ಚಳಿಗಾಲದಲ್ಲಿ ಮೌನ ಚರ್ಮ ಹಾನಿ: ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಅಪಾಯ – ವೈದ್ಯರ ಎಚ್ಚರಿಕೆ

ಬೆಂಗಳೂರು , ವೈಟ್‌ ಫೀಲ್ದ್‌ – ಚಳಿಗಾಲವನ್ನು ಆರಾಮದಾಯಕ ಋತುವೆಂದು ಭಾವಿಸಿದರೂ, ವೈದ್ಯರ ಪ್ರಕಾರ ಚಳಿಯ ವಾತಾವರಣವು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಚರ್ಮಕ್ಕೆ ಮೌನವಾಗಿ ಹಾನಿ ಉಂಟುಮಾಡಬಹುದು. ಈ ಸಮಸ್ಯೆಗಳು ನಿಧಾನವಾಗಿ ಜಾಸ್ತಿಯಾಗುತ್ತಾ, ಗಂಭೀರ ಹಂತಕ್ಕೆ ಬಂದಾದ ಮಾತ್ರ ಗಮನಕ್ಕೆ ಬರುತ್ತವೆ.

ಮೆಡಿಕವರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ರಜಿತಾ ಅಲ್ಲೂರಿ ಅವರ ಪ್ರಕಾರ, ಕಡಿಮೆ ತೇವಾಂಶ , ತಂಪಾದ ಗಾಳಿ, ಹೆಚ್ಚು ಬಿಸಿ ನೀರಿನ ಸ್ನಾನ, ರೂಮ್ ಹೀಟರ್ ಮತ್ತು ಏರ್ ಕಂಡೀಷನರ್ ಬಳಕೆಯಿಂದ ಚರ್ಮದ ಸ್ವಾಭಾವಿಕ ರಕ್ಷಣಾ ಪದರವನ್ನು ದುರ್ಬಲಗೊಳಿಸುತ್ತವೆ. “ಸ್ವಲ್ಪ ಕಡಿತಾ , ಚರ್ಮದ ಬಿಳಿಚಿಕೊಳ್ಳುವುದು ಸಾಮಾನ್ಯವೆಂದು ನಿರ್ಲಕ್ಷಿಸಿದರೆ, ಇದು ಎಕ್ಸಿಮಾ, ಡರ್ಮಟೈಟಿಸ್, ಚರ್ಮದ ಸೋಂಕುಗಳು ಮತ್ತು ಬಿರುಕುಗಳಿಗೆ ಕಾರಣವಾಗಬಹುದು,” ಎಂದು ಅವರು ಎಚ್ಚರಿಸುತ್ತಾರೆ.

ವೈದ್ಯರ ಪ್ರಕಾರ, ಚಳಿಗಾಲದಲ್ಲಿ ವಯಸ್ಕರಿಗಿಂತ ಮಕ್ಕಳ ಚರ್ಮ ಹೆಚ್ಚು ವೇಗವಾಗಿ ಹಾನಿಗೊಳಗಾಗುತ್ತದೆ. ಮಕ್ಕಳ ತಜ್ಞೆ ಡಾ. ಲಿನತಾ ರೆಡ್ಡಿ ಅವರ ಪ್ರಕಾರ, ಮಕ್ಕಳ ಚರ್ಮದ ರಕ್ಷಣಾ ಪದರ ತೆಳುವಾಗಿದ್ದು, ಬೇಗ ತೇವಾಂಶ ಕಳೆದುಕೊಳ್ಳುತ್ತದೆ. “ಮಕ್ಕಳಲ್ಲಿ ಚರ್ಮ ಒಣಗುವುದು ಸಹಜವೆಂದು ಪೋಷಕರು ತಡ ಮಾಡುತ್ತಾರೆ. ಆದರೆ ಚಿಕಿತ್ಸೆ ಇಲ್ಲದೆ ಬಿಟ್ಟರೆ ಇದು ಸೋಂಕುಗಳು, ತುಟಿಗಳ ಬಿರುಕುಗಳು ಮತ್ತು ಅಲರ್ಜಿಕ್ ಸಮಸ್ಯೆಗಳ ತೀವ್ರತೆಗೆ ಕಾರಣವಾಗಬಹುದು,” ಎಂದು ಅವರು ತಿಳಿಸಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು ತಂಪಾದ ವಾತಾವರಣ, ಡ್ರೈ ತರಗತಿಗಳು, ಪದೇಪದೇ ಕೈ ತೊಳೆಯುವುದು ಹಾಗೂ ತೀವ್ರ ಸಾಬೂನು-ಸ್ಯಾನಿಟೈಸರ್ ಬಳಕೆ ಕಾರಣದಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಶಿಶುಗಳು ಮತ್ತು ಪುಟ್ಟ ಮಕ್ಕಳು ಇನ್ನಷ್ಟು ಸಂವೇದನಾಶೀಲರಾಗಿರುತ್ತಾರೆ.

