ಜಿಂಕೆ ಬೇಟೆಯಾಡಿದ ಮೂವರನ್ನ‌ ಸಿನಿಮೀಯಾ‌ ರೀತಿಯಲ್ಲಿ ಬಂಧನ

ಜಿಂಕೆ ಬೇಟೆಯಾಡಿದ ಮೂವರನ್ನ‌ ಸಿನಿಮೀಯಾ‌ ರೀತಿಯಲ್ಲಿ ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಬಂಧಿಸಿದ್ದರೆ.

ಆನೇಕಲ್ ನ ಪ್ರವಾಸಿ ತಡ ಮುತ್ಯಾಲಮಡು ಬಳಿ ಅರೆಸ್ಟ್ ಮಾಡಿದ್ದಾರೆ. ಮುಂಜಾನೆ ಆರು ಜನ ಜಿಂಕೆಯನ್ನ ಬೇಟೆಯಾಡಿದ್ದರು.

ಖಾಸಗಿ ಜಮೀನಿನಲ್ಲಿ ಬೇಟೆಯಾಡಿದ ಜಿಂಕೆ ಮಾಂಸವನ್ನ ಆರು ಜನ ಹಂಚಿಕೊಂಡು‌ ಬೈಕಿನಲ್ಲಿ ಹೊರಟಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೈಕ್ ನಲ್ಲಿ ಇದ್ದವರನ್ನು ಮಾಂಸದ ಸಮೇತ ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಬೇಟೆಯಾಡಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

ಕಾರಿನಲ್ಲಿದ್ದ ಗನ್, ಮಚ್ಚು ಹಾಗೂ‌ ಮಾಂಸ ವಶಕ್ಕೆ ಪಡೆದಿದ್ದಾರೆ.

ಸುಮಾರು 50 ಕಿ.ಮೀ ದೂರದಿಂದ ಬೇಟೆ ಆಡಲು ಬೇಟೆಗಾರರು ಬಂದಿದ್ದರು.

ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು(40), ಆದೂರು‌ ಮೂಲದ ರಾಮಕೃಷ್ಣ(40), ಇಂಡ್ಲವಾಡಿ ಗ್ರಾಮದ ಕಿಶೋರ್(23) ಬಂಧಿತ ಆರೋಪಿಗಳು.

Leave a Reply

Your email address will not be published. Required fields are marked *