ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ: ಆ ಕಪ್ಪೆ ಹೆಸರೇನು?, ಅದು ಹೇಗೆ ಬೆಳೆಯುತ್ತದೆ?, ಆ ಕಪ್ಪೆಯನ್ನ ಎಲ್ಲಿ ಕಾಣಬಹುದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ಓದಿ…..

ಅಣಬೆಗಳು ಸಹಜವಾಗಿ ಮಣ್ಣಿನಲ್ಲಿ ಮಾತ್ರ ಬೆಳೆಯುವುದನ್ನ ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಕಂಡುಹಿಡಿಯಲಾಗಿದೆ. ಹಾಗದರೆ ಆ ಕಪ್ಪೆ ಹೆಸರೇನು?, ಅದು ಹೇಗೆ ಬೆಳೆಯುತ್ತದೆ?, ಆ ಕಪ್ಪೆಯನ್ನ ಎಲ್ಲಿ ಕಾಣಬಹುದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ….

ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಪೋಟೋ ತೆಗೆಯುವ ಮೂಲಕ ಹೊರ ಜಗತ್ತಿಗೆ ಪ್ರಥಮ ಬಾರಿಗೆ ಡಬ್ಲ್ಯೂ ಡಬ್ಲ್ಯೂ ಎಫ್ ಸಂಸ್ಥೆಯ ಹಿರಿಯ ಯೋಜನ ಅಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಶಧಕ ವೈ.ಟಿ.ಲೋಹಿತ್ ಪರಿಚಿಸಿದ್ದಾರೆ.

ಈ ಬಗ್ಗೆ ವೈ.ಟಿ.ಲೋಹಿತ್ ಅವರು ಮಾಹಿತಿ ನೀಡಿದ್ದಾರೆ, ಚಿನ್ಮಯ್ ಸಿ.ಮಳಿಯೆ, ನವೀನ್ ಐಯ್ಯರ್, ಬಿ.ಜಿ.ನಿಶಾ ಹಾಗೂ ಎಸ್.ಆಶಾ ತಂಡವು ಪಶ್ಚಿಮಘಟ್ಟ ಸಾಲಿನ ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದಲ್ಲಿ ಕಪ್ಪೆ ಮತ್ತು ಹಾವುಗಳ ಚಲನವಲನಗಳನ್ನು ಗಮನಿಸಿ ದಾಖಲಿಸಲು ಹೋಗಿದ್ದರು.

ಈ ವೇಳೆ ಗೋಲ್ಡನ್ ಬ್ಯಾಕ್ಡ್ ಕಪ್ಪೆಯ ಈ ಅಪರೂಪದ ಬೆಳವಣಿಗೆ ಕುರಿತು ಕಂಡುಹಿಡಿದಿದ್ದಾರೆ. ನಂತರ ಕುರಿತ ಸಂಶೋಧನ ಬರಹವನ್ನು ಅಂತಾರಾಷ್ಟ್ರೀಯ ಜರ್ನಲ್  ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ (Reptiles & Amphibians) ನಲ್ಲಿ ಪ್ರಕಟಿಸಿದೆ.

ಪ್ರಾಣಿ ವರ್ಗ ಮತ್ತು ಸಸ್ಯ ವರ್ಗ ಎರಡಕ್ಕೂ ಸೇರದ ಅಣಬೆ ಫಂಗೈ ವರ್ಗಕ್ಕೆ ಸೇರಿದೆ. ಗೋಲ್ಡನ್ ಬ್ಯಾಕ್ಡ್ ಕಪ್ಪೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಣಬಹುದಾಗಿವೆ. ಮತ್ತು ಅದರ ಮೈ ಮೇಲೆ ಬೆಳೆದಿರುವ ಮೈಸಿನ ಅಥವಾ ಬಾನೆಟ್ ಮಶ್ರೂಮ್ ಎಂದು ಕರೆಯುವ ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಒಂದು ಜೀವಂತ ಪ್ರಾಣಿಯ ಮೇಲೆ ಅಣಬೆ ಬೆಳೆದಿರುವುದು ವಿಜ್ಞಾನ ಲೋಕದಲ್ಲಿ ಮೊದಲ ದಾಖಲೆಗೆ ಪಶ್ಚಿಮ ಘಟ್ಟಗಳ ಸಾಲು ಸಾಕ್ಷಿಯಾಗಿದೆ.

