ಟಿಪ್ಪರ್ ಲಾರಿ ಹರಿದು ಮಹಿಳೆ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ವತ್ರೆ ಸಮೀಪದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಇಂದು ಬೆಳಗ್ಗೆ 11:15ರಲ್ಲಿ ನಡೆದಿದೆ.
ತುಮಕೂರಿನ ನಾಗಮಂಗಲ ಮೂಲದ ಅನಿತಾ(29) ಮೃತ ದುರ್ದೈವಿ.
ತುಮಕೂರಿನಿಂದ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್ ಗೆ ಎಂದು ಸ್ನೇಹಿತನ ಜೊತೆ ತೆರಳುತ್ತಿರುವಾಗ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಬೈಕ್ ಮೇಲೆ ಹರಿದಿದೆ. ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ಕೂಡಲೇ ಬೈಕ್ ಸವಾರರು ಕಳೆಗಿಬಿದ್ದಿದ್ದಾರೆ. ಆಗ ಮೃತ ಅನಿತಾ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದಿದೆ.
ಚಕ್ರ ಹರಿದ ಪರಿಣಾಮ ಮೃತ ಅನಿತಾ ತಲೆಗೆ ಗಂಭೀರ ಪೆಟ್ಟಾಗಿ ಮೆದುಳು ಹೊರಬಂದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.