ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಎಲ್ಲರ ಮನದಲ್ಲೂ ರಾಮನ ನಾಮ ಜಪವಾಗುತ್ತಿದೆ.
ದೊಡ್ಡಬಳ್ಳಾಪುರದ ಮಧುರನಹೊಸಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಇಂದು ಮುಂಜಾನೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಶ್ರೀ ಮಾರುತಿ ಭಕ್ತ ಮಂಡಳಿ ವತಿಯಿಂದ ಊರೆಲ್ಲಾ ಭಜನೆ ರಾಮನನ್ನ ಜಪಿಸಲಾಯಿತು. ಗ್ರಾಮದಲ್ಲಿ ಭಜನಾ ಮೆರವಣಿಗೆ ಮೂಲಕ ದೇವರ ಆರಾಧನೆ ಮಾಡಲಾಯಿತು.