ಉಭಯಚರ ಜೀವಿಗಳಿಗೆ ಕೆಲವೊಂದು ಫಂಗೈಗಳಿಂದ ಕಾಯಿಲೆಗಳು ಸಂಭವಿಸಿ ಸಾಯುತ್ತವೆ. ಇಂತಹ ಸಮಸ್ಯೆ ಕೀಟ ಮತ್ತು ಜೇಡಗಳಲ್ಲೂ ಕಾಣಬಹುದು. ಆದರೆ, ಜೀವಂತ ಕಪ್ಪೆಯ ಮೇಲಿನ ಅಣಬೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಮಾಡಿಕೊಟ್ಟಿದೆ ಎನ್ನುವ ವೈ.ಜಿ.ಲೋಹಿತ್, ಇದರ ನಿಖರ ಕಾರಣವನ್ನು  ತಕ್ಷಣಕ್ಕೆ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕಪ್ಪೆಗಳು ವಾಸವಾಗಿದ್ದ ಕೊಳದಲ್ಲಿ ನಲವತ್ತಕ್ಕೂ ಹೆಚ್ಚು ಗೋಲ್ಡನ್ ಬ್ಯಾಕ್ಡ್ ಕಪ್ಪೆಗಳಿದ್ದವು. ಇವುಗಳನ್ನು ಗಮನಿಸುವಾಗ ಒಂದು ಕಪ್ಪೆಯ ಮೇಲೆ ಮಾತ್ರ ಅಣಬೆ ಬೆಳವಣಿಗೆ ಗಮನಿಸಿ ಫೋಟೋ ತೆಗೆಯಲಾಗಿದೆ. ಅಲ್ಲದೆ ಈ ಕಪ್ಪೆಯು ಚಟುವಟಿಕೆಯಿಂದ ಕೂಡಿದ್ದು, ಇತರೆ ಕಪ್ಪೆಗಳಿಗೂ ಇದಕ್ಕೂ ಅಂತಹ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬಂದಿಲ್ಲ ಎನ್ನುತ್ತಾರೆ.

ಮೊದಲ ಬಾರಿಗೆ ಈ ಫೋಟೋಗಳನ್ನು ಗಮನಿಸಿದ ವಿಜ್ಞಾನಿಗಳು ಮತ್ತು ಪರಿಸರಾಸಕ್ತರು ಇದನ್ನು ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ (ಎಐ) ಚಿತ್ರ ಅಥವಾ ಫೋಟೋಶಾಪ್ ಎಂದು ಅನುಮಾನಿಸಿದ್ದರು. ನಂತರ ಐ ನ್ಯಾಚುರಲಿಸ್ಟ್ ಮತ್ತು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ನಲ್ಲಿ ಒಪ್ಪಿಕೊಂಡ ನಂತರ ಈ ಅನುಮಾನಗಳು ನಿವಾರಣೆಯಾದ ನಂತರ ಅಂತಾರಾಷ್ಟ್ರೀಯ ಜರ್ನಲ್  ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ನಲ್ಲಿ ಪ್ರಕಟಿಸಲಾಗಿದೆ ಎಂದರು.

