ದೊಡ್ಡಬಳ್ಳಾಪುರ ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನ.2ರಂದು ನಡೆಯಿತು. ಈ ಚುನಾವಣೆಯಲ್ಲಿ ಕೆಲವೊಂದು ಬೂತ್ ಗಳಲ್ಲಿ ನಮ್ಮ ಏಜೆಂಟ್ ಗಳು ಇರಲಿಲ್ಲ. ವಯೋವೃದ್ಧರು ಮತದಾನ ಮಾಡುವಾಗ ಗೊಂದಲದಲ್ಲಿದ್ದಾಗ ಬೇರೆ ಏಜೆಂಟರ್ ಗಳು ಬಂದು ಮತದಾನ ಮಾಡಿಸಿದ್ದಾರೆ. ಆಗ ಮತದಾನದಲ್ಲಿ ಏರುಪೇರಾಗಿ ನಾನು ಸೋತಿದ್ದೇನೆ ಎಂದು ಎಚ್ ನರಸಿಂಹ ಮೂರ್ತಿ ಆರೋಪ ಮಾಡಿದ್ದಾರೆ.
ನ.2ರಂದು ನಡೆದ ದೊಡ್ಡಬಳ್ಳಾಪುರ ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ನೇರಳೇಘಟ್ಟ ನರಸಿಂಹಮೂರ್ತಿ ಸ್ಪರ್ಧಿಸಿದ್ದರು. ಮತ ಎಣಿಕೆಯಲ್ಲಿ ನರಸಿಂಹಮೂರ್ತಿ ಪ್ರತಿ ಸ್ಪರ್ಧಿ ಆನಂದ್ ಎಂ ಅವರು 2338 ಮತ ಪಡೆದಿದ್ದರು, ನರಸಿಂಹ ಮೂರ್ತಿ ಅವರು 2065 ಮತಗಳನ್ನು ಪಡೆದು ಸೋಲುಕಂಡಿದ್ದರು. ಚುನಾವಣಾ ಫಲಿತಾಂಶ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಆರೋಪಿಸಿದ ಅವರು, ಇದು ಸಹಕಾರ ಕ್ಷೇತ್ರದಲ್ಲಿ ನನಗೆ ಮೊದಲ ಚುನಾವಣೆ ಆಗಿದ್ದರಿಂದ ಚುನಾವಣೆ ಪ್ರಕ್ರಿಯೆ ಮೇಲೆ ನಿಗಾವಹಿಸಲು ಸಾಧ್ಯವಾಗಿರಲಿಲ್ಲ. ಅದು ನನ್ನ ಗಮನಕ್ಕೆ ಬಂದಂತೆ 11 ಬೂತ್ ಗಳಲ್ಲಿ ಕೇವಲ 4 ಬೂತ್ ಗಳಲ್ಲಿ ಮಾತ್ರ ನಮ್ಮ ಏಜೆಂಟ್ ಗಳು ಕೆಲಸ ಮಾಡುತ್ತಿದ್ದರು. ಈ ಅವಕಾಶ ಪಡೆದ ಪ್ರತಿ ಸ್ಪರ್ಧಿ ಏಜೆಂಟ್ ಗಳು ವಯಸ್ಸಾದವರಿಗೆ ನೆರವಾಗುವ ನೆಪದಲ್ಲಿ ಮತದಾನವನ್ನು ಏರುಪೇರು ಮಾಡಿದ್ದಾರೆ. 8 ಬ್ಯಾಲೆಟ್ ಗಳು ಇತ್ತು, ಇದು ವಯಸ್ಸಾದವರಿಗೆ ಗೊಂದಲ ಉಂಟುಮಾಡಿತ್ತು. ಕೆಲವರು ಮತದಾನ ಮಾಡದೇ ಖಾಲಿ ಹಾಳೆ ಬಿಟ್ಟಿದ್ದಾರೆ. ಈ ಖಾಲಿ ಪೇಪರ್ ಗಳಲ್ಲಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದು ನನ್ನ ಸೋಲಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಇದರ ಜೊತೆಯಲ್ಲಿ 825 ತಿರಸ್ಕೃತ ಮತಗಳು ಕಂಡುಬಂದಿದ್ದು, ಇಷ್ಟೊಂದು ಮತಗಳು ತಿರಸ್ಕೃತಗೊಂಡಿರುವುದು ನನ್ನ ಸಂಶಯಕ್ಕೆ ಕಾರಣವಾಗಿದೆ. ಪ್ರತಿ ಸ್ಪರ್ಧಿಯ ಷಡ್ಯಂತ್ರದಂತೆ ಕೆಲವು ಮತದಾರರು ಯಾವುದೇ ಚಿಹ್ನೆಗೆ ಮತ ಹಾಕದೇ ಖಾಲಿ ಬ್ಯಾಲೆಟ್ ಪೇಪರ್ ಬಿಟ್ಟಿರುತ್ತಾರೆ. ಮತ ತಿರಸ್ಕೃತವಾಗಲು ಖಾಲಿ ಬ್ಯಾಲೆಟ್ ಪೇಪರ್ ಗಳೇ ಕಾರಣ. ಪ್ರತಿ ಸ್ಪರ್ಧಿಗೆ ಇದು ಮೂರನೇ ಚುನಾವಣೆಯಾಗಿದ್ದು, ಈ ಹಿಂದೆ ಮಾಜಿ ಅಧ್ಯಕ್ಷರು ಸಹ ಆಗಿದ್ದರು. ತಮ್ಮ ಪ್ರಭಾವ ಬಳಿಸಿಕೊಂಡು ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ….
ಪಾರದರ್ಶಕವಾಗಿ ಚುನಾವಣೆ ನಡೆದೇ ಇರುವುದರಿಂದ ಮರು ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು….
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…