ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ: ಆ ಕಪ್ಪೆ ಹೆಸರೇನು?, ಅದು ಹೇಗೆ ಬೆಳೆಯುತ್ತದೆ?, ಆ ಕಪ್ಪೆಯನ್ನ ಎಲ್ಲಿ ಕಾಣಬಹುದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ಓದಿ…..

ಅಣಬೆಗಳು ಸಹಜವಾಗಿ ಮಣ್ಣಿನಲ್ಲಿ ಮಾತ್ರ ಬೆಳೆಯುವುದನ್ನ ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಕಂಡುಹಿಡಿಯಲಾಗಿದೆ. ಹಾಗದರೆ ಆ ಕಪ್ಪೆ ಹೆಸರೇನು?, ಅದು ಹೇಗೆ ಬೆಳೆಯುತ್ತದೆ?, ಆ ಕಪ್ಪೆಯನ್ನ ಎಲ್ಲಿ ಕಾಣಬಹುದು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ….

ಜೀವಂತ ಕಪ್ಪೆಯ ಪಕ್ಕೆಯಿಂದ ಅಣಬೆ ಮೊಳಕೆ ಒಡೆದು ಬೆಳೆಯುತ್ತಿರುವುದನ್ನು ಪೋಟೋ ತೆಗೆಯುವ ಮೂಲಕ ಹೊರ ಜಗತ್ತಿಗೆ ಪ್ರಥಮ ಬಾರಿಗೆ ಡಬ್ಲ್ಯೂ ಡಬ್ಲ್ಯೂ ಎಫ್ ಸಂಸ್ಥೆಯ ಹಿರಿಯ ಯೋಜನ ಅಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಶಧಕ ವೈ.ಟಿ.ಲೋಹಿತ್ ಪರಿಚಿಸಿದ್ದಾರೆ.

ಈ ಬಗ್ಗೆ ವೈ.ಟಿ.ಲೋಹಿತ್ ಅವರು ಮಾಹಿತಿ ನೀಡಿದ್ದಾರೆ, ಚಿನ್ಮಯ್ ಸಿ.ಮಳಿಯೆ, ನವೀನ್ ಐಯ್ಯರ್, ಬಿ.ಜಿ.ನಿಶಾ ಹಾಗೂ ಎಸ್.ಆಶಾ ತಂಡವು ಪಶ್ಚಿಮಘಟ್ಟ ಸಾಲಿನ ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದಲ್ಲಿ ಕಪ್ಪೆ ಮತ್ತು ಹಾವುಗಳ ಚಲನವಲನಗಳನ್ನು ಗಮನಿಸಿ ದಾಖಲಿಸಲು ಹೋಗಿದ್ದರು.

ಈ ವೇಳೆ ಗೋಲ್ಡನ್ ಬ್ಯಾಕ್ಡ್ ಕಪ್ಪೆಯ ಈ ಅಪರೂಪದ ಬೆಳವಣಿಗೆ ಕುರಿತು ಕಂಡುಹಿಡಿದಿದ್ದಾರೆ. ನಂತರ ಕುರಿತ ಸಂಶೋಧನ ಬರಹವನ್ನು ಅಂತಾರಾಷ್ಟ್ರೀಯ ಜರ್ನಲ್  ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ (Reptiles & Amphibians) ನಲ್ಲಿ ಪ್ರಕಟಿಸಿದೆ.

ಪ್ರಾಣಿ ವರ್ಗ ಮತ್ತು ಸಸ್ಯ ವರ್ಗ ಎರಡಕ್ಕೂ ಸೇರದ ಅಣಬೆ ಫಂಗೈ ವರ್ಗಕ್ಕೆ ಸೇರಿದೆ. ಗೋಲ್ಡನ್ ಬ್ಯಾಕ್ಡ್ ಕಪ್ಪೆ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಣಬಹುದಾಗಿವೆ. ಮತ್ತು ಅದರ ಮೈ ಮೇಲೆ ಬೆಳೆದಿರುವ ಮೈಸಿನ ಅಥವಾ ಬಾನೆಟ್ ಮಶ್ರೂಮ್ ಎಂದು ಕರೆಯುವ ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಒಂದು ಜೀವಂತ ಪ್ರಾಣಿಯ ಮೇಲೆ ಅಣಬೆ ಬೆಳೆದಿರುವುದು ವಿಜ್ಞಾನ ಲೋಕದಲ್ಲಿ ಮೊದಲ ದಾಖಲೆಗೆ ಪಶ್ಚಿಮ ಘಟ್ಟಗಳ ಸಾಲು ಸಾಕ್ಷಿಯಾಗಿದೆ.

