ಪರಿಸರ ಜಾಗೃತಿ ಬಗ್ಗೆ ಎಲ್ಲೆಡೆ ಒಂದು ದೊಡ್ಡ ದನಿ ಕೇಳಿ ಬರುತ್ತಿದೆ. ಮಕ್ಕಳಾದ ನಿಮ್ಮಿಂದಲೆ ಸಣ್ಣ ಬದಲಾವಣೆಯೊಂದಿಗೆ ಪರಿಸರ ಪ್ರಜ್ಞೆ ಜಾಗೃತವಾಗಲಿ ಎಂದು ಶಾಸಕ ಧೀರಜ್ ಮುನಿರಾಜು ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ಸ್ವಾರ್ಥದಲ್ಲಿ ಮುಳುಗಿದ್ದೇವೆ. ಪರಿಸರ ರಕ್ಷಣೆ ಕೇವಲ ಭಾಷಣಗಳಿಗೆ ಸಿಮೀತ ಎಂಬಾಂತಾಗಿದೆ. ಇದು ಆಗಬಾರದು, ಇದು ಮಕ್ಕಳಿಂದ ಆರಂಭವಾಗಬೇಕು ಎಂದರು.
ದೊಡ್ಡ ಮಟ್ಟದಲ್ಲಿ ಆಗದಿದ್ದರೂ ಸಣ್ಣ ಮಟ್ಟದಲ್ಲಿ ಆರಂಭವಾದರೆ ಮುಂದೊಂದು ದಿನ ಬೃಹತ್ ಆಕಾರ ಪಡೆಯುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಒಂದು ಗಿಡ ನೆಟ್ಟು ಸುಮ್ಮನಾಗದೆ ಅದನ್ನು ಪೋಷಿಸುವ ಕಾರ್ಯ ಮಾಡಿದರೆ ಪರಿಸರ ಉಳಿವಿಗೆ ಸಣ್ಣ ಕೊಡುಗೆಯಾಗಲಿದೆ ಎಂದರು.
ಮನೆಗಳ ಬಳಿ ಪ್ರತಿದಿನ ಬರುವ ಕಸದ ವಾಹನಗಳಿಗೆ ಸೂಕ್ತವಾಗಿ ವಿಂಗಡಿಸಿದ ಕಸವನ್ನು ಹಾಕಿ ಇಲ್ಲಿಂದಲೇ ಕಸದ ವೈಜ್ಞಾನಿಕ ವಿಂಗಡಣೆ ಆರಂಭವಾಗುತ್ತದೆ. ಮುಂದೆ ಬೃಹತ್ ಪ್ರಮಾಣದಲ್ಲಿ ಕಸದ ಸಮಸ್ಯೆ ನೀಗುತ್ತದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿ ಎಂದು ಮಕ್ಕಳಿಗೆ ತಿಳಿಸಿದರು.
ಬೆಳೆಯುವ ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ, ತಾಳ್ಮೆ, ಹಿರಿಯರಿಗೆ ಗೌರವ ಹೀಗೆ ಮಕ್ಕಳಿಗೆ ಕಲಿಸಬೇಕಾದಂತ ಅತ್ಯವಶ್ಯಕ ಅಂಶಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬದಲಾದ ಅವಶ್ಯಕತೆಗಳಿಗೆ ತಕ್ಕಂತೆ ಮಕ್ಕಳನ್ನು ತಯಾರಿಗೊಳಿಸುವುದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾಯಕತ್ವದ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು. ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಪ್ರಾಮಾಣಿಕ, ಧೈರ್ಯಶಾಲಿ, ಸಹೃದಯದ ಪಾಠ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.
ಕಲಿಕೆ ಎನ್ನುವುದು ಮಕ್ಕಳಿಗೆ ಹೊರೆಯಾಗಬಾರದು ಮಕ್ಕಳು ಸಂತೋಷದಿಂದ ಕಲಿತಾಗ ಮಾತ್ರ ನೂರರಷ್ಟು ಕಲಿಕೆ ಸಾಧ್ಯ. ಎನ್ಪಿಎಸ್ ಶಾಲೆಯು ಗ್ಲೋಬಲ್ ಟ್ರಯಂಫ್ ಫೌಂಡೇಶನ್ ಲೀಡರ್ಶಿಪ್ ಶೃಂಗಸಭೆಯಿಂದ ಗುರಿತಿಸಲ್ಪಟ್ಟಿದೆ. ಶಾಲೆಯ ಪ್ರತಿ ಮಗು ಸುಮಾರು 60 ಶ್ಲೋಕಗಳ ಜೊತೆಗೆ ಮುಸ್ಲಿಂ ಧರ್ಮದ ದುವಾ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಗಳನ್ನು ಸರಸಾಗಟವಾಗಿ ಹೇಳುತ್ತಾರೆ. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಹಾಗಾಗಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಎಲ್ಲಾ ಧರ್ಮದ ಹಬ್ಬ ಹರಿದಿನಗಳನ್ನು ಆಚರಿಸುತ್ತೇವೆ. ಫಾರ್ಮ್ ಪಾರ್ಟಿ, ಕಿಡ್ಸ್ ಕಾರ್ನಿವಲ್, ಅಕ್ಷರಾಭ್ಯಾಸ ನಮ್ಮ ಶಾಲೆಯ ವಿಶೇಷತೆಯಾಗಿದೆ ಎಂದರು.
ಪರಿಸರ ದಿನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿದ ಗಣ್ಯರು
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸತೀಶ್, ಪ್ರಾಂಶುಪಾಲರಾದ ರಶ್ಮಿ, ಶಿಕ್ಷಕರಾದ ಬಿಂದು, ತೇಜಸ್ವಿನಿ, ಕುಲ್ಸುಮ್ ಮತ್ತು ಸಿಬ್ಬಂದಿ, ಸಾರ್ವಜನಿಕರು ಇದ್ದರು.
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…
ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…
80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…
ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್ಡಿಎ ಬೆಂಬಲಿತ ನಿರ್ದೇಶಕ ಟಿ.ಜಿ.…