ಡಯಾಲಿಸಿಸ್ ಅಂತಿಮವಲ್ಲ: ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

ಬೆಂಗಳೂರು , ವೈಟ್‌ಫೀಲ್ದ್‌ – 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್‌, ಔಷಧ ಮತ್ತುಬದುಕುವ ನಿರೀಕ್ಷೆಯಲ್ಲೇ ಸಾಗುತ್ತಿತ್ತು. 2022ರಲ್ಲಿ ಕೊನೆ ಹಂತದ ಕಿಡ್ನಿ ವೈಫಲ್ಯ ದೃಢಪಟ್ಟ ಬಳಿಕ ಭರವಸೆಯನ್ನು ಕಳೆದುಕೊಂಡಿದ್ದು , ಅವರಿಗೆ ನಿಯಮಿತ ಡಯಾಲಿಸಿಸ್ ಆರಂಭಿಸಲಾಯಿತು. ಕುಟುಂಬದಲ್ಲಿ ಸೂಕ್ತ ದಾನಿದಾರರಿಲ್ಲದೇ ಮೃತ ದಾನಿದಾರರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿದರು.

36 ತಿಂಗಳ ಡಯಾಲಿಸಿಸ್ ಇತಿಹಾಸ, ನಿಯಂತ್ರಣದಲ್ಲಿರದ ರಕ್ತದೊತ್ತಡ ಹಾಗೂ 2024ರಲ್ಲಿ ಸಂಭವಿಸಿದ ಹೈಪರ್‌ಟೆನ್ಷನ್‌ ಸ್ಟ್ರೋಕ್‌ನಂತಹ ಆರೋಗ್ಯ ಸವಾಲುಗಳ ನಡುವೆಯೂ ಅವರು ಚಿಕಿತ್ಸೆ ಪಾಲನೆ, ನಿಯಮಿತ ಡಯಾಲಿಸಿಸ್‌ ಮತ್ತು ಶಿಸ್ತಿನಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರು.

ಸುಮಾರು ಮೂರು ವರ್ಷಗಳ ಕಾಯುವಿಕೆಯ ನಂತರ, ರಸ್ತೆ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಯುವಕನ ಮೃತ ದಾನಿದಾರ ಕಿಡ್ನಿ ಲಭ್ಯವಾಯಿತು. ದಾನಿದಾರ ಕಿಡ್ನಿಯ ಕಾರ್ಯಕ್ಷಮತೆ ಉತ್ತಮವಾಗಿದ್ದು, ಕಸಿಗೆ ಸೂಕ್ತವಾಗಿತ್ತು.

ನೆಫ್ರಾಲಜಿಸ್ಟ್ ಡಾ. ನಿಶ್ಚಯ್ ಬಿ, ಹಾಗೂ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ಪ್ರಮೋದ್ ಎಸ್ ಮತ್ತು ಡಾ. ದಿಲೀಪ್ ಎಂ ರವರ ವೈದ್ಯರ ತಂಡದೊಂದಿಗೆ ನೇತೃತ್ವದಲ್ಲಿ ಕಿಡ್ನಿ ಕಸಿ ಯಶಸ್ವಿಯಾಗಿ ನೆರವೇರಿತು. ತಜ್ಞರ ನಿಗಾ ಮತ್ತು ಸೂಕ್ತ ಚಿಕಿತ್ಸೆಯಿಂದ ಕಿಡ್ನಿಯ ಕಾರ್ಯಕ್ಷಮತೆ ಕ್ರಮೇಣ ಸುಧಾರಿಸಿತು.

ಇಂದು ಉನ್ನಿಕೃಷ್ಣನ್ ಡಯಾಲಿಸಿಸ್‌ನಿಂದ ಮುಕ್ತರಾಗಿ, ಉತ್ತಮ ಕಿಡ್ನಿ ಕಾರ್ಯಕ್ಷಮತೆಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.

“ಕಿಡ್ನಿ ಕಸಿ ಪಡೆಯಲು ಅರ್ಹರಾದ ರೋಗಿಗಳಿಗೆ ಡಯಾಲಿಸಿಸ್ ಅಂತಿಮ ಆಯ್ಕೆಯಲ್ಲ. ಸೂಕ್ತ ಪರಿಶೀಲನೆ ಮತ್ತು ತನಿಖೆಗಳ ನಂತರ ಇಂತಹ ರೋಗಿಗಳನ್ನು ಮೃತ ದಾನಿದಾರ ಕಿಡ್ನಿ ಕಸಿ ನಿರೀಕ್ಷಾ ಪಟ್ಟಿಯಲ್ಲಿ ಸೇರಿಸಿ, ಡಯಾಲಿಸಿಸ್ ಮುಂದುವರೆಸಬಹುದು. ಶಿಸ್ತು, ನಿಯಮಿತ ಫಾಲೋ-ಅಪ್ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಯಶಸ್ವಿ ಕಿಡ್ನಿ ಕಸಿ ಸಂಪೂರ್ಣ ಸಾಧ್ಯ,” ಎಂದು ಡಾ. ನಿಶ್ಚಯ್ ಹೇಳಿದರು.

ಡಯಾಲಿಸಿಸ್ ಜೀವನಪೂರ್ತಿ ಎನ್ನುವ ತಪ್ಪು ಕಲ್ಪನೆಯಿಂದ ಅನೇಕರು ನಿರಾಶರಾಗುತ್ತಾರೆ. ಆದರೆ ಮೃತ ಅಂಗದಾನದ ಮೂಲಕ ಕಿಡ್ನಿ ಕಸಿ ಸಾವಿರಾರು ರೋಗಿಗಳಿಗೆ ಹೊಸ ಬದುಕಿನ ಅವಕಾಶ ನೀಡುತ್ತಿದೆ ಎಂದು ವೈದ್ಯರು ತಿಳಿಸಿದರು.

Ramesh Babu

Journalist

Recent Posts

ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸಿ ಅರ್ಜುನ್ ವಿರಾಟ್ ಜನ್ಮದಿನ ಆಚರಣೆ

ದೊಡ್ಡಬಳ್ಳಾಪುರ: ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಅರ್ಜುನ್ ವಿರಾಟ್ ಅವರ ಜನ್ಮದಿನದ ಹಿನ್ನೆಲೆ, ಅವರ ಸ್ನೇಹಿತರು ಹಾಗೂ ಒಡನಾಡಿಗಳು…

3 hours ago

ಸೈಕಲ್ ಗೋಡಾನ್ ಗೆ ಆಕಸ್ಮಿಕ ಬೆಂಕಿ; ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲು

ದೊಡ್ಡಬಳ್ಳಾಪುರ: ನಗರದ ಸೈಕಲ್ ಗೋಡೌನ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಗೋಡೌನ್‌ನಲ್ಲಿದ್ದ ಅಪಾರ ಪ್ರಮಾಣದ ಬೆಲೆಬಾಳುವ ಸೈಕಲ್‌ಗಳು ಸುಟ್ಟು ಕರಕಲಾದ…

3 hours ago

ಲಾರಿ–ಕಾರು ನಡುವೆ ಅಪಘಾತ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಮಧುರೆ ಹೋಬಳಿಯ ಚೆನ್ನದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಬಳಿ ಲಾರಿ ಹಾಗೂ ಕಾರು ನಡುವೆ…

11 hours ago

ಮಳೆಗಾಗಿ ಕಾದ ರೈತರಿಗೆ ಹೊಸ ಸಂಕಷ್ಟ: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಸ್ಥಗಿತ: ಬರದ ಭೀತಿ ಬಳಿಕ ಅತಿವೃಷ್ಟಿ ಕಾಟ: ಹೊಲಗಳಲ್ಲಿ ನೀರು ನಿಂತು ಕೃಷಿ ಚಟುವಟಿಕೆ ಅಸ್ತವ್ಯಸ್ತ

ತಿಂಗಳುಗಳ ಕಾಲ ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ರೈತರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇಷ್ಟು ದಿನ ಸಮರ್ಪಕ…

2 days ago

ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ

ಬೆಂಗಳೂರು: ಸ್ವಚ್ಚ, ಸುರಕ್ಷಿತ ಬೆಂಗಳೂರಿಗಾಗಿ ಜಿಬಿಎ ಜತೆ ಕೈಜೋಡಿಸಿರುವ ಬೆಸ್ಕಾಂ,ನಗರದ ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿ ನೀಡುವ ಉದ್ದೇಶದಿಂದ ನಿಗಮದ…

2 days ago

ಬೈಕ್‌–ಕ್ಯಾಂಟರ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಾಯ

ದೊಡ್ಡಬಳ್ಳಾಪುರ: ತ್ರಿಬಲ್‌ ರೈಡಿಂಗ್‌ನಲ್ಲಿ ತೆರಳುತ್ತಿದ್ದ ಬೈಕ್‌ ಹಾಗೂ ಹಾಲಿನ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,…

2 days ago