ಕೌಟುಂಬಿಕ ಕಲಹ ಹಿನ್ನೆಲೆ..?: ಕೃಷಿ ಹೊಂಡಕ್ಕೆ ಹಾರಿ ಗೃಹಣಿ ಆತ್ಮಹತ್ಯೆ

ಕೋಲಾರ: ಕೌಟುಂಬಿಕ ಕಲಹ ಹಿನ್ನೆಲೆ, ಕೃಷಿ ಹೊಂಡಕ್ಕೆ ಹಾರಿ ಗೃಹಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊಡಿಚೆರುವು ಗ್ರಾಮದಲ್ಲಿ ನಡೆದಿದೆ.

ಕೊಡಿಚೆರುವು ಗ್ರಾಮದ ನಿವಾಸಿ ವರಲಕ್ಷ್ಮಿ (35) ಮೃತ ಮಹಿಳೆ.

ಗ್ರಾಮದ ಹೊರಲವಲಯದ ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆಯಾಗಿದೆ.

ಕೌಟುಂಬಿಕ ಕಲಹದಿಂದ ಕೃಷಿಹೊಂಡಕ್ಕೆ ಬಿದ್ದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆವ್ಯಕ್ತವಾಗಿದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Leave a Reply

Your email address will not be published. Required fields are marked *