ಗೋಮಯ ಗಣೇಶ: ಸಂಪೂರ್ಣ ಗೋವಿನ(ಹಸು) ಸಗಣಿಯಿಂದಲೇ ಗಣಪತಿ ತಯಾರಿ: ಅದು ಎಲ್ಲಿ ತಯಾರಿ ಆಗುತ್ತೆ, ಇದರ ಉಪಯೋಗ ಏನು ಅಂತೀರಾ….? ಇಲ್ಲಿದೆ ಮಾಹಿತಿ‌ ಓದಿ……

ಗೌರಿ ಗಣೇಶ ಹಬ್ಬಕ್ಕೆ‌ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಮನೆಯಲ್ಲಿ ಗಣೇಶ ಕೂರಿಸಲು ಈಗಾಗಲೇ ಎಲ್ಲಾ‌ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಅದರಲ್ಲೂ ಪಿಓಪಿ ಗಣೇಶ ಹೊರತುಪಡಿಸಿ ಮಣ್ಣಿನ ಗಣೇಶ ಸೇರಿ ಪರಿಸರ ಸ್ನೇಹಿ ಗಣಪತಿ ಕಡೆಗೆ ಜನ ಮನಸ್ಸು ಮಾಡುತ್ತಿದ್ದಾರೆ.

ಈ ಹಿನ್ನೆಲೆ ಮಾರುಕಟ್ಟೆಗೆ ಸಗಣಿ ಗಣಪ ಎಂಟ್ರಿ ಕೊಟ್ಟಿದ್ದು, ಜನ ಈ ಗಣೇಶ ಕೊಳ್ಳಲು ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಏನಿದು ಸಗಣಿ ಗಣಪ, ಇದು ಸಿಗುವುದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ……………

ಹಸುವಿನ ಸಗಣಿಯಿಂದ ಮಾಡಿದ ಗಣೇಶನ ವಿಗ್ರಹವೇ ಗೋಮಯ ಗಣೇಶ. ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ ಮತ್ತು ಯಾವುದೇ ರಾಸಾಯನಿಕ ಬಣ್ಣಗಳನ್ನು ಅಥವಾ ವಸ್ತುಗಳನ್ನು ಬಳಸುವುದಿಲ್ಲ. ಇದು ಪರಿಸರ ಸ್ನೇಹಿ ಮತ್ತು ನೈಸರ್ಗಿಕ ವಸ್ತುವಿನಿಂದ ತಯಾರಿಸಲ್ಪಟ್ಟಿರುವುದರಿಂದ ಪೂಜೆಯ ನಂತರ ಸುಲಭವಾಗಿ ಮಣ್ಣಿನಲ್ಲಿ ಕರಗಿ ಹೋಗುತ್ತದೆ. ನಂತರ ಗೊಬ್ಬರವಾಗಿ ಬಳಸಬಹುದು. ಇದು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ಪೂಜೆಗೆ ಸೂಕ್ತವಾದ ವಸ್ತುವಾಗಿದೆ.

ಕೆಲವರು ಗೋಮಯ ಗಣೇಶನ ವಿಗ್ರಹವು ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬುತ್ತಾರೆ.

ಹಸುವಿನ ಸಗಣಿಯಲ್ಲಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ, ಗೋಮಯ ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ಗೋಮಯ ಗಣೇಶನ ವಿಗ್ರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಹೌದು, ಸಗಣಿ ಮುದ್ದೆಯಿಂದ ಗಣೇಶನ ಪ್ರತಿಮೆ ಮಾಡುತ್ತಿರುವ ಮಹಿಳೆಯರು, ಗಣಪನಿಗೆ ಹಸುವಿನ ಗಂಜಲದಿಂದ ಲೇಪನ ಮಾಡುತ್ತಿರುವ ವ್ಯಕ್ತಿ, ಉಜ್ಜುವ ವಸ್ತುವಿನಿಂದ ಗಣಪನಿಗೆ ಫೈನಲ್ ಟಚ್ ಕೊಡುತ್ತಿರುವ ಕೆಲಸಗಾರ,. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ.

ಗೋಶಾಲೆಯಲ್ಲಿರುವ ನೂರಾರು ಗೋವುಗಳ(ಹಸುಗಳ) ಸಗಣಿಯನ್ನು ಒಣಗಿಸಿ ಪುಡಿ ಮಾಡಿದ ನಂತರ, ಗಮ್ ರೀತಿಯ ವಸ್ತುವನ್ನ ಬಳಸಿ, ಒಂದು ರೀತಿಯ ಮುದ್ದೆ ಆಕಾರದಲ್ಲಿ ಅದನ್ನ ತಯಾರಿಸಿ, ಗಣೇಶ ಆಕೃತಿಯ ಅಚ್ಚುಗಳಿಗೆ ಸಗಣಿ ಹಾಕಲಾಗುತ್ತದೆ. ನಂತರ ಕೈಯಿಂದ ಸಂಪೂರ್ಣವಾಗಿ ಅವುಗಳನ್ನು ಆಕಾರ ಮಾಡಿ, ನಂತರ ಗಂಜಲದಿಂದ ಲೇಪನ ಮಾಡುತ್ತಾರೆ. ಎರಡು ಮೂರು ದಿನ ಒಣಗಿ ನಂತರ ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣವನ್ನ ಮಾಡುತ್ತಾರೆ.

ಹೀಗೆ ಸಂಪೂರ್ಣ ವಾಗಿ ಸಗಣಿಯಿಂದ ಮಾಡುವ ಗಣಪನಿಗೆ ಬಾರಿ ಬೇಡಿಕೆ ಇದೆ. ಇವುಗಳು ಮನೆಯಲ್ಲಿ ಇಡಲು ತುಂಬಾ ಅನುಕೂಲ. ಅರ್ಧ ಅಡಿಯಿಂದ ಹಿಡಿದು ಒಂದು ಅಡಿಯವರೆಗೆ ಸಗಣಿ ಗಣಪತಿ ಸಿಗುತ್ತವೆ. ಹಣದಲ್ಲೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ಗಣಪನ ಬೆಲೆ 300 ರಿಂದ 1 ಸಾವಿರ ಅಂತಿಮ‌. ಹಾಗಾಗಿ ಅತೀ ದುಬಾರಿಯೂ ಅಲ್ಲ, ಜೊತೆಗೆ ಸಾಗಣೆ ಮಾಡಲು ಬಹಳ ಕಡಿಮೆ ತೂಕ.

ಗಣೇಶ ಹಬ್ಬದ ನಂತರ ವಿಸರ್ಜನೆ ಮಾಡಲು ಕೂಡ ತುಂಬಾ ಸುಲಭ. ಅಲ್ಲದೆ ಯಾವುದೇ ರೀತಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಇದು ನೀರಿಗೆ ಹಾಕಿದ ಕೂಡಲೇ ಕರಿಗೆ ಹೋಗುತ್ತದೆ. ನಂತರ ಗೊಬ್ಬರವಾಗಿ ಕೂಡ ಪರಿವರ್ತನೆ ಆಗುತ್ತದೆ.

ಹಾಗಾಗಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬರುವವರು ಈಗಾಗಲೇ ಗಣಪತಿಯನ್ನ ಬುಕ್ ಮಾಡಿಕೊಂಡು ಹೋಗಿದ್ದಾರೆ. ಪ್ರಮುಖವಾಗಿ ಯಾವುದೇ ಗಣಪತಿ ಕೊಂಡರೂ, ಅದರ ಪಕ್ಕದಲ್ಲಿ ಸಗಣಿಯಿಂದ ಮಾಡಿದ ಬೆನಕ ಇಡುವುದು ವಾಡಿಕೆ. ಹಾಗಾಗಿ ಸಗಣಿ ಗಣಪನನ್ನೇ ತೆಗೆದುಕೊಂಡು ಹೋದರೆ ಇನ್ನೂ ಅನುಕೂಲ ಎಂಬುದು ಜನರ ನಂಬಿಕೆ.

ಒಟ್ಟಾರೆ ಮಾರುಕಟ್ಟೆಗೆ ಈಗಾಗಲೇ ಪಿಓಪಿ, ಮಣ್ಣಿನ ಗಣಪ ಎಂಟ್ರಿ ಆಗಿದ್ದು, ಜನ ಸಗಣಿ ಗಣಪನನ್ನ ನೋಡಿ ಆಶ್ಚರ್ಯ ಪಡುವುದಂತೂ ಸತ್ಯ.  ಸಗಣಿ ಗಣಪನ್ನ ಕೂರಿಸುವ ಮೂಲಕ ಪರಿಸರ ಸ್ನೇಹಿ ಆಗಲಿ ಎಂಬುದು ನಮ್ಮ ಆಶಯ…

Ramesh Babu

Journalist

Recent Posts

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಸಮಸ್ಯೆ ಉಂಟಾದಲ್ಲಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ- ಡಿಸಿ ಡಾ. ಕೆ.ಎನ್ ಅನುರಾಧ

ಜಿಲ್ಲೆಯಾದ್ಯಂತ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಳು ಕಂಡು ಬಂದಲ್ಲಿ ತಾಲ್ಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ…

28 minutes ago

ಶೀಘ್ರದಲ್ಲೇ ಹೋಟೆಲ್ ಗಳಿಗೂ ಅಡಿಗೆ ಅನಿಲ ಪೂರೈಕೆ – ಆಹಾರ ಸಚಿವ ಕೆ ಎಚ್ ಮುನಿಯಪ್ಪ‌

ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲದೆ ಸರಬರಾಜು ನಿಯಮಿತವಾಗಿ ನಡೆಯುತ್ತಿದೆ. ಕೆಲವೆಡೆ ಜನರು ಪ್ಯಾನಿಕ್‌ನಿಂದ ಅಗತ್ಯಕ್ಕಿಂತ ಹೆಚ್ಚು ಬುಕ್ಕಿಂಗ್ ಮಾಡುತ್ತಿರುವುದರಿಂದ…

5 hours ago

‘ಪ್ರಸಾದ್ 2.0’ (PRASHAD 2.0) ಯೋಜನೆಯಡಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿ ವಿಚಾರ: ಶ್ರೀ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್.ವಿ ಮಹೇಶ್ ಕುಮಾರ್ ಸಂತಸ

ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಡಾ.ಕೆ.ಸುಧಾಕರ್ ಭೇಟಿ ಮಾಡಿ, 'ಪ್ರಸಾದ್ 2.0'…

5 hours ago

ರೀಲ್ಸ್ ಮಾಡುವ ಮಹಿಳೆಯರ ಜೊತೆ ರೀಲ್ಸ್ ಮಂಜಣ್ಣ ಹೆಲ್ಮೆಟ್ ಇಲ್ಲದೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್: ಸಾಮಾಜಿಕ‌ ಜಾಲತಣದಲ್ಲಿ ವಿಡಿಯೋ ಪೋಸ್ಟ್: ಪೊಲೀಸರಿಂದ ಬಿತ್ತು ಫೈನ್: ಕೊನೆಗೆ ಫೈನ್ ಕಟ್ಟಿ ಕ್ಷಮೆಯಾಚನೆ

ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ, ವಿಕಾರವಾಗಿ ರೀಲ್ಸ್ ಮಾಡುತ್ತಿದ್ದ ರೀಲ್ಸ್ ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜ ಬೈಕ್ ನಲ್ಲಿ ತ್ರಿಬಲ್ ರೈಡ್…

13 hours ago

ಆನ್ ಲೈನ್ ನಲ್ಲಿ ಒಂದು ರೂ. ಗೆ ಹಾಲು ಮಾರಾಟ: ಪ್ರಾಂತ ರೈತ ಸಂಘ ಆಕ್ರೋಶ: ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೋಲಾರ: ಅಮೆಜಾನ್‌ ಸಹಭಾಗಿತ್ವದ ಫ್ಲಿಪ್ ಕಾರ್ಟ್ ನಲ್ಲಿ ಲೀಟರ್ ಹಾಲನ್ನು ಒಂದು ರೂ. ಗೆ ಮಾರಾಟದ ಅವಕಾಶ ಕಲ್ಪಿಸಿರುವುದು ಅತ್ಯಂತ…

1 day ago