ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಮುಂದುವರಿದ ಚಿರತೆ ಅಟ್ಟಹಾಸ: ಇಂದು ಸಂಜೆ ಮತ್ತೊಂದು ಕುರಿ ಮೇಲೆ ದಾಳಿ ನಡೆಸಿದ ಚಿರತೆ

ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿಯಲ್ಲಿ ಚಿರತೆ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿಯಷ್ಟೇ ಚಿರತೆ ಊರಿಗೆ ಲಗ್ಗೆ ಇಟ್ಟು ಕೊಟ್ಟಿಗೆಯಲ್ಲಿದ್ದ ಸುಮಾರು 9 ಕುರಿಗಳ ಮೇಲೆ ದಾಳಿ ನಡೆಸಿ 4 ಕುರಿಗಳನ್ನು ಬಲಿ ಪಡೆದಿತ್ತು. ಇದೀಗ ಇಂದು ಸಂಜೆ ಮತ್ತೊಂದು ಕುರಿ ಮೇಲೆ ದಾಳಿ ನಡೆಸಿ ಗಾಯಪಡಿಸಿದೆ.

ರೈತ ಮಹಿಳೆ ರಾಧಮ್ಮ ಎನ್ನುವವರು ತಮ್ಮ ಹೊಲದ ಬಳಿ ಕುರಿಗಳನ್ನು ಮೇಯಲು ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮಧ್ಯಾಹ್ನ ಸುಮಾರು 3:30ರಲ್ಲಿ ಕುರಿಗಳ ಮೇಲೆ ಚಿರತೆ ಎರಗಿ ಒಂದು ಕುರಿಯನ್ನು ಎಳೆದೊಯ್ಯುತ್ತಿದ್ದ ದೃಶ್ಯ ರಾಧಮ್ಮ ಕಣ್ಣಿಗೆ ಬಿದ್ದಿದೆ. ಕೂಡಲೇ ತನ್ನ ಕುರಿಯನ್ನು ರಕ್ಷಿಸಲು ಹೋದಾಗ ರಾಧಮ್ಮ ಮೇಲೆಯೂ ದಾಳಿ ನಡೆಸಲು ಚಿರತೆ ಮುಂದಾಗಿದೆ. ರಾಧಮ್ಮ ಜೋರಾಗಿ ಚೀರಾಡಿದಾಗ ಚಿರತೆ ಕುರಿಯನ್ನು ಗಾಯಪಡಿಸಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ.

ಚಿರತೆ ಅಟ್ಟಹಾಸವನ್ನು ಕಣ್ಣಾರೆ ಕಂಡ ರಾಧಮ್ಮ, ಭಯಭೀತರಾಗಿ, ಜ್ವರ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ.

ಈ ವೇಳೆ ರಾಧಮ್ಮ ಗಂಡ ಯಲ್ಲಪ್ಪ ಮಾತಾಡಿ, ನಮ್ಮೂರಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ನನ್ನ ಮಡದಿ ಚಿರತೆಯನ್ನು ನೋಡಿದ ಕಾರಣ ಜ್ವರ ಬಂದು ಮಲಗಿದ್ದಾರೆ. ನಮ್ಮ ಕುರಿಯ ಕುತ್ತಿಗೆ, ಕಾಲುಗಳಿಗೆ ಕಚ್ಚಿ ಗಾಯಪಡಿಸಿದೆ. ತೀವ್ರವಾಗಿ ಗಾಯಗೊಂಡಿರುವ ಕುರಿ ಬದುಕುಳಿಯುವುದು ತುಂಬಾ ಕಷ್ಟ. ನಮಗಾಗಿರುವ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಹೇಳಿದ್ದಾರೆ.

ನಂತರ ಗ್ರಾಮದ ಯುವಕ ರವಿಕುಮಾರ್ ಮಾತನಾಡಿ, ಕೊಟ್ಟಿಗೆಮಾಚೇನಹಳ್ಳಿ ಗ್ರಾಮ ಚಿರತೆ ಹಾವಳಿಯಿಂದ ನಲಗುತ್ತಿದೆ. ನಿನ್ನೆ ರಾತ್ರಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿವೆ. ಐದು ಕುರಿಗಳಿಗೆ ಗಾಯಗಳಾಗಿವೆ. ಐದು ಕುರಿಗಳಲ್ಲಿ ಮೂರು ಕುರಿಗಳು ಬದುಕುಳಿಯುವುದು ಕಷ್ಟ. ಇದೀಗ ಇಂದು ಮಧ್ಯಾಹ್ನ ಹಾಡಹಗಲೇ ಮತ್ತೊಂದು ಕುರಿಯ ಮೇಲೆ ದಾಳಿ ನಡೆಸಿದೆ. ಚಿರತೆಯಿಂದ ಮನುಷ್ಯರಿಗೆ ಅನಾಹುತ ಆಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ನಮ್ಮ ಊರಿನಲ್ಲಿ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ…..