ವೈದ್ಯರು ನಿಯಮಿತ ಮಾಯಿಶ್ಚರೈಸರ್ ಬಳಕೆ, ಬಿಸಿ ನೀರಿನ ಸ್ನಾನವನ್ನು ನಿಯಂತ್ರಿಸುವುದು, ಮೃದುವಾದ ಕ್ಲೆನ್ಸರ್, ಸಾಕಷ್ಟು ನೀರು ಸೇವನೆ ಮತ್ತು ಆರಂಭದಲ್ಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯವೆಂದು ಸಲಹೆ ನೀಡುತ್ತಾರೆ.

Ramesh Babu

Journalist

Recent Posts

ವಿ. ಶಾಂತಕುಮಾರ್ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿ. ಶಾಂತಕುಮಾರ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಾಂಗ್ರೆಸ್…

13 minutes ago

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ದರ್ಗಾಜೋಗಿಹಳ್ಳಿ ಸಮೀಪದ ಹೋಟೆಲ್ ನಲ್ಲಿ…

1 hour ago

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್: ಏ.1ರಿಂದ ನೋಂದಣಿ: ಮೇ.9, 10ಕ್ಕೆ ಕ್ರಿಕೆಟ್ ಟೂರ್ನಮೆಂಟ್

ಡಿಪಿಎಲ್ ಸೀಸನ್-1  ದೊಡ್ಡಬಳ್ಳಾಪುರ ಪ್ರೀಮಿಯರ್ ಲೀಗ್ ಶಾರ್ಟ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ನ್ನು ಮೇ.9 ಮತ್ತು 10ರಂದು ಆಯೋಜನೆ ಮಾಡಲಾಗಿದೆ...…

1 hour ago

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ…..

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ..... ಕನ್ನಡ ತಾಯಿ…

5 hours ago

ಮಹಾವೀರ ಜಯಂತಿ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಇಂದು ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಅದೇರೀತಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ…

16 hours ago

ನಾನು ಯಾರ ಜಮೀನು ಕಬಳಿಕೆ‌ ಮಾಡಿಲ್ಲ- ಕಾನೂನಾತ್ಮಕವಾಗಿ ಜಮೀನು ಖರೀದಿ ಮಾಡಿದ್ದೇನೆ- ನನ್ನ ಏಳಿಗೆ ಸಹಿಸದವರಿಂದ ನನ್ನ ಮೇಲೆ ಹಲ್ಲೆ ನಡೆದಿದೆ- ಕಾನೂನು ಹೋರಾಟ ಮಾಡಿ ಗೆಲ್ಲುವೆ- ವಕೀಲ ಪ್ರತಾಪ್

ನಾನು ವೃತ್ತಿಯಲ್ಲಿ ವಕೀಲನಾಗಿದ್ದೇನೆ. ವಕೀಲ ವೃತ್ತಿಯಲ್ಲಿ ಬಂದಂತಹ ಹಣದಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ದಡಘಟ್ಟಮಡಗು ಸಮೀಪ ಸರ್ವೇ ನಂ…

17 hours ago