ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಹ್ಯಾಂಡ್ ಬ್ರೇಕ್ ಸುಟ್ಟಹೋದ ಹಿನ್ನೆಲೆ ಡ್ರೈವರ್ ಇಲ್ಲದೇ ಜನರೆಡೆಗೆ ನುಗ್ಗಿದ ಕಾರು: ದಿಕ್ಕಾಪಾಲಾಗಿ ಓಡಿದ ವಾಹನ‌ ಸವಾರರು

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಡ್ರೈವರ್ ಕಾರಿನಿಂದ ಇಳಿದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ. ಆದರೆ, ಕಾರು ಚಲನೆಯಲ್ಲಿತ್ತು. ಈ ಘಟನೆ ಎಲಿವೇಟೆಡ್ ರಸ್ತೆಯಲ್ಲಿ ಅಜ್ಮೀರ್‌ನಿಂದ ಸೋದಲಾಲ ಕಡೆಗೆ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಎಂಜಿ ಹೆಕ್ಟರ್ ಕಾರು ಬೆಂಕಿಗೆ ಆಹುತಿಯಾಗಿದೆ. ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದವು, ಚಲಿಸುತ್ತಿದ್ದ ವಾಹನಗಳ ಮಧ್ಯೆ ಈ ಬೆಂಕಿ ಹೊತ್ತಿಕೊಂಡಿದ್ದ ಕಾರು ನುಗ್ಗಿತ್ತು. ಆಗ ವಾಹನ ಸವಾರರು ಕೆಲಕಾಲ ಭಯಪಟ್ಟು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಬಿಟ್ಟು ಓಡಿಹೋದರು.‌ ಸುಟ್ಟು ಕರಕಲಾಗಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೊನೆಗೆ ನಿಂತಿತು. ರಸ್ತೆಯಲ್ಲಿ ಸಂಚಾರ ದಟ್ಟಣೆ ಇದ್ದರೂ ಯಾರಿಗೂ ಗಾಯಗಳಾಗಿಲ್ಲ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು.

ಮಾನಸ ಸರೋವರದ ಪತ್ರಾಕರ್ ಕಾಲೋನಿಯಲ್ಲಿರುವ ದಿವ್ಯ ದರ್ಶನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಜಿತೇಂದ್ರ ಜಂಗಿದ್ ಕಾರನ್ನು ಚಲಾಯಿಸುತ್ತಿದ್ದರು. ಜಿತೇಂದ್ರ ಅವರು 2021 ರಲ್ಲಿ ಕಾರನ್ನು ಖರೀದಿಸಿದರು.

ಎಲಿವೇಟೆಡ್ ರಸ್ತೆಯಿಂದ ಇಳಿಯುವಾಗ‌ ಎಸಿಯಿಂದ ಹೊಗೆ ಬರಲು ಪ್ರಾರಂಭಿಸಿತು. ನನ್ನ ಅಣ್ಣನಿಗೆ ಫೋನ್ ಮಾಡಿದಾಗ ಕಾರಿನ ಬಾನೆಟ್ ತೆರೆದು ನೋಡುವಂತೆ ಹೇಳಿದರು. ಕಾರಿನಿಂದ ಇಳಿದು ಬಾನೆಟ್ ತೆರೆದಾಗ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಜನ ಜಮಾಯಿಸಿದರು. ಕಾರಿನಲ್ಲಿ ವೈರಿಂಗ್ ಸುಟ್ಟುಹೋದಾಗ ಹ್ಯಾಂಡ್ ಬ್ರೇಕ್ ಹಾಕಲು ಆಗಲಿಲ್ಲ. ನಾಲ್ಕೂ ಕಿಟಕಿಗಳನ್ನು ತೆರೆದು ಕೆಳಗೆ ಇಳಿಯುವಷ್ಟರಲ್ಲಿ ಬಾನೆಟ್ ನಿಂದ ಬೆಂಕಿ ಹೊತ್ತಿಕೊಂಡಿತು.  ಸುತ್ತಲೂ ಜನ ಜಮಾಯಿಸಿದರು. ಅಷ್ಟರಲ್ಲಿ ಯಾರೋ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬೆಂಕಿಯ ರಭಸಕ್ಕೆ ವೈರಿಂಗ್ ಸುಟ್ಟು ಬೂದಿಯಾಗಿದ್ದು, ಕಾರಿನ ಒಂದು ಟೈರ್ ಕೂಡ ಸಿಡಿದಿದೆ ಎಂದು ಕಾರಿನ ಚಾಲಕ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!