ಇದೊಂದು ಆಕರ್ಷಣಿಯ ದಾಖಲಾತಿ. ಕೆಲವೊಂದು ಫಂಗೈಗಳು ಇತರೆ ಜೀವಿಗಳೊಂದಿಗೆ ಪರಸ್ಪರ ಅನುಕೂಲಕರವಾಗಿರುತ್ತವೆ ಮತ್ತು ಕೆಲವೊಂದು ಫಂಗೈಗಳು ಇತರ ಜೀವಿಗಳಿಗೆ ಮಾರಕವಾಗಿವೆ. ಕಪ್ಪೆ ಮತ್ತು ಅಣಬೆಯ ಈ ಸಂಭಂದದ ಬಗ್ಗೆ ಹೆಚ್ಚು ಮಾಹಿತಿಗಲಿಲ್ಲ. ಈ ಒಂದು ಸಂಭವ, ಕಪ್ಪೆಗಳಿಗೆ ಫಂಗೈನೊಂದಿಗಿರುವ ಸಂಕೀರ್ಣವಾದ ಸಂಭಂದವನ್ನು ಆಳವಾಗಿ ಅಧ್ಯಯನ ಮಾಡಲು ಸಂಶೋಧಕರಿಗೆ ಪ್ರೇರೇಪಿಸಿದೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಇಕಾಲಜಿಕಲ್ ಸೈನ್ಸಸ್(ಐಐಎಸ್ಸಿ) -ಡಾ.ವಿವೇಕ್ ಫಿಲಿಪ್ಸಿ ರಿಯಾಕ್ ಮಾಹಿತಿ ನೀಡಿದ್ದಾರೆ.

Ramesh Babu

Journalist

Recent Posts

ಮದ್ಯ ಖರೀದಿ, ಸೇವನೆಗೆ 21 ವರ್ಷ ಕಡ್ಡಾಯ; ಯುವಜನರ ರಕ್ಷಣೆಗಾಗಿ ಕಟ್ಟುನಿಟ್ಟಿನ ಮದ್ಯ ನಿಯಮ ಜಾರಿ

21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ…

4 minutes ago

ಡ್ಯೂಕ್ ಬೈಕ್–ಕಂಟೈನರ್ ಲಾರಿ ಅಪಘಾತ – ಯುವಕ ಸ್ಥಳದಲ್ಲೇ ಸಾವು

ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ…

34 minutes ago

ನೂತನ ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವತಿ ಸ್ಥಳದಲ್ಲೇ ಸಾವು

ಹೊಸಕೋಟೆ: ನೂತನ ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ…

2 hours ago

ಸಮಾಜ ಕಲ್ಯಾಣ ಇಲಾಖೆ: ಸಚಿವ ಸಂಪುಟದ ಪ್ರಬಲ ಖಾತೆ, ಕೆ.ಎಚ್. ಮುನಿಯಪ್ಪ ಆಸಕ್ತಿ ಏಕೆ?

ಬೆಂಗಳೂರು ಗ್ರಾಮಾಂತರ: ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಆಹಾರ ಮತ್ತು ನಾಗರಿಕ…

3 hours ago

ಜನ ಪ್ರತಿನಿಧಿಗಳೆಂಬ ಸಮಾಜ ಸೇವಕರೋ – ಸಂವಿಧಾನ ರಕ್ಷಕರೋ – ರೇಸು ಕುದುರೆಗಳೋ – ಗೋಮುಖ ವ್ಯಾಘ್ರಗಳೋ…..?

ಕೃಷಿಕರ ನಿರೀಕ್ಷೆ,.... ಅನ್ನದ ಋಣ ಮರೆತ ರಾಜಕಾರಣಿಗಳು,..... ಅನ್ನದಾತರ ಅಂತರಂಗ...... ಮುಂಗಾರು ಮಳೆಯ ಹೊಸ್ತಿಲಲ್ಲಿ.... ರೈತರ ದಾರುಣ ಆತ್ಮಹತ್ಯೆಗಳು...... ಜನ…

6 hours ago

‘ಬೆಂಗಳೂರಿನಲ್ಲಿ ಜನಸಂಖ್ಯೆ ವಾರ್ಷಿಕ ಬೆಳವಣಿಗೆ ದರ 3.7%, ವಾಹನ ಸಂಖ್ಯೆ ಬೆಳವಣಿಗೆ ದರ 10% ನಷ್ಟಿದೆ’

ಉದ್ಯೋಗ ಸೃಷ್ಟಿಯಲ್ಲಿ, ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯಲ್ಲಿ ಮುಂಚೂಣಿ ನಗರವಾಗಿರುವ ಬೆಂಗಳೂರು ಪರಿಣಾಮಕಾರಿ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ಗೃಹ…

6 hours ago