ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ಚಾಲನೆ

ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಯುವಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಚಲನ(ರಿ.) ಸಹಯೋಗದೊಂದಿಗೆ ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ನ. 4ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಾನಪದ ವಾಧ್ಯವನ್ನು ನುಡಿಸುವ ಮೂಲಕ ಉದ್ಘಾಟಿಸಲಾಯಿತು.

ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ ಮೂರ್ತಿಯವರು ಮಾತನಾಡಿ, “ಬಾಯಿಂದ ಬಾಯಿಗೆ ತಲುಪಿರುವ ಕಾರಣ ಜಾನಪದವು ಇನ್ನು ಉಳಿದಿದೆ. ಆದರೆ, ಈಗ ಜಾನಪದದ ಸ್ವರೂಪ ಬದಲಾಗಿ ಆಧುನಿಕ ಸಂಗೀತದ ಜೊತೆ ಸೇರಿ ಮೊಬೈಲ್ ಇಂದ ಮೊಬೈಲ್ ಗೆ ಫಾರ್ವರ್ಡ್ ಆಗುತ್ತಿದೆ. ಎಲ್ಲಾ ಹಾಡುಗಳಿಗೂ ಇತಿಹಾಸವಿರುತ್ತದೆ. ಹಾಡುಗಳಿಗೂ ಆರೋಗ್ಯಕ್ಕೂ ನೇರವಾಗಿ ಸಂಬಂಧವಿರುತ್ತದೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಹಾಡುವುದು ಒಂದು ಔಷಧಿ. ಪ್ರದರ್ಶನಕ್ಕಲ್ಲದಿದ್ದರೂ ನಮ್ಮ ಖುಷಿಗಾಗಿಯಾದರು ವಾದ್ಯವನ್ನು, ಹಾಡುವುದನ್ನು ಕಲಿಯಬೇಕು. ತುಂಬಾ ನೊಂದವರು ನೋವಿನಿಂದ ಹೋರಬರಲು ವಾದ್ಯ ಬಳಸುತ್ತಿದ್ದರು” ಎಂದು ಹೇಳುತ್ತಾ ಜಾನಪದ ತರಬೇತಿಯ ಉದ್ದೇಶ ಹಾಗೂ ಸ್ಪರ್ಧೆಯು ಯಾವರೀತಿ ನಡೆಯುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ. ಸುದರ್ಶನ್ ರವರು ಮಾತನಾಡಿ, “ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಕರಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಜೀವನವನ್ನು ರೂಪಿಸಿಕೊಳ್ಳಲು ಡಿಗ್ರಿಗಳು ಒಂದೇ ಮುಖ್ಯವಲ್ಲ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಬೇಕು. ಎಲ್ಲದರಲ್ಲೂ ಸಂಪಾದನೆ ಇರುತ್ತದೆ. ಜಾನಪದ ವಾದ್ಯ, ಗೀತೆ ಇವುಗಳಿಗೆ ಪ್ರತ್ಯೇಕ ವಿಶ್ವ ವಿದ್ಯಾನಿಲಯಗಳು ಇದ್ದು ನೀಮಗೆ ಆಸಕ್ತಿ ಇದ್ದರೆ ಇವುಗಳ ಮೇಲೆ ಪದವಿಗಳನ್ನು ಸಹ ಪಡೆಯಬಹುದು. ವಿದ್ಯಾಭ್ಯಾಸದ ಜೊತೆಗೆ ಬೇರೆ ಆಸಕ್ತಿಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಎಲ್ಲರು ಈ ಶಿಬಿರದ ಪ್ರಯೋಜನ ಪಡೆಯಬೇಕು ” ಎಂದು ಹೇಳಿದರು.

ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಿವಾಕರ್ ನಾಗ್ ರವರು ಶಿಬಿರಾರ್ಥಿಗಳಿಗೆ ಜಾನಪದ ವಾದ್ಯಗಳಾದ ತಮಟೆ, ಚೌಡಿಕೆ, ಗೆಜ್ಜೆ, ದಮಡಿ, ಡಮರುಗ ಮುಂತಾದ ವಾದ್ಯಗಳ ಪರಿಚಯ ಮಾಡಿ ನಂತರ ಮೂಲ ಜಾನಪದ ಗೀತೆಯ ಇತಿಹಾಸವನ್ನು ತಿಳಿಸಿ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ, ಡಾ. ಭಾರತಿ ಸಾರ್ಮಾಜ್, ಡಾ. ನಂಜಪ್ಪ, ಡಾ.ಮಂಜುಳಮ್ಮ, ಮಹದೇವಯ್ಯ ಕೆ.ಎಂ, ದಿವ್ಯಶ್ರೀ ಹಾಗೂ ಯುವ ಸಂಚಲನ ತಂಡದ ಸದಸ್ಯರಾದ ಸಂಧ್ಯಾ ಮತ್ತು ನವೀನ್ ಉಪಸ್ಥಿತರಿದ್ದರು.

Ramesh Babu

Journalist

Recent Posts

” ಕ್ಷಮೆ” ಎಂಬ ಭಾವದ ಸುತ್ತ……

ಕನ್ನಡದ ಖ್ಯಾತ, ಪ್ರತಿಭಾವಂತ ಚಲನಚಿತ್ರ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಅನಂತನಾಗ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದೆಹಲಿಯ…

19 minutes ago

ವೃದ್ಧ ದಂಪತಿ ಆತ್ನಹತ್ಯೆಗೆ ಯತ್ನ: ಪತಿ ಶಿವಪ್ಪ ಸಾವು

ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರ ಗ್ರಾಮದ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಪತಿ ಶಿವಪ್ಪ(76) ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ…

10 hours ago

ಗ್ರಾಹಕರ ಸೋಗಿನಲ್ಲಿ ಬಂದು ಜ್ಯುವೆಲ್ಲರಿ ಅಂಗಡಿಯಲ್ಲಿ ದರೋಡೆ ಯತ್ನ

ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಚಿನ್ನಾಭರಣ ದರೋಡೆಗೆ…

11 hours ago

ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ: ಇಬ್ಬರು ಯುವಕರಿಗೆ ಸುಟ್ಟ ಗಾಯ

ದೊಡ್ಡಬಳ್ಳಾಪುರ: ರಾತ್ರಿ ವೇಳೆ ಗ್ಯಾಸ್ ಸ್ಟೌವ್ ಆನ್ ಸ್ಥಿತಿಯಲ್ಲಿಯೇ ಕೆಲಸಕ್ಕೆ ತೆರಳಿದ್ದ ಪರಿಣಾಮ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಇಬ್ಬರು…

20 hours ago

ಬರ ವೀಕ್ಷಣೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ: ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

2 days ago

28ಕ್ಕೂ ಹೆಚ್ಚು ಜಿಲ್ಲೆಗಳು ಬರದ ಸಂಕಷ್ಟದಲ್ಲಿ; ರೈತರಿಗೆ ತಕ್ಷಣ ₹10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

ತುಮಕೂರು: ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ಸಮರ್ಪಕ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ…

2 days ago