ಪರಿಸರ ಜಾಗೃತಿ ಬಗ್ಗೆ ಎಲ್ಲೆಡೆ ಒಂದು ದೊಡ್ಡ ದನಿ ಕೇಳಿ ಬರುತ್ತಿದೆ. ಮಕ್ಕಳಾದ ನಿಮ್ಮಿಂದಲೆ ಸಣ್ಣ ಬದಲಾವಣೆಯೊಂದಿಗೆ ಪರಿಸರ ಪ್ರಜ್ಞೆ ಜಾಗೃತವಾಗಲಿ ಎಂದು ಶಾಸಕ ಧೀರಜ್ ಮುನಿರಾಜು ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ಸ್ವಾರ್ಥದಲ್ಲಿ ಮುಳುಗಿದ್ದೇವೆ. ಪರಿಸರ ರಕ್ಷಣೆ ಕೇವಲ ಭಾಷಣಗಳಿಗೆ ಸಿಮೀತ ಎಂಬಾಂತಾಗಿದೆ. ಇದು ಆಗಬಾರದು, ಇದು ಮಕ್ಕಳಿಂದ ಆರಂಭವಾಗಬೇಕು ಎಂದರು.
ದೊಡ್ಡ ಮಟ್ಟದಲ್ಲಿ ಆಗದಿದ್ದರೂ ಸಣ್ಣ ಮಟ್ಟದಲ್ಲಿ ಆರಂಭವಾದರೆ ಮುಂದೊಂದು ದಿನ ಬೃಹತ್ ಆಕಾರ ಪಡೆಯುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಒಂದು ಗಿಡ ನೆಟ್ಟು ಸುಮ್ಮನಾಗದೆ ಅದನ್ನು ಪೋಷಿಸುವ ಕಾರ್ಯ ಮಾಡಿದರೆ ಪರಿಸರ ಉಳಿವಿಗೆ ಸಣ್ಣ ಕೊಡುಗೆಯಾಗಲಿದೆ ಎಂದರು.
ಮನೆಗಳ ಬಳಿ ಪ್ರತಿದಿನ ಬರುವ ಕಸದ ವಾಹನಗಳಿಗೆ ಸೂಕ್ತವಾಗಿ ವಿಂಗಡಿಸಿದ ಕಸವನ್ನು ಹಾಕಿ ಇಲ್ಲಿಂದಲೇ ಕಸದ ವೈಜ್ಞಾನಿಕ ವಿಂಗಡಣೆ ಆರಂಭವಾಗುತ್ತದೆ. ಮುಂದೆ ಬೃಹತ್ ಪ್ರಮಾಣದಲ್ಲಿ ಕಸದ ಸಮಸ್ಯೆ ನೀಗುತ್ತದೆ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿ ಎಂದು ಮಕ್ಕಳಿಗೆ ತಿಳಿಸಿದರು.
ಬೆಳೆಯುವ ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ, ತಾಳ್ಮೆ, ಹಿರಿಯರಿಗೆ ಗೌರವ ಹೀಗೆ ಮಕ್ಕಳಿಗೆ ಕಲಿಸಬೇಕಾದಂತ ಅತ್ಯವಶ್ಯಕ ಅಂಶಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬದಲಾದ ಅವಶ್ಯಕತೆಗಳಿಗೆ ತಕ್ಕಂತೆ ಮಕ್ಕಳನ್ನು ತಯಾರಿಗೊಳಿಸುವುದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಾಯಕತ್ವದ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು. ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಪ್ರಾಮಾಣಿಕ, ಧೈರ್ಯಶಾಲಿ, ಸಹೃದಯದ ಪಾಠ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.
ಕಲಿಕೆ ಎನ್ನುವುದು ಮಕ್ಕಳಿಗೆ ಹೊರೆಯಾಗಬಾರದು ಮಕ್ಕಳು ಸಂತೋಷದಿಂದ ಕಲಿತಾಗ ಮಾತ್ರ ನೂರರಷ್ಟು ಕಲಿಕೆ ಸಾಧ್ಯ. ಎನ್ಪಿಎಸ್ ಶಾಲೆಯು ಗ್ಲೋಬಲ್ ಟ್ರಯಂಫ್ ಫೌಂಡೇಶನ್ ಲೀಡರ್ಶಿಪ್ ಶೃಂಗಸಭೆಯಿಂದ ಗುರಿತಿಸಲ್ಪಟ್ಟಿದೆ. ಶಾಲೆಯ ಪ್ರತಿ ಮಗು ಸುಮಾರು 60 ಶ್ಲೋಕಗಳ ಜೊತೆಗೆ ಮುಸ್ಲಿಂ ಧರ್ಮದ ದುವಾ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಗಳನ್ನು ಸರಸಾಗಟವಾಗಿ ಹೇಳುತ್ತಾರೆ. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಹಾಗಾಗಿ ಸಾಂಪ್ರದಾಯಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಎಲ್ಲಾ ಧರ್ಮದ ಹಬ್ಬ ಹರಿದಿನಗಳನ್ನು ಆಚರಿಸುತ್ತೇವೆ. ಫಾರ್ಮ್ ಪಾರ್ಟಿ, ಕಿಡ್ಸ್ ಕಾರ್ನಿವಲ್, ಅಕ್ಷರಾಭ್ಯಾಸ ನಮ್ಮ ಶಾಲೆಯ ವಿಶೇಷತೆಯಾಗಿದೆ ಎಂದರು.
ಪರಿಸರ ದಿನ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಿದ ಗಣ್ಯರು
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸತೀಶ್, ಪ್ರಾಂಶುಪಾಲರಾದ ರಶ್ಮಿ, ಶಿಕ್ಷಕರಾದ ಬಿಂದು, ತೇಜಸ್ವಿನಿ, ಕುಲ್ಸುಮ್ ಮತ್ತು ಸಿಬ್ಬಂದಿ, ಸಾರ್ವಜನಿಕರು ಇದ್ದರು.
ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…
ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…
ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…
ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…
ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಮೋಡ…