ಬೆಂಗಳೂರು ನಗರಕ್ಕೆ ತೀರ ಸಮೀಪವಿರುವ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಭ್ರಹ್ಮಣ್ಯ ಕ್ಷೇತ್ರ. ಇದೇ ಕ್ಷೇತ್ರಕ್ಕೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು, ಪ್ರವಾಸಿಗರು ಬಂದು ದರ್ಶನ ಮಾಡಿ, ಇದೇ ಕ್ಷೇತ್ರದ ಬಳಿ ಸುಂದರ ಪಿಕಪ್ ಡ್ಯಾಂ….. ತುಂಬಿ ಜರಿ ಜರಿಯಾಗಿ ಜಲಪಾತದ ರೀತಿಯಲ್ಲಿ ಬಿಳ್ತಿರೋ ಡ್ಯಾಂ ಬಳಿ ಪ್ರವಾಸಿಗರ ದಂಡೇ ಬರುತ್ತದೆ….. ಇಲ್ಲಿ ಕೆಲಕಾಲ ಪ್ರಕೃತಿಯನ್ನು ಸವಿದು ಪ್ರವಾಸಿಗರು ಎಂಜಾಯ್ ಮಾಡುತ್ತಾರೆ. ಕೆಲವರು ಏಕಾಂತದಲ್ಲಿರಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಇತ್ತೀಚೆಗೆ ಇಲ್ಲಿ ಸುಲಿಗೆ ಮಾಡುವ ಪೋಕರಿಗಳ ಗ್ಯಾಂಗ್ ಹುಟ್ಟಿಕೊಂಡಿದೆ. ಹೀಗೆ ಡ್ಯಾಂಗೆ ಬರೋ ಪ್ರೇಮಿಗಳು ಹಾಗೂ ನವ ದಂಪತಿಗಳ ಬಳಿ ಸುಲಿಗೆ ಮಾಡವ ಯತ್ನಗಳು ನಡೆಯುತ್ತಿವೆ.
ಡ್ಯಾಂ ನೋಡುವ ಸಲುವಾಗಿ ಕಳೆದ ವಾರದ ಹಿಂದೆ ಭಾವಿ ದಂಪತಿ ಬಂದಿದ್ದರು. ಅವರು ಏಕಾಂತದಲ್ಲಿದ್ದಿದ್ದನ್ನು ಗಮನಿಸಿದ ಸುಲಿಗೆಕೋರರು, ಅವರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡಿ ಎಸ್ಕೆಪ್ ಆಗಿದ್ದಾರೆ. ಇದೀಗ ದೊಡ್ಡಬಳ್ಳಾಫುರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ. ಇಂತಹ ಘಟನೆಗಳಿಂದ ಇಲ್ಲಿಗೆ ಬರೋ ಪ್ರವಾಸಿಗರು ಆತಂಕದಲ್ಲಿದ್ದಾರೆ.
ಅಂದಹಾಗೆ ಡ್ಯಾಂ ನೋಡಲು ಈ ಹಿಂದೆ ಬಂದಿದ್ದ ಪ್ರೇಮಿಗಳು ಮರ ಗಿಡಗಳ ಕೆಳಗೆ ಇದ್ದಾಗ ಬೆದರಿಸಿ ಹಣ ಸೇರಿದಂತೆ ಚಿನ್ನಾಭರಣವನ್ನ ಖದೀಮರು ದೋಚಿ ಎಸ್ಕೆಪ್ ಆಗಿದ್ದರು. ಜೊತೆಗೆ ಕಳೆದ ವಾರ ನವದಂಪತಿ ಬಂದಾಗ ಹೊಂಚು ಹಾಕಿದ್ದ ಖದೀಮರು ಜೋಡಿಯ ಬಳಿ ದರೋಡೆ ಮಾಡಿ ಓಡಿ ಹೋಗಿದ್ದರು. ಇದೀಗ ಪೊಲೀಸರು ಡ್ಯಾಂ ಬಳಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಅಕ್ರಂ ಪಾಷ, ನಜೀರ್ ಮತ್ತು ಜಮೀರ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಮೂವರು ಆರೋಪಿಗಳಿಂದ ಚಿನ್ನದ ಸರ, ಒಂದು ಬೈಕ್, ಉಂಗುರ ಮತ್ತು ಗೋಗಲ್ ಪೇ ಮಾಡಿಸಿಕೊಂಡಿದ್ದ 60 ಸಾವಿರ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯಿಂದಾಗಿ ಡ್ಯಾಂ ಬಳಿ ಒಂಟಿ ಒಂಟಿಯಾಗಿ ಪ್ರವಾಸಿಗರು ಬರಲು ಎದುರುತ್ತಿದ್ದಾರೆ. ಮಳೆಯಿಂದಾಗಿ ಸುಂದರ ಜರಿ ಜರಿ ಜಲಪಾತ ನೋಡಲು ಬರೋ ಪ್ರವಾಸಿಗರು ಖದೀಮರ ಆತಂಕದಲ್ಲಿದ್ದು, ಡ್ಯಾಂ ಬಳಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡುವಂತೆ ಮನವಿ ಮಾಡಿದ್ದಾರೆ.
ಒಟ್ಟಾರೆ, ಘಾಟಿ ಸುಬ್ರಹ್ಮಣ್ಯದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ಬಳಿ ಪ್ರೇಮಿಗಳು , ನವದಂಪತಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದವರು ಇದೀಗ ಜೈಲು ಕಂಬಿ ಎಣೆಸುತ್ತಿದ್ದಾರೆ. ಮಳೆಯಿಂದಾಗಿ ಡ್ಯಾಂ ತುಂಬಿ ಸುಂದರ ಜಲಪಾತ ಸೃಷ್ಟಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸಲಿದೆ. ಈ ನಿಟ್ಟಿನಲ್ಲಿ ಡ್ಯಾಂ ಬಳಿ ಪೊಲೀಸರನ್ನ ನಿಯೋಜನೆ ಮಾಡಿದರೆ ಒಳ್ಳೆಯದು ಅನ್ನೋದು ಇಲ್ಲಿಗೆ ಬರೋ ಪ್ರವಾಸಿಗರ ಮಾತಾಗಿದೆ.
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…