ಜಿಲ್ಲಾ ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿ ಪುನೀತ್ ನೇಮಕ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನಾಗಿ ತಾಲ್ಲೂಕಿನ ತಳಗವಾರದ ಯುವ ಮುಖಂಡ ಪುನೀತ್ ಕುಮಾರ್ ಅವರನ್ನು ನೇಮಕ ಮಾಡಿ ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಅಧ್ಯಕ್ಷ ಆರ್ ಧರ್ಮಸೇನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ, ತಾಲ್ಲೂಕು, ವಿವಿಧ ಬ್ಲಾಕ್ ಸಮಿತಿಗಳ ಮಾರ್ಗದರ್ಶನದಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುವಂತೆ ಧರ್ಮಸೇನ ಸೂಚನೆ ನೀಡಿದ್ದಾರೆ. ಈ ವೇಳೆ ರಾಜ್ಯ ಪರಿಶಿಷ್ಟ ವಿಭಾಗದ ರಾಜ್ಯ ಉಸ್ತುವಾರಿ ನೆಹೇಮಿಯ ರಾಜು, ರಾಜ್ಯ ಸಂಚಾಲಕ ರಾಮಕೃಷ್ಣಪ್ಪ ಇದ್ದರು‌.

Leave a Reply

Your email address will not be published. Required fields are marked *