ಉಭಯಚರ ಜೀವಿಗಳಿಗೆ ಕೆಲವೊಂದು ಫಂಗೈಗಳಿಂದ ಕಾಯಿಲೆಗಳು ಸಂಭವಿಸಿ ಸಾಯುತ್ತವೆ. ಇಂತಹ ಸಮಸ್ಯೆ ಕೀಟ ಮತ್ತು ಜೇಡಗಳಲ್ಲೂ ಕಾಣಬಹುದು. ಆದರೆ, ಜೀವಂತ ಕಪ್ಪೆಯ ಮೇಲಿನ ಅಣಬೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳಿಗೆ ದಾರಿಮಾಡಿಕೊಟ್ಟಿದೆ ಎನ್ನುವ ವೈ.ಜಿ.ಲೋಹಿತ್, ಇದರ ನಿಖರ ಕಾರಣವನ್ನು  ತಕ್ಷಣಕ್ಕೆ ಊಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕಪ್ಪೆಗಳು ವಾಸವಾಗಿದ್ದ ಕೊಳದಲ್ಲಿ ನಲವತ್ತಕ್ಕೂ ಹೆಚ್ಚು ಗೋಲ್ಡನ್ ಬ್ಯಾಕ್ಡ್ ಕಪ್ಪೆಗಳಿದ್ದವು. ಇವುಗಳನ್ನು ಗಮನಿಸುವಾಗ ಒಂದು ಕಪ್ಪೆಯ ಮೇಲೆ ಮಾತ್ರ ಅಣಬೆ ಬೆಳವಣಿಗೆ ಗಮನಿಸಿ ಫೋಟೋ ತೆಗೆಯಲಾಗಿದೆ. ಅಲ್ಲದೆ ಈ ಕಪ್ಪೆಯು ಚಟುವಟಿಕೆಯಿಂದ ಕೂಡಿದ್ದು, ಇತರೆ ಕಪ್ಪೆಗಳಿಗೂ ಇದಕ್ಕೂ ಅಂತಹ ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬಂದಿಲ್ಲ ಎನ್ನುತ್ತಾರೆ.

ಮೊದಲ ಬಾರಿಗೆ ಈ ಫೋಟೋಗಳನ್ನು ಗಮನಿಸಿದ ವಿಜ್ಞಾನಿಗಳು ಮತ್ತು ಪರಿಸರಾಸಕ್ತರು ಇದನ್ನು ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ (ಎಐ) ಚಿತ್ರ ಅಥವಾ ಫೋಟೋಶಾಪ್ ಎಂದು ಅನುಮಾನಿಸಿದ್ದರು. ನಂತರ ಐ ನ್ಯಾಚುರಲಿಸ್ಟ್ ಮತ್ತು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ನಲ್ಲಿ ಒಪ್ಪಿಕೊಂಡ ನಂತರ ಈ ಅನುಮಾನಗಳು ನಿವಾರಣೆಯಾದ ನಂತರ ಅಂತಾರಾಷ್ಟ್ರೀಯ ಜರ್ನಲ್  ರೇಪ್ಟೈಲ್ಸ್ ಅಂಡ್ ಅಂಫಿಬಿಯನ್ಸ್ನಲ್ಲಿ ಪ್ರಕಟಿಸಲಾಗಿದೆ ಎಂದರು.

ಇದೊಂದು ಆಕರ್ಷಣಿಯ ದಾಖಲಾತಿ. ಕೆಲವೊಂದು ಫಂಗೈಗಳು ಇತರೆ ಜೀವಿಗಳೊಂದಿಗೆ ಪರಸ್ಪರ ಅನುಕೂಲಕರವಾಗಿರುತ್ತವೆ ಮತ್ತು ಕೆಲವೊಂದು ಫಂಗೈಗಳು ಇತರ ಜೀವಿಗಳಿಗೆ ಮಾರಕವಾಗಿವೆ. ಕಪ್ಪೆ ಮತ್ತು ಅಣಬೆಯ ಈ ಸಂಭಂದದ ಬಗ್ಗೆ ಹೆಚ್ಚು ಮಾಹಿತಿಗಲಿಲ್ಲ. ಈ ಒಂದು ಸಂಭವ, ಕಪ್ಪೆಗಳಿಗೆ ಫಂಗೈನೊಂದಿಗಿರುವ ಸಂಕೀರ್ಣವಾದ ಸಂಭಂದವನ್ನು ಆಳವಾಗಿ ಅಧ್ಯಯನ ಮಾಡಲು ಸಂಶೋಧಕರಿಗೆ ಪ್ರೇರೇಪಿಸಿದೆ ಎಂದು ಬೆಂಗಳೂರಿನ ಸೆಂಟರ್ ಫಾರ್ ಇಕಾಲಜಿಕಲ್ ಸೈನ್ಸಸ್(ಐಐಎಸ್ಸಿ) -ಡಾ.ವಿವೇಕ್ ಫಿಲಿಪ್ಸಿ ರಿಯಾಕ್ ಮಾಹಿತಿ ನೀಡಿದ್ದಾರೆ.

Ramesh Babu

Journalist

Recent Posts

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

3 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

4 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

19 hours ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago

ದೇವಾಲಯಗಳ ಹುಂಡಿ ಭದ್ರತೆಗೆ ಸಿಸಿಟಿವಿ ಕಣ್ಗಾವಲು- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳ ಹುಂಡಿ ಭದ್ರತೆ ಸೇರಿದಂತೆ ಎಣಿಕೆ ಕಾರ್ಯ,…

2 days ago