿಡ್ನಿಯ ಕಾರ್ಯಕ್ಷಮತೆ ಕ್ರಮೇಣ ಸುಧಾರಿಸಿತು.

ಇಂದು ಉನ್ನಿಕೃಷ್ಣನ್ ಡಯಾಲಿಸಿಸ್‌ನಿಂದ ಮುಕ್ತರಾಗಿ, ಉತ್ತಮ ಕಿಡ್ನಿ ಕಾರ್ಯಕ್ಷಮತೆಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.

“ಕಿಡ್ನಿ ಕಸಿ ಪಡೆಯಲು ಅರ್ಹರಾದ ರೋಗಿಗಳಿಗೆ ಡಯಾಲಿಸಿಸ್ ಅಂತಿಮ ಆಯ್ಕೆಯಲ್ಲ. ಸೂಕ್ತ ಪರಿಶೀಲನೆ ಮತ್ತು ತನಿಖೆಗಳ ನಂತರ ಇಂತಹ ರೋಗಿಗಳನ್ನು ಮೃತ ದಾನಿದಾರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿಸಿ, ಡಯಾಲಿಸಿಸ್ ಮುಂದುವರೆಸಬಹುದು. ಶಿಸ್ತು, ನಿಯಮಿತ ಫಾಲೋ-ಅಪ್ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಯಶಸ್ವಿ ಕಿಡ್ನಿ ಕಸಿ ಸಂಪೂರ್ಣ ಸಾಧ್ಯ,” ಎಂದು ಡಾ. ನಿಶ್ಚಯ್ ಹೇಳಿದರು.

ಡಯಾಲಿಸಿಸ್ ಜೀವನಪೂರ್ತಿ ಎನ್ನುವ ತಪ್ಪು ಕಲ್ಪನೆಯಿಂದ ಅನೇಕರು ನಿರಾಶರಾಗುತ್ತಾರೆ. ಆದರೆ ಮೃತ ಅಂಗದಾನದ ಮೂಲಕ ಕಿಡ್ನಿ ಕಸಿ ಸಾವಿರಾರು ರೋಗಿಗಳಿಗೆ ಹೊಸ ಬದುಕಿನ ಅವಕಾಶ ನೀಡುತ್ತಿದೆ ಎಂದು ವೈದ್ಯರು ತಿಳಿಸಿದರು.

Ramesh Babu

Journalist

Recent Posts

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹುಲಿಕುಂಟೆ ಟೋಲ್ ಸಮೀಪದ ಚಿಕ್ಕಲಯ್ಯನಪಾಳ್ಯ ಬಳಿ ನಿಂತಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ…

18 hours ago

ಪೊಲೀಸ್: ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ……

ದೇಶ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ನಿಯಂತ್ರಿಸದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದ ಆಂತರಿಕ ವ್ಯವಸ್ಥೆ ಕುಸಿಯುವುದು. ನಿಶ್ಚಿತ…

20 hours ago

ಕಸ್ತೂರಿ ರಂಗನ್ ವರದಿ; ‘ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ’- ಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ  ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು…

1 day ago

ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ರೈತ ಸಂಘ ಆಗ್ರಹ

ಕೋಲಾರ : ನಗರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಬಡ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು, ಖಾಸಗಿ…

1 day ago

ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ…

1 day ago

ಕುಡಿಯುವ ನೀರು, ಮೇವಿಗೆ ಮುಂಜಾಗ್ರತೆ ವಹಿಸಿ: ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ- ಸಚಿವ ಕೆ.ಎಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ,…

1 day ago