ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ಚಾಲನೆ

ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಯುವಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಚಲನ(ರಿ.) ಸಹಯೋಗದೊಂದಿಗೆ ಜಾನಪದ ವಾದ್ಯ, ಜಾನಪದ ಗೀತೆ ಹಾಗೂ ಜಾನಪದ ನೃತ್ಯಗಳ ತರಬೇತಿ ಶಿಬಿರಕ್ಕೆ ನ. 4ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಾನಪದ ವಾಧ್ಯವನ್ನು ನುಡಿಸುವ ಮೂಲಕ ಉದ್ಘಾಟಿಸಲಾಯಿತು.

ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ ಮೂರ್ತಿಯವರು ಮಾತನಾಡಿ, “ಬಾಯಿಂದ ಬಾಯಿಗೆ ತಲುಪಿರುವ ಕಾರಣ ಜಾನಪದವು ಇನ್ನು ಉಳಿದಿದೆ. ಆದರೆ, ಈಗ ಜಾನಪದದ ಸ್ವರೂಪ ಬದಲಾಗಿ ಆಧುನಿಕ ಸಂಗೀತದ ಜೊತೆ ಸೇರಿ ಮೊಬೈಲ್ ಇಂದ ಮೊಬೈಲ್ ಗೆ ಫಾರ್ವರ್ಡ್ ಆಗುತ್ತಿದೆ. ಎಲ್ಲಾ ಹಾಡುಗಳಿಗೂ ಇತಿಹಾಸವಿರುತ್ತದೆ. ಹಾಡುಗಳಿಗೂ ಆರೋಗ್ಯಕ್ಕೂ ನೇರವಾಗಿ ಸಂಬಂಧವಿರುತ್ತದೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಹಾಡುವುದು ಒಂದು ಔಷಧಿ. ಪ್ರದರ್ಶನಕ್ಕಲ್ಲದಿದ್ದರೂ ನಮ್ಮ ಖುಷಿಗಾಗಿಯಾದರು ವಾದ್ಯವನ್ನು, ಹಾಡುವುದನ್ನು ಕಲಿಯಬೇಕು. ತುಂಬಾ ನೊಂದವರು ನೋವಿನಿಂದ ಹೋರಬರಲು ವಾದ್ಯ ಬಳಸುತ್ತಿದ್ದರು” ಎಂದು ಹೇಳುತ್ತಾ ಜಾನಪದ ತರಬೇತಿಯ ಉದ್ದೇಶ ಹಾಗೂ ಸ್ಪರ್ಧೆಯು ಯಾವರೀತಿ ನಡೆಯುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಡಾ. ಸುದರ್ಶನ್ ರವರು ಮಾತನಾಡಿ, “ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಕರಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡುತ್ತಾ ಬಂದಿದೆ. ಜೀವನವನ್ನು ರೂಪಿಸಿಕೊಳ್ಳಲು ಡಿಗ್ರಿಗಳು ಒಂದೇ ಮುಖ್ಯವಲ್ಲ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಬೇಕು. ಎಲ್ಲದರಲ್ಲೂ ಸಂಪಾದನೆ ಇರುತ್ತದೆ. ಜಾನಪದ ವಾದ್ಯ, ಗೀತೆ ಇವುಗಳಿಗೆ ಪ್ರತ್ಯೇಕ ವಿಶ್ವ ವಿದ್ಯಾನಿಲಯಗಳು ಇದ್ದು ನೀಮಗೆ ಆಸಕ್ತಿ ಇದ್ದರೆ ಇವುಗಳ ಮೇಲೆ ಪದವಿಗಳನ್ನು ಸಹ ಪಡೆಯಬಹುದು. ವಿದ್ಯಾಭ್ಯಾಸದ ಜೊತೆಗೆ ಬೇರೆ ಆಸಕ್ತಿಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಎಲ್ಲರು ಈ ಶಿಬಿರದ ಪ್ರಯೋಜನ ಪಡೆಯಬೇಕು ” ಎಂದು ಹೇಳಿದರು.

ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಿವಾಕರ್ ನಾಗ್ ರವರು ಶಿಬಿರಾರ್ಥಿಗಳಿಗೆ ಜಾನಪದ ವಾದ್ಯಗಳಾದ ತಮಟೆ, ಚೌಡಿಕೆ, ಗೆಜ್ಜೆ, ದಮಡಿ, ಡಮರುಗ ಮುಂತಾದ ವಾದ್ಯಗಳ ಪರಿಚಯ ಮಾಡಿ ನಂತರ ಮೂಲ ಜಾನಪದ ಗೀತೆಯ ಇತಿಹಾಸವನ್ನು ತಿಳಿಸಿ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ, ಡಾ. ಭಾರತಿ ಸಾರ್ಮಾಜ್, ಡಾ. ನಂಜಪ್ಪ, ಡಾ.ಮಂಜುಳಮ್ಮ, ಮಹದೇವಯ್ಯ ಕೆ.ಎಂ, ದಿವ್ಯಶ್ರೀ ಹಾಗೂ ಯುವ ಸಂಚಲನ ತಂಡದ ಸದಸ್ಯರಾದ ಸಂಧ್ಯಾ ಮತ್ತು ನವೀನ್ ಉಪಸ್ಥಿತರಿದ್ದರು.

Ramesh Babu

Journalist

Recent Posts

ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು

  *ಚಿಕ್ಕನಾಯಕನಹಳ್ಳಿ : ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

1 minute ago

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

20 hours ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

20 hours ago

ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಮಹಿಳೆಯರು, ಮಗು ಬಲಿ

ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಒಂದು ಮಗು…

1 day ago

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

3 days ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

4 days ago