ನಂತರ ಯುವಕ ಲಕ್ಷ್ಮೀಪತಿ ಮಾತನಾಡಿ, ಚಿರತೆ ಸೆರೆಹಿಡಿಯುವಂತೆ ಸಾಕಷ್ಟು ಬಾರಿ ಅರಣ್ಯ ಇಲಾಖೆಯಲ್ಲಿ ಮನವಿ ಮಾಡಿದರೂ ಯಾವ ಉಪಯೋಗವಾಗಿಲ್ಲ. ಬೋನ್ ಇರಿಸಲು ಅರಣ್ಯ ಇಲಾಖೆಗೆ ರೈತರು ಅರ್ಜಿ ಕೊಡಬೇಕಂತೆ‌. ಅರ್ಜಿ‌ ಕೊಟ್ಟು ಬೋನ್ ತರಲು ವಾಹನವನ್ನು ರೈತರೇ ಒದಗಿಸಬೇಕಂತೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಏನೇನೋ ರೂಲ್ಸ್ ರೆಗ್ಯುಲೇಷನ್ ಹೇಳಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಿಸಿದರು.

Ramesh Babu

Journalist

Recent Posts

ಸೋನಂ ವಾಂಗ್ ಚುಕ್……

ಸೋನಂ ವಾಂಗ್ ಚುಕ್...... ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಿಂತ ಸೋನಂ ವಾಂಗ್ ಚುಕ್ ಅವರ ಜೀವ ಭಾರತೀಯರಿಗೆ…

20 hours ago

ರೈತರ ಜಮೀನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನೂ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.…

1 day ago

ಶಾಲೆ, ಅಂಗನವಾಡಿ ಮುಂಭಾಗವೇ ಕಸದ ರಾಶಿ; ದುರ್ವಾಸನೆಯ ನಡುವೆ ಪಾಠ ಕೇಳುವ ಮಕ್ಕಳು ಪಾಲನಜೋಗಿಹಳ್ಳಿ ಪ್ರವೇಶ ದ್ವಾರದಲ್ಲೇ ತ್ಯಾಜ್ಯ ರಾಶಿ – ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಪಾಲನಜೋಗಿಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಗ್ರಾಮ ಪ್ರವೇಶ…

1 day ago

ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ವಾಹನ ಡಿಕ್ಕಿ: ಚಾಲಕ ಸಾವು

ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ–44ರ ದೇವನಹಳ್ಳಿ ಬೈಪಾಸ್‌ನ ಕೆಂಪೇಗೌಡ ವೃತ್ತದ ಬಳಿ ಮುಂದೆ ಸಾಗುತ್ತಿದ್ದ ಕಂಟೈನರ್ ಲಾರಿಗೆ ಐಚರ್ ಸರಕು ಸಾಗಣೆ…

1 day ago

ಸೆಲೆಬ್ರಿಟಿ…………….

ಸೆಲೆಬ್ರಿಟಿ................ ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,…

2 days ago

ಎಲ್-ನಿನೋ ಪರಿಣಾಮ, ಮಳೆಯ ಕೊರತೆ, ತಾಪಮಾನದ ಏರಿಕೆ, ಒಣ ಹವಾಮಾನ ಹೆಚ್ಚಳ ಸಾಧ್ಯತೆ: ತೋಟಗಾರಿಕಾ ಬೆಳೆಗಳ ರಕ್ಷಣೆಗೆ ಇರಲಿ ಆದ್ಯತೆ

ಎಲ್-ನಿನೋ ಪರಿಣಾಮದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ, ತಾಪಮಾನದ ಏರಿಕೆ ಹಾಗೂ ಒಣ ಹವಾಮಾನ ಹೆಚ್ಚಾಗುವ ಸಾಧ್ಯತೆ ಇರುವ…

2 days ago