ದೊಡ್ಡಬಳ್ಳಾಪುರ: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದಲ್ಲಿನ ಜಯಮಂಗಲಿ ನದಿ ಉಗಮ ಸ್ಥಾನದ ಸುತ್ತಮುತ್ತ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಸಂಶೋಧನೆಯ ಫಲವಾಗಿ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆಹೊಲ ಜಾಗದಿಂದ ಸಂಗ್ರಹಿಸಲಾಗಿದ್ದ ಜೇಡದ ಮಾದರಿಗಳಲ್ಲಿ ಹೊಸ ಪ್ರಬೇಧದ ಜೇಡ ಪತ್ತೆಯಾಗಿದೆ ಎಂದು ಸಂಶೋಧನ ತಂಡದಲ್ಲಿನ ಜೇಡ ತಜ್ಞ ವೈ.ಟಿ.ಲೋಹಿತ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಹೊಸ ಜೀನಸ್ ವರ್ಗಕ್ಕೆ ಸೇರಿರುವ ಜೇಡಕ್ಕೆ ಸ್ಥಳೀಯ ಹೆಸರಿನಿಂದಲೇ ಕೆರೆಯಬೇಕು ಎನ್ನುವ ಉದ್ದೇಶದೊಂದಿಗೆ ‘ತೆಂಕಣ ಜಯಮಂಗಲಿ’ ಎಂದು ಹೆಸರಿಸಲಾಗಿದೆ. ಎಷ್ಟೋ ಕೀಟ ಜೇಡಗಳಂತ ಜೀವಿಗಳ ಹೆಸರು ಆಂಗ್ಲ, ಲ್ಯಾಟಿನ್ ಮಯವಾಗಿದ್ದು, ಹೆಸರುಗಳನ್ನು ಉಚ್ಚರಿಸಲು ಹಾಗೂ ನೆನಪಿಡಲು ಕಷ್ಟ. ಈ ಕಾರಣದಿಂದಾಗಿ ನಾನು ಪತ್ತೆ ಮಾಡಿರುವ ಜೇಡವನ್ನು ತೆಂಕಣ ಜಯಮಂಗಲಿ ಎನ್ನುವ ಹೆಸರಿನಿಂದಲೆ ಪರಿಚಯಿಸಿದ್ದೇವೆ ಎಂದರು.
ತೆಂಕಣ ಜಯಮಂಗಲಿ ಜೇಡವು ಸಹ ಹೊಸದಾದ ಕಾರಣ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಟೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆಮ್ಯಾಡಿಸನ್ ಈ ಸಂಶೋಧನೆಯಲ್ಲಿ ಕೈ ಜೋಡಿಸಿದ್ದಾರೆ. ಎನ್.ಸಿ.ಬಿ.ಎಸ್ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ಗಳೊಂದಿಗಿನ ಸಹಯೋಗದಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಪರಿಚಸಿದ್ದೇವೆ. ನಮ್ಮ ತಂಡದಲ್ಲಿನ ಬಿ.ಜಿ.ನಿಶಾ,ಚಿನ್ಮಯ್ ಸಿ.ಮಳಿಯೆ ಇವರೆಲ್ಲರ ಪರಿಶ್ರಮದೊಂದಿಗೆ ಅಂತರ ರಾಷ್ಟ್ರೀಯ ನಿಯತಕಾಲಿಕೆ ಜೊಕೇಸ್ (Zookeys) ನಲ್ಲಿ ನಮ್ಮ ಸಂಶೋಧನ ಬರಹವನ್ನು ಇದೇ ಅಕ್ಟೋಬರ್ 11 ರಂದು ಪ್ರಕಟಿಸಲಾಗಿದೆ.
ದೇವರಾಯನದುರ್ಗದ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿವೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಬೆಟ್ಟದ ಸುತ್ತಮುತ್ತ ಇವೆ. ದೇವರಾಯನದುರ್ಗವನ್ನು ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡದೆ ಜೀವವೈವಿಧ್ಯತೆಯ ತಾಣವಾಗಿಯು ಗುರುತಿಸುವ ಮೂಲಕ ಈ ಪ್ರದೇಶವನ್ನು ಸಂರಕ್ಷಿಸಬೇಕಿದೆ ಎನ್ನುತ್ತಾರೆ ವೈ.ಟಿ.ಲೋಹಿತ್.
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…
ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…